Udupi: 18 ವರ್ಷದ ಯುವತಿ ನಾಪತ್ತೆ
Team Udayavani, Sep 2, 2023, 11:16 PM IST
ಉಡುಪಿ: ಬಡಗುಬೆಟ್ಟು ಗ್ರಾಮದ ಮಂಚಿಕೋಡಿ ನಿವಾಸಿ ವೈಷ್ಣವಿ ನಾಯಕ್(18) ಸೆ. 1ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ತತ್ಕ್ಷಣ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ವ್ಯಕ್ತಿ ಸಾವು
ಉಡುಪಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕಿನ್ನಿಮೂಲ್ಕಿಯ ಸುಬ್ರಹ್ಮಣ್ಯ ಕಾರಂತ (69) ಸೆ. 1ರಂದು ಸಾವನ್ನಪ್ಪಿದ್ದಾರೆ.
2 ತಿಂಗಳಿನಿಂದ ಅಂಬಲಪಾಡಿಯ ಪಿಜಿಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು.
ಸೆ. 1ರಂದು ಅಸ್ವಸ್ಥರಾದ ಕಾರಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು.