Udupi ಅಗ್ನಿ ಅವಘಡ: 3ರಿಂದ 4 ಕೋ.ರೂ. ನಷ್ಟ?
Team Udayavani, Oct 18, 2023, 11:10 PM IST
ಉಡುಪಿ: ಸಂತೆಕಟ್ಟೆ ಬಳಿ ಇರುವ ಶೆಡ್ಗೆ ಮಂಗಳವಾರ ತಗಲಿದ ಬೆಂಕಿ ಬಳಿಕ ಹತೋಟಿಗೆ ಬಂತಾದರೂ, ಬುಧವಾರ ಮುಂಜಾನೆ ಮತ್ತೆ ಹೊತ್ತಿಕೊಂಡಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಪೈಪ್ ಗಳು ಹಾಗೂ ಬ್ಯಾಟರಿಗಳು ಸಂಪೂರ್ಣ ಸುಟ್ಟು ಹೋಗಿದ್ದು, ಇದುವರೆಗೆ ಒಟ್ಟು ಭಾಗಶಃ 3ರಿಂದ 4 ಕೋ.ರೂ.ನಷ್ಟ ಉಂಟಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.