“ಹಾವುಗಳ ರಕ್ಷಣೆ ನಮ್ಮೆಲ್ಲರ ಹೊಣೆ’
Team Udayavani, Mar 23, 2018, 6:45 AM IST
ಉಡುಪಿ: ಜೀವಜಾಲದ ಕೊಂಡಿಯ ಅವಿಭಾಜ್ಯ ಅಂಗವಾಗಿರುವ ಹಾವುಗಳ ಸಂತತಿ ಇಂದು ಸತತ ಅರಣ್ಯ ನಾಶ, ನಗರೀಕರಣದಿಂದಾಗಿ ಅಳಿವಿನಂಚಿನಲ್ಲಿದ್ದು ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಉರಗತಜ್ಞ ಗುರುರಾಜ್ ಸನಿಲ್ ಅಭಿಪ್ರಾಯಪಟ್ಟರು.
ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಕಾಲೇಜಿನ ನೇಚರ್ ಕ್ಲಬ್ ಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ಮೂಢನಂಬಿಕೆಗೆ ದಾಸರಾಗಿ ತಮ್ಮ ತನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಾವುಗಳ ವಿಷಯದಲ್ಲಿ ಭೀತಿ ತೊಡೆದು ಪ್ರೀತಿ ಬೆಳೆಸಿಕೊಂಡು ಉರಗ ಸಂತತಿ, ಪ್ರಕೃತಿ ಸಿರಿಯನ್ನು ರಕ್ಷಿಸಬೇಕೆಂದರು.
ಪ್ರಾಂಶುಪಾಲ ಪ್ರೊ| ಪ್ರಕಾಶ್ ಕಣಿವೆ, ನೇಚರ್ ಕ್ಲಬ್ನ ಪ್ರಭಾರಿ ರೋಹಿತ್ ಎಸ್. ಅಮೀನ್, ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್, ಗೌತಮ್ ಪಿ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೆಟ್ರಿಸಿಯಾ ಡೇ’ಸಾ ಸ್ವಾಗತಿಸಿ, ನಾರಾಯಣ ಮಯ್ನಾರ್ ಅತಿಥಿಗಳನ್ನು ಪರಿಚಯಿಸಿದರು. ಅಶ್ವಿನಿ ನಿರೂಪಿಸಿ, ರಶ್ಮಿತಾ ವಂದಿಸಿದರು. ವಿವಿಧ ಜಾತಿಯ ಹಾವುಗಳ ಪ್ರಾತ್ಯಕ್ಷಿಕೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್