ಹೊಳೆಗಳಿದ್ದರೂ ಕುಡಿಯುವ ನೀರಿನ ಬವಣೆ ತಪ್ಪಿಲ್ಲ


Team Udayavani, Feb 17, 2019, 12:30 AM IST

1502kpt1e-1.jpg

ಕಟಪಾಡಿ: ಪಾಪನಾಶಿನಿ, ಪಿನಾಕಿನಿ ಹೊಳೆ ಹರಿಯುತ್ತಿದ್ದರೂ ಕಟಪಾಡಿ, ಕೋಟೆ, ಉದ್ಯಾವರ, ಕುರ್ಕಾಲು, ಮಣಿಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.  

ಈ ಹೊಳೆಗಳಲ್ಲಿ ಸಮುದ್ರದಿಂದ ಒಳನುಗ್ಗುವ ಉಪ್ಪುನೀರು ಇದ್ದು, ಪರಿಸರದಲ್ಲೂ ಸಿಹಿ ನೀರು ಅಲಭ್ಯತೆ ಇದೆ. ಸೂಕ್ತವಾದ ಸ್ಥಳಗಳಲ್ಲಿ ಅಣೆಕಟ್ಟು ನಿರ್ಮಿಸಿದಲ್ಲಿ ಶಾಶ್ವತವಾದ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂಬ ಜನಾಭಿಪ್ರಾಯಕ್ಕೂ ಮನ್ನಣೆ ಸಿಗದೆ ಯೋಜನೆಗಳು ಕಾರ್ಯರೂಪಕ್ಕಿಳಿಯುತ್ತಿಲ್ಲ. 

ಕಟಪಾಡಿ ಗ್ರಾ.ಪಂ. 
ಯೇಣಗುಡ್ಡೆ, ಮೂಡಬೆಟ್ಟು ಗ್ರಾಮಗಳನ್ನೊಳ ಗೊಂಡ ಕಟಪಾಡಿ ಗ್ರಾ.ಪಂ.ನಲ್ಲಿ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಪೂರೈಸುವುದು ಮಾಮೂಲಿಯಾಗಿದೆ.  ಬೇಸಗೆಯಲ್ಲಿ ಪಡುಏಣಗುಡ್ಡೆ, ಜೆ.ಎನ್‌.ನಗರ, ಕಜಕೊಡೆ, ನಾಯ್ಕರ ತೋಟ, ಚೊಕ್ಕಾಡಿ, ದುರ್ಗಾನಗರ, ಶಿವಾನಂದ ನಗರ, ವಿದ್ಯಾನಗರ, ಸರಕಾರಿಗುಡ್ಡೆ, ಪೊಸಾರ್‌ ಕಂಬಕಟ್ಟ, ಸಾಣತೋಟ, ಗೋಕುಲ ಪ್ರದೇಶಗಳು ನೀರಿನ ಸಮಸ್ಯೆ ಹೆಚ್ಚಾಗಿ ಕಾಡುವ ಭಾಗಗಳಾಗಿವೆ. ಇಲ್ಲೆಲ್ಲ ಟ್ಯಾಂಕರ್‌ ನೀರು ಪೂರೈಕೆಗೆ ಈಗ ಪಂಚಾಯತ್‌ ಸಿದ್ಧಗೊಳ್ಳುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ಎಸ್‌.ವಿ.ಎಸ್‌. ಶಾಲೆಯ ಬಳಿ ಕೊಳವೆ ಬಾವಿ ರಚಿಸಲಾಗಿದೆ. ಗರಡಿ ರಸ್ತೆ ಬಳಿ 1 ಕೊಳವೆ ಬಾವಿ ರಚಿಸಲಾಗಿದೆ. ಶಂಕರಪುರ ಎಸ್‌ ಸಿ ಕಾಲನಿಯಲ್ಲಿ ಕೊಳವೆ ಬಾವಿ ಹಾಗೂ ಟ್ಯಾಂಕ್‌ ರಚನೆ ಮಾಡಲಾಗಿದೆ. ಚೊಕ್ಕಾಡಿ ಪ್ರದೇಶಕ್ಕೆ ಕೊಳವೆ ಬಾವಿ, ಪೈಪ್‌ಲೈನ್‌ ವಿಸ್ತರಣೆ, ದುರ್ಗಾನಗರದಲ್ಲಿ ಹೆಚ್ಚುವರಿ ಕೊಳವೆ ಬಾವಿ ತೋಡಲಾಗಿದೆ. 

ಕೋಟೆ ಗ್ರಾ.ಪಂ.  
ಮಟ್ಟು ಮತ್ತು ಕೋಟೆ ಎಂಬ 2 ಗ್ರಾಮಗಳಿರುವ ಈ ಗ್ರಾ.ಪಂ.ನಲ್ಲಿ ಉಪ್ಪು ನೀರಿನ ಬಾಧೆ ಇದೆ. ಇಲ್ಲಿನ ಇಂದಿರಾ ನಗರ, ವಿನೋಬಾ ನಗರ, ಕೋಟೆ ಕಂಡಿಗೆ, ಕೋಟೆಬೆ„ಲ್‌, ಸಮಾಜ ಮಂದಿರ, ತೌಡಬೆಟ್ಟು, ಮದೀನಾ ಪಾರ್ಕ್‌, ಕಿನ್ನಿಗುಡ್ಡೆ, ಕೋಟೆಬೆ„ಲು, ಕಂಡಿಗೆ, ಪೂೆಂಕುದ್ರು ಭಾಗದಲ್ಲಿ  ಕಳೆದ ಬಾರಿ ಟ್ಯಾಂಕರ್‌ ನೀರು ಸರಬರಾಜಾಗಿತ್ತು. ಈ ಬಾರಿ ನೀರಿನ ಕೊರತೆ ತೀವ್ರವಾಗಿದೆ.

ಉದ್ಯಾವರ ಗ್ರಾ.ಪಂ.  
ಈ ಭಾಗದಲ್ಲಿ ಗಡಸು ನೀರು ಲಭ್ಯವಾಗುತ್ತಿದ್ದು ಮನೆ ಬಳಕೆಗೆ ಉಪುೂàಗಿಸಿಲು ಅಡ್ಡಿಯಿಲ್ಲ. ಆದರೆ ಕುಡಿಯುವ ನೀರಿನ ಕೊರತೆ ಇದೆ. ಗುಡ್ಡೆಯಂಗಡಿಯಲ್ಲಿ ಪ.ಜಾತಿ ಕಾಲೊನಿಯಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ಹೊಸ ಟ್ಯಾಂಕ್‌ ನಿರ್ಮಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕವನ್ನೂ ನಿರ್ಮಿಸಲಾಗಿದೆ. ಮಠದಕುದ್ರುವಿನಲ್ಲಿ 4 ಲಕ್ಷ 50 ಸಾವಿರ ರೂ. ವೆಚ್ಚದಲ್ಲಿ ಪೈಪ್‌ಲೈನ್‌  ಕಾಮಗಾರಿಗಾಗಿ ಮಂಜೂರಾತಿಗೊಂಡಿದೆ. ಕುಜುಂಬಕುದ್ರು ಪ್ರದೇಶ ದಲ್ಲಿ ಪೈಪ್‌ಲೈನ್‌, ಪಿತ್ರೋಡಿಯಲ್ಲಿ ಹೊಸ ಬಾವಿ ರಚನೆ ಪ್ರಗತಿಯಲ್ಲಿದೆ. ಪಿತ್ರೋಡಿ, ಬೊಳೆjಯಲ್ಲಿ ನೀರು ಶುದ್ಧೀಕರಣ ಘಟಕ ಜಿ.ಪಂ. ಮತ್ತು ಗ್ರಾ.ಪಂ. ವತಿಯಿಂದ ಸ್ಥಾಪಿಸಲಾಗುತ್ತಿದೆ. 
 
ಮಣಿಪುರ ಗ್ರಾ.ಪಂ.  
ಮರ್ಣೆ ಮತ್ತು ಮಣಿಪುರ ಗ್ರಾಮವನ್ನೊಳ ಗೊಂಡ ಇಲ್ಲಿನ ಗ್ರಾ.ಪಂ.ನಲ್ಲಿ ಹೊಳೆಗೆ ಅಳವಡಿಸಲಾದ ಅಣೆಕಟ್ಟೆಯಿಂದಾಗಿ ತುಸು ಸಿಹಿನೀರು ಲಭ್ಯ. ಆದರೆ ಅದು ಹೆಚ್ಚು ಸುಸ್ಥಿತಿಯಲ್ಲಿಲ್ಲದೆ ಇರುವುದು ಸಮಸ್ಯೆಯಾಗಿದೆ. ಮಣಿಪುರ ವೆಸ್ಟ್‌, ಕೋಟೆ, ಗುಜ್ಜಿ, ದೇವಳ ಗುಜ್ಜಿ, ಕೊಡಂಗಳ, ಮರ್ಣೆ, ಪಟ್ಲ, ಫ್ರೆಂಡ್ಸ್‌ ಸರ್ಕಲ್‌ ಜಂಕ್ಷನ್‌ ಭಾಗಕ್ಕೆ ಹೆಚ್ಚು ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಕುಂತಳನಗರ ಕಲ್ಮಂಜೆ ಭಾಗದಲ್ಲಿ ಎಸ್‌.ಸಿ. ಮತ್ತು ಎಸ್‌.ಟಿ. ಕಾಲನಿಗೆ ಕುಡಿಯುವ ಶುದ್ಧ ನೀರಿನ ಘಟಕ ಮತ್ತು ಮಣಿಪುರದ ಮೂಡು ಕಲ್ಮಂಜೆ ಮತ್ತು ಮಣಿಪುರ ದೇವಳ ಗುಜ್ಜಿ ಭಾಗದಲ್ಲಿ ಶುದ್ಧೀಕರಣ ಘಟಕವನ್ನು ಅಳವಡಿಸಿಕೊಳ್ಳಲಾಗಿದೆ. 

ಕುರ್ಕಾಲು ಗ್ರಾ.ಪಂ.
ಈ ಗ್ರಾ.ಪಂ.ನ 2ನೇ ವಾರ್ಡು, 4, 5, 6 ನೇ ವಾರ್ಡುಗಳ ನಾಯ್ಕರ ತೋಟ, ಅಚ್ಚಡ, ಕುಂಜಾರುಗಿರಿ ಭಾಗದಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ. ಅದಕ್ಕಾಗಿ 4 ಬೋರ್‌ವೆಲ್‌, 8 ಬಾವಿಗಳ ನೀರನ್ನು ಬಳಸಿಕೊಂಡು 3 ಓವರ್‌ಹೆಡ್‌ ಟ್ಯಾಂಕಿಯ ಮೂಲಕ ನೀರಿನ ಸರಬರಾಜು ಆಗುತ್ತದೆ. ಮೆನ್ನಲಾ ಎಂಬಲ್ಲಿ ಜಿಲ್ಲಾ ಪಂಚಾಯ ತ್‌ 20 ಲಕ್ಷ ರೂ. ಅನುದಾನದಡಿ ತೆರೆದ ಬಾವಿ ನಿರ್ಮಿಸಿ ಪಂಪು ಅಳವಡಿಸಿ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಪಾಜೈ ಬಳಿ ಜಿ.ಪಂ. 20 ಲಕ್ಷ ರೂ. ಅನುದಾನದಲ್ಲಿ ತೆರೆದ ಬಾವಿ ಪಂಪು ಅಳವಡಿಸಲಾಗಿದೆ. 50 ಸಾವಿರ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕುಂಜಾರುಗಿರಿಯಲ್ಲಿ ಕೆ.ಆರ್‌.ಐಡಿಎಲ್‌. ಮೂಲಕ ಅಳವಡಿಸಲಾಗಿದೆ.

ಟ್ಯಾಂಕರ್‌ ನೀರು ಅನಿವಾರ್ಯ 
ಮಟ್ಟು ಭಾಗದಲ್ಲಿ ಕುಡಿಯುವ ನೀರಿನ ಮೂಲ ಇಲ್ಲ. ಉಪ್ಪು ನೀರಿನ ಸಮಸ್ಯೆ ಇದೆ. ಮಟ್ಟು ಭಾಗಕ್ಕೆ ವರ್ಷವಿಡೀ ಕುಡಿಯುವ ನೀರಿನ ಸರಬರಾಜು ಮಾಡಬೇಕಾಗುತ್ತದೆ. ಉತ್ತಮ ಮಳೆಯಾಗದಿದ್ದರೆ ಟ್ಯಾಂಕರ್‌ ನೀರು ಸರಬರಾಜು ಅನಿವಾರ್ಯ. 
– ಸುರೇಖಾ,ಪಿ.ಡಿ.ಒ.ಕೋಟೆ ಗ್ರಾ.ಪಂ.

ಲಭ್ಯ ನೀರಿನ ಹಂಚಿಕೆ
ಕುಡಿಯುವ ನೀರಿನ ಸರಬರಾಜು ಸರಿಯಾಗಿ ಮಾಡಲಾಗುತ್ತಿದೆ. ಇದ್ದ ನೀರಿನ ಮೂಲವನ್ನು ಬಳಸಿಕೊಂಡು ಕುಡಿಯುವ ನೀರನ್ನು ಹಂಚಿಕೆ ಮಾಡಲಾಗುತ್ತದೆ. 
– ಚಂದ್ರಕಲಾ, 
ಪಿ.ಡಿ.ಒ ಕುರ್ಕಾಲು ಗ್ರಾ.ಪಂ.

– ವಿಜಯ ಆಚಾರ್ಯ,ಉಚ್ಚಿಲ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.