ಪತಿಯ ಗೆಲುವಿಗೆ ಮಹಿಳಾ ತಂಡ ಕಟ್ಟಿ ಮತ ಯಾಚಿಸಿದ್ದೆ
Team Udayavani, Apr 6, 2018, 7:05 AM IST
ಕೋಟ: ಸಾಸ್ತಾನದ ಪಿ. ಬಸವರಾಜ್ 1985ರಲ್ಲಿ ಹಾಗೂ 1989ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಅನಂತರ 1994ರಲ್ಲಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಸೋತು ತೆರೆಮರೆಗೆ ಸರಿದರು. ಪತಿಯ ರಾಜಕೀಯ ಜೀವನದ ಕುರಿತು ಪತ್ನಿ ಅನಸೂಯ ಬಿ. ರಾಜ್ ಉದಯವಾಣಿಯೊಂದಿಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಚುನಾವಣೆ ಪ್ರಚಾರದ ಸಂದರ್ಭ ನಾನು ಮಹಿಳೆಯರ ತಂಡ ಕಟ್ಟಿಕೊಂಡು ಬೇರೆ-ಬೇರೆ ಊರುಗಳಿಗೆ ತೆರಳಿ ನಮ್ಮವರಿಗೆ ಮತ ನೀಡುವಂತೆ ಕೇಳಿಕೊಳ್ಳುತ್ತಿದ್ದೆ. ನಾನು ಸ್ಥಳೀಯ ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿದ್ದರಿಂದ ಮಹಿಳೆಯರನ್ನು ಸಂಘಟಿಸುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ ಎನ್ನುತ್ತಾರೆ ಅನಸೂಯ.
ಗೆದ್ದ ಮೇಲೆ ಜನಸೇವೆಗೆ ಸಹಾಯ
ಆ ದಿನಗಳಲ್ಲಿ ತಮ್ಮ ಅಹವಾಲುಗಳನ್ನು ಹಿಡಿದುಕೊಂಡು ಮನೆ ಬಾಗಿಲಿಗೆ ಬರುವ ಜನತೆಯನ್ನು ಗುರುತಿಸಿ ಆತ್ಮೀಯವಾಗಿ ಮಾತನಾಡಿಸುವುದೇ ಖುಷಿಯ ಸಂಗತಿಯಾಗಿತ್ತು. ಕೆಲವು ಮಹಿಳೆಯರು ತಮ್ಮ ಕೆಲಸಗಳಿಗಾಗಿ ನನ್ನನ್ನೇ ಅರಸಿ ಬರುತ್ತಿ ದ್ದರು ಎಂದು ಖುಷಿಯಿಂದ ಹೇಳುತ್ತಾರೆ.
ಹುರಿಹಗ್ಗದ ಕೈಗಾರಿಕೆ ಹಿಂದೆ ಪತ್ನಿ
ಮಹಿಳೆಯರ ಸ್ವ ಉದ್ಯೋಗಕ್ಕೆ ಅನುಕೂಲ ವಾಗುವಂತೆ ಹಾಗೂ ತರಬೇತಿ ಪಡೆಯುವ ಮಹಿಳೆಯರಿಗೆ ಸರಕಾರದಿಂದ ಅನುದಾನ ಬರುವ ರೀತಿ ಹುರಿ ಹಗ್ಗದ ಕಾರ್ಖಾನೆ ಸ್ಥಾಪಿಸಬೇಕು ಎಂದು ಅನಸೂಯಾ ಪತಿ ಯನ್ನು ಒತ್ತಾಯಿಸುತ್ತಿದ್ದರಂತೆ. ಅದರಂತೆ ಪಾಂಡೇಶ್ವರದಲ್ಲಿ ಸರಕಾರಿ ಪ್ರಾಯೋಜಿತ ಹುರಿಹಗ್ಗದ ಕೈಗಾರಿಕೆ ಸ್ಥಾಪನೆಗೊಂಡಿತು. ಅದು ಆ ಕಾಲದಲ್ಲಿ ಮಹಿಳೆಯರು ಸ್ವಾವಲಂಬಿ ಗಳಾಗುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಸೋತಾಗ ಸಮಾಧಾನ
ನಾನು ಸದಾ ಕಾಲ ಜನಸೇವೆಯಲ್ಲಿ ತೊಡಗಿಕೊಳ್ಳುವಂತೆ ಹಾಗೂ ಸಂಸಾರದ ಜವಾಬ್ದಾರಿ ಹೆಚ್ಚಿನ ಮಟ್ಟಿಗೆ ನನ್ನ ಹೆಗಲಿಗೆ ಬೀಳದಂತೆ ನನ್ನಾಕೆ ಎಚ್ಚರ ವಹಿಸುತ್ತಿದ್ದಳು. 1994ರ ಚುನಾವಣೆಯಲ್ಲಿ ಸೋತಾಗ “ಇಷ್ಟು ದಿನ ಜನ ನಮಗೆ ಅವಕಾಶ ನೀಡಿದ್ದರು; ಈಗ ಬೇರೆಯವರಿಗೆ ನೀಡಿದ್ದಾರೆ. ಅದರಿಂದ ಹತಾಶರಾಗುವುದು ಬೇಡ’ ಎಂದು ಸಮಾಧಾನಿಸಿ ದೈರ್ಯ ತುಂಬಿದ್ದಳು ಎಂದು ಬಸವರಾಜ್ ನೆನಪಿಸಿಕೊಳ್ಳುತ್ತಾರೆ.
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !