Udupi ಸರಕಾರಿ ಶಾಲೆಗಳಲ್ಲಿ ಶೌಚಾಲಯದ ಸ್ವಚ್ಛತೆಯೇ ಕಗ್ಗಂಟು
Team Udayavani, Dec 28, 2023, 6:57 AM IST
ಉಡುಪಿ: ಸರಕಾರಿ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆಯೇ ಈಗ ಮುಖ್ಯಶಿಕ್ಷಕರಿಗೆ ದೊಡ್ಡ ತಲೆನೋವಾಗಿದೆ. ಶೌಚಾಲಯ ಬಳಸಿದ ಅನಂತರ ಸರಿಯಾದ ಪ್ರಮಾಣದಲ್ಲಿ ನೀರು ಹಾಕಬೇಕು ಎಂಬ ಬಗ್ಗೆ ಶಾಲಾ ಹಂತದಲ್ಲಿ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆಯಾದರೂ ನಿತ್ಯವೂ ಶೌಚಾಲಯವನ್ನು ಸ್ವಚ್ಛ ಮಾಡಲೇ ಬೇಕು. ಅದು ಹೇಗೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ನಗರ ಪ್ರದೇಶದಲ್ಲಿ ಸ್ವಚ್ಛತ ಸಿಬಂದಿ ಮೂಲಕ ಶೌಚಾಲಯಗಳನ್ನು ಸ್ವಚ್ಛ ಮಾಡಿಸಲಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಸ್ವಚ್ಛತ ಸಿಬಂದಿ ಸಿಗುವುದಿಲ್ಲ. ಹೀಗಾಗಿಯೇ ಬಹುತೇಕ ಶಾಲೆಗಳ ಮುಖ್ಯಶಿಕ್ಷಕರಿಗೆ ಶೌಚಾಲಯ ಶುಚಿತ್ವವೇ ಕಗ್ಗಂಟಾಗಿದೆ. ಸರಕಾರದಿಂದ ನಿರ್ವಹಣ ವೆಚ್ಚವು ವಿದ್ಯಾರ್ಥಿ ಸಂಖ್ಯೆಯ ಆಧಾರದಲ್ಲಿ ವಾರ್ಷಿಕವಾಗಿ ಎರಡು ಅಥವಾ ಮೂರು ಕಂತಿನಲ್ಲಿ ಬರುತ್ತದೆ. ಬಂದ ಅನುದಾನವನ್ನು ಸ್ವಚ್ಛತೆಗಾಗಿಯೇ ಬಳಸಲು ಸಾಧ್ಯವಿಲ್ಲ. ವಿದ್ಯುತ್ ಬಿಲ್, ನೀರಿನ ಬಿಲ್ ಹೀಗೆ ಹಲವು ವಿಧವಾಗಿ ವಿನಿಯೋಗಿಸಬೇಕಾಗುತ್ತದೆ.
ನಿರ್ವಹಣೆಗೆಂದು ಸರಕಾರದಿಂದ ವಾರ್ಷಿಕ 5 ಸಾವಿರದಿಂದ 1 ಲಕ್ಷ ರೂ. ವರೆಗೂ ಬರುತ್ತದೆ. ಶಾಲೆಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ ಎಂಬದನ್ನು ಪರಿಗಣಿಸಿ ಅನುದಾನ ಹಂಚಿಕೆ ಮಾಡಲಾಗುತ್ತದೆ ಮತ್ತು ಅನುದಾನ ಬರುವಾಗಲೂ ವಿಳಂಬವಾಗುವುದರಿಂದ ಸ್ವತ್ಛತ ಸಿಬಂದಿಗೆ ನಿರ್ದಿಷ್ಟ ಸಮಯದಲ್ಲಿ ವೇತನ ನೀಡಲು ಸಾಧ್ಯವಾಗದ ಸ್ಥಿತಿಯಿದೆ.
ಸಿಬಂದಿ ನೇಮಕಕ್ಕೆ ಆಗ್ರಹ
ಖಾಸಗಿ ಶಾಲೆಗಳ ಮಾದರಿಯಲ್ಲಿ ಪ್ರತೀ ಸರಕಾರಿ ಶಾಲೆಗಳಲ್ಲೂ ಸ್ವಚ್ಛತೆಗೆ ಪ್ರತ್ಯೇಕ ಸಿಬಂದಿ ನೇಮಕ ಮಾಡಬೇಕು. ಸರಕಾರವೇ ಈ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಸ್ವತ್ಛತೆ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜಟಿಲವಾಗಲಿದೆ. ವಿದ್ಯಾರ್ಥಿಗಳಿಗೆ ಸ್ವಚ್ಛತೆಗೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗುತ್ತಿದೆ. ಆದರೆ ನಿತ್ಯವೂ ನೂರಾರು ವಿದ್ಯಾರ್ಥಿಗಳು ಶೌಚಾಲಯ ಬಳಸಿದ ಅನಂತರದಲ್ಲಿ ಸ್ವಚ್ಛ ಮಾಡಬೇಕಾಗುತ್ತದೆ. ಸ್ವಚ್ಛತೆ ಸಹಿತ ವಿವಿಧ ನಿರ್ವಹಣೆಗೆ ಸರಕಾರದಿಂದ ಪ್ರತೀ ಶಾಲೆಗೆ ಅನುದಾನ ಬರುತ್ತಿದ್ದರೂ ಏಕಕಾಲದಲ್ಲಿ ಬರುವುದಿಲ್ಲ. ವರ್ಷದಲ್ಲಿ 2 ಅಥವಾ 3 ಕಂತಿನಲ್ಲಿ ಬರುತ್ತದೆ. ವಾರ್ಷಿಕ 5ರಿಂದ 10 ಸಾವಿರ ರೂ. ನಿರ್ವಹಣೆ ವೆಚ್ಚ ಬಂದರೆ ಶೌಚಾಲಯ ಸ್ವಚ್ಛತ ಸಿಬಂದಿಗೆ ವೇತನ ನೀಡಲು ಇದು ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಸರಕಾರ ಅನುದಾನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಶಾಲೆಗಳಿಂದ ಆಗ್ರಹ ಕೇಳಿ ಬರುತ್ತಿದೆ.
ಸರಕಾರಿ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆ ಸಹಿತ ನಿರ್ವಹಣೆಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಯಾಗುತ್ತದೆ. ಅನುದಾನ ಹೆಚ್ಚಿಸಬೇಕು ಎಂಬ ಬೇಡಿಕೆಯ ಜತೆಗೆ ಸ್ವಚ್ಛತ ಸಿಬಂದಿ ನೇಮಿಸಬೇಕು ಎಂಬ ಬೇಡಿಕೆಯೂ ಇದೆ. ಇಲಾಖೆಯ ಉನ್ನತಾಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ಇದೆ.
-ದಯಾನಂದ ನಾಯಕ್, ಕೆ. ಗಣಪತಿ,
ಡಿಡಿಪಿಐ, ಉಡುಪಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ