“ರಂಗಭೂಮಿ ಕಲಾವಿದರ ಪಾಲಿನ ನಿಜವಾದ ಪಾಠಶಾಲೆ’
Team Udayavani, Feb 23, 2017, 4:46 PM IST
ಕೋಟ: ರಂಗಭೂಮಿಯಲ್ಲಿ ಕಾರ್ಯನಿರ್ವಹಿಸುವ ಕಲಾವಿದರಿಗೆ ಭಾಷೆ, ಅಭಿನಯ, ಸಮಯಪಾಲನೆಯ ಕುರಿತು ಹಿಡಿತವಿರುತ್ತದೆ ಮತ್ತು ಇಲ್ಲಿ ಅಭ್ಯಾಸ ಮಾಡಿದವರು ಎಲ್ಲಿ ಬೇಕಾದರೂ ಪ್ರದರ್ಶನ ನೀಡಬಲ್ಲರು. ಆದ್ದರಿಂದ ರಂಗಭೂಮಿಗಳು ಕಲಾವಿದರ ಪಾಲಿನ ನಿಜವಾದ ಪಾಠಶಾಲೆ ಎಂದು ಸಾಂಸ್ಕೃತಿಕ ಚಿಂತಕ ರಮೇಶ ಎಚ್.ಕುಂದರ್ ಹೇಳಿದರು.
ಅವರು ಫೆ.19ರಂದು ಕೋಟ ಕಾರಂತಭವನದಲ್ಲಿ ಜರಗಿದ ಕುಂದಗನ್ನಡ ಸಂಭ್ರಮ ತಿಂಗಳ ಸಡಗರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಹಿರಿಯ ರಂಗಕರ್ಮಿ ಚಂದ್ರ ಆಚಾರ್ಯ ಕೋಟ ಮಾತನಾಡಿ, ಕೋಟ ಪರಿಸರದಲ್ಲಿ ನಿಜವಾದ ಕಲೆಯನ್ನು ಪೋಷಿಸುವ ಮನಸ್ಸುಗಳಿದೆ. ಒಬ್ಬ ಕಲಾವಿದ ಯಶಸ್ಸು ಸಾಧಿಸಲು ನಿರಂತರ ದುಡಿಮೆ, ಪ್ರೋತ್ಸಾಹ ಅಗತ್ಯಎಂದರು.
ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ಎಚ್. ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಂಗ ನಿರ್ದೇಶಕ ರಘು ಪಾಂಡೇಶ್ವರ, ರಾಘು ರಟ್ಟಾಡಿ ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ಕಾರ್ಯಕ್ರಮ ನಿರೂಪಿಸಿ, ನರೇಂದ್ರ ಕುಮಾರ್ ಕೋಟ ಪ್ರಸ್ತಾವಣೆಗೈದು, ಪ್ರಸಾದ್ ಮಣೂರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ