ಅನಧಿಕೃತ ಕಾರ್ಡ್ದಾರರಿಂದ 24.24 ಲಕ್ಷ ರೂ. ದಂಡ ವಸೂಲಿ
Team Udayavani, Mar 25, 2022, 6:35 AM IST
ಸಾಂದರ್ಭಿಕ ಚಿತ್ರ
ಉಡುಪಿ: ಸರಕಾರಿ ಅಥವಾ ಅರೆಸರಕಾರಿ ಸಂಸ್ಥೆಗಳ ನೌಕರರಾಗಿದ್ದು ಅಕ್ರಮವಾಗಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವವರಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈವರೆಗೆ 24,24,447 ರೂ. ದಂಡ ವಸೂಲಿ ಮಾಡಲಾಗಿದೆ.
ರಾಜ್ಯದಲ್ಲಿ 2,543 ಅಂತ್ಯೋದಯ, 18,689 ಆದ್ಯತಾ ಚೀಟಿ ಸಹಿತ 21,232 ಅನಧಿಕೃತ ಪಡಿತರ ಚೀಟಿ ಹೊಂದಿರುವ ನೌಕರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಕಾರಣ ಕೇಳಿ ನೋಟಿಸ್ ನೀಡಿ, ಕಾರ್ಡ್ ರದ್ದು ಮಾಡಿ, ನಿಯಮಾನುಸಾರ ದಂಡ ವಸೂಲಿ ಮಾಡಲಾಗುತ್ತಿದೆ.
ಪತ್ತೆ ಸುಲಭ :
ನೌಕರರು ಸರಕಾರಿ ಅಥವಾ ಅರೆಸರಕಾರಿ ಸಂಸ್ಥೆಗೆ ಉದ್ಯೋಗಕ್ಕೆ ಸೇರಿದ ದಿನದಿಂದಲೇ ಅನ್ವಯವಾಗುವಂತೆ ಇಂದಿನ ಇಲಾಖೆಯ ಪಡಿತರ ದರಕ್ಕೆ ಅನುಗುಣವಾಗಿ ದಂಡ ವಸೂಲಿ ಮಾಡಲಾಗುತ್ತಿದೆ. ಪ್ರತಿಯೊಂದು ಪಡಿತರ ಚೀಟಿಯೂ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಆಗಿರುವ ಜತೆಗೆ ಬೆರಳಚ್ಚು ಕೂಡ ತೆಗೆದುಕೊಂಡಿರುವುದರಿಂದ ಅನಧಿಕೃತ ಕಾರ್ಡುದಾರರ ಪತ್ತೆಯೂ ಸುಲಭವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉಡುಪಿ ಜಿಲ್ಲೆಯ 51 ಮಂದಿ ಅಂತ್ಯೋದಯ ಅನ್ನ ಹಾಗೂ 171 ಮಂದಿ ಆದ್ಯತಾ ಪಡಿತ ಚೀಟಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 25 ನೌಕರರು ಅಂತ್ಯೋದಯ ಅನ್ನ ಹಾಗೂ 100 ಮಂದಿ ಅದ್ಯತಾ ಚೀಟಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಈ ಎರಡು ಜಿಲ್ಲೆಯಲ್ಲಿ 347 ಅನಧಿಕೃತ ಕಾರ್ಡ್ದಾರರಿದ್ದಾರೆ.
ದ.ಕ. ಜಿಲ್ಲೆಯ 6 ತಾಲೂಕುಗಳಲ್ಲಿ ಅನಧಿಕೃತವಾಗಿ ಅತ್ಯೋದಯ ಕಾರ್ಡ್ ಹೊಂದಿದವರಿಂದ 4,62,317 ರೂ., ಅನಧಿಕೃತವಾಗಿ ಆದ್ಯತಾ ಚೀಟಿ ಹೊಂದಿದವರಿಂದ 10,83,497 ರೂ. ದಂಡ ವಸೂಲಿ ಮಾಡಲಾಗಿದೆ. ಹಾಗೆಯೇ ಉಡುಪಿಯ ಮೂರು ತಾಲೂಕುಗಳಲ್ಲಿ ಅನಧಿಕೃತವಾಗಿ ಅತ್ಯೋದಯ
ಕಾರ್ಡ್ ಹೊಂದಿದವರಿಂದ 2,16,540 ರೂ., ಅನಧಿಕೃತವಾಗಿ ಆದ್ಯತಾ ಚೀಟಿ ಹೊಂದಿದ ವರಿಂದ 6,62,093 ರೂ. ದಂಡ ವಸೂಲಿ ಮಾಡಲಾಗಿದೆ.
ಇದು ನಿರಂತರ ಪ್ರಕ್ರಿಯೆ ಆಗಿದ್ದು, ಅನಧಿಕೃತ ಕಾರ್ಡ್ದಾರರಿಗೆ ನೋಟಿಸ್ ನೀಡಿದ ಅನಂತರ ಅವರಿಂದ ಬರುವ ಉತ್ತರದ ಆಧಾರದಲ್ಲಿ ಪರಿಶೀಲನೆ ಪ್ರಕ್ರಿಯೆ ನಡೆದು, ಅನರ್ಹರಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಈವರೆಗೆ 125 ನೌಕರರಿಗೆ ಹಾಗೂ ಉಡುಪಿಯಲ್ಲಿ 44 ನೌಕರರಿಗೆ ದಂಡ ವಿಧಿಸಲಾಗಿದೆ.
ತಾಲೂಕುವಾರು ದಂಡ ವಿವರ (ರೂ.ಗಳಲ್ಲಿ)
ಬೆಳ್ತಂಗಡಿ 69,094
ಬಂಟ್ವಾಳ 2,02,632
ಮಂಗಳೂರು 7,46,978
ಮಂಗಳೂರು ಐಆರ್ಎ 4,06,230
ಪುತ್ತೂರು 45,320
ಸುಳ್ಯ 75,560
ಉಡುಪಿ 19,800
ಕುಂದಾಪುರ 6,35,872
ಬೈಂದೂರು 2,22,961
ಸರಕಾರದ ನಿರ್ದೇಶನದಂತೆ ಅನರ್ಹ ಕಾರ್ಡ್ಗಳನ್ನು ವಾಪಸ್ ಪಡೆದು, ದಂಡ ವಸೂಲಿ ಮಾಡುತ್ತಿದ್ದೇವೆ. ಜತೆಗೆ ಪರಿಶೀಲನೆ ನಡೆಸಿ ಅರ್ಹರಿಗೆ ಅನ್ಯಾಯ ಆಗದಂತೆಯೂ ಎಚ್ಚರ ವಹಿಸುತ್ತಿದ್ದೇವೆ. -ಕೆ.ಪಿ. ಮಧುಸೂದನ್ / ಮೊಹಮ್ಮದ್ ಇಸಾಕ್ ಜಿಲ್ಲಾ ಉಪನಿರ್ದೇಶಕರು, ದ.ಕ. ಮತ್ತು ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು