Varahi Project; 9 ಕೋಟಿಯಿಂದ 1,300 ಕೋ.ರೂ. ದಾಟಿದ ಯೋಜನೆ!

ನಾಲ್ಕು ದಶಕಗಳಿಂದ ಪ್ರಗತಿಯಲ್ಲಿದೆ ವಾರಾಹಿ ಪ್ರಾಜೆಕ್ಟ್

Team Udayavani, Jul 12, 2023, 6:55 AM IST

ದಶಕಗಳೆ ಕಳೆದರೂ ಪೂರ್ಣವಾಗದ ಯೋಜನೆ

ಉಡುಪಿ: ಒಂದು ನೀರಾವರಿ ಯೋಜನೆ; ಬರೋಬ್ಬರಿ 44 ವರ್ಷಗಳಲ್ಲಿ ಅದರ ಯೋಜನಾ ವೆಚ್ಚ ಎಷ್ಟರ ಮಟ್ಟಿಗೆ ಏರಿಕೆಯಾಗಬಹುದು? ಹತ್ತು ಪಟ್ಟು, ಇಪ್ಪತ್ತು ಪಟ್ಟು…

ಅಷ್ಟಾಗಿದ್ದರೆ ನಿಟ್ಟುಸಿರು ಬಿಡ ಬಹುದಿತ್ತು. ಅವೆಲ್ಲವನ್ನೂ ಮೀರಿಸು ವಂತೆ ನೂರಾರು ಪಟ್ಟು ಹೆಚ್ಚಾ ದರೆ? ಇಷ್ಟಕ್ಕೂ ಈ ಯೋಜನೆ ಪೂರ್ಣಗೊಂಡಿತೇ? ಇಲ್ಲ , ಇನ್ನೂ ಪ್ರಗತಿಯಲ್ಲಿದೆ! ಅಚ್ಚರಿ ಎಂದರೆ ಯೋಜನಾ ವೆಚ್ಚ ಪರಿಷ್ಕರಣೆ ಈಗಲೂ ಮುಗಿದಿಲ್ಲ. ಮತ್ತೊಂದು ಪರಿಷ್ಕೃತ ಯೋಜನೆಯ ಪ್ರಕಾರ ಇದರ ವೆಚ್ಚ 1,700 ಕೋಟಿ ರೂ. ತಲುಪಬಹುದು!

ಹಲವು ಸರಕಾರಗಳು, ಇಲಾಖೆ, ಜನಪ್ರತಿನಿಧಿಗಳ ಕಾರ್ಯವೈಖರಿಗೂ ಇದು ಸ್ಪಷ್ಟ ನಿದರ್ಶನ. ಕೃಷಿ ಗೆಂದು ಆರಂಭವಾದ ಯೋಜನೆ ನೀರಿಲ್ಲದೆ ಕೃಷಿಕರೆಲ್ಲ ಊರು ಬಿಡುವ ಸ್ಥಿತಿ ಬಂದರೂ ಜಾರಿಗೊಂಡಿಲ್ಲ.

ಎಲ್ಲರ ಗದ್ದೆಗಳಿಗೆ ನೀರು ಹರಿದಿಲ್ಲ ಎಂಬುದೇ ಅಚ್ಚರಿ. ಹಾಗಾಗಿ ಯೋಜನೆ ರೈತರಿಗೋ, ಇಲಾಖೆಗೋ, ಅಧಿಕಾರಿಗಳಿಗೋ ಎಂಬ ಪ್ರಶ್ನೆ ಜನರದ್ದು.

4 ದಶಕಗಳ ಹಿಂದೆ ಕೇವಲ 9.43 ಕೋ.ರೂ. ಆಡಳಿತಾತ್ಮಕ ಅನುಮೋದನೆ ಯಿಂದ ಆರಂಭಗೊಂಡ ವಾರಾಹಿ ನೀರಾವರಿ ಯೋಜನೆಗೆಯ ಗಾತ್ರ ಪ್ರಸ್ತುತ 1,302.09 ಕೋಟಿ ರೂ.ಗೆ ತಲುಪಿದೆ. ಆದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.

ಉಡುಪಿ ಮತ್ತು ಕುಂದಾಪುರ ತಾಲೂಕಿನ 15,702 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 1979ರಲ್ಲಿ ಆಗಿನ ರಾಜ್ಯ ಸರಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು. ಅನಂತರ ಯೋಜನೆಯ ಗಾತ್ರ ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಾ ಸಾಗಿತೇ ವಿನಾ ಕಾಮಗಾರಿ ವೇಗ ಪಡೆಯಲೇ ಇಲ್ಲ. ಇದರಿಂದ ಈ ಭಾಗದ ರೈತರು ವಾರಾಹಿ ಬರುತ್ತಾಳೆಂದು ಕಾಯುತ್ತ ಕುಳಿತಿದ್ದಾರೆ, ಅವರ ಕಾಯುವಿಕೆ ಇನ್ನೂ ಮುಗಿದಿಲ್ಲ.

ವಾರಾಹಿ ಬಲದಂಡೆ ಸಾಮಾನ್ಯ ಕಾಲುವೆ ಸರಪಳಿಯಲ್ಲಿ 18.72 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಎಡ ದಂಡೆ ಕಾಲುವೆ ಸರಪಳಿ ಯಲ್ಲಿ 38 ಕಿ.ಮೀ. ಪೂರ್ಣಗೊಂಡಿದೆ. ಇದ ರಿಂದ ಸುಮಾರು 6,110 ಹೆಕ್ಟೇರ್‌ ಪ್ರದೇಶ ಅಚ್ಚುಕಟ್ಟು ಸೃಜಿಸಲಾಗಿದೆ. ಆಗಬೇಕಾದ ಕಾಮಗಾರಿಗಳು ಸಾಕಷ್ಟಿವೆ.

2024-25 ಗಡುವು
ರಾಜ್ಯ ಸರಕಾರ ಯೋಜನೆಯನ್ನು ಕಾಲಮಿತಿ ಯೊಳಗೆ ಪೂರ್ಣಗೊಳಿಸಲು ಮತ್ತೂಂದು ಗಡುವು ವಿಧಿಸಿದೆ. ಯೋಜನೆಯಡಿ ಕಾಲುವೆ ನಿರ್ಮಾಣ, ಅರಣ್ಯ ಹಾಗೂ ಅರಣ್ಯೇತರ ಭೂ ಪ್ರದೇಶಗಳ ಸ್ವಾಧೀನ ಪಡೆಯಲು / ಹಸ್ತಾಂತರಿಸಲು (ಅದಕ್ಕೆ ಪರಿಹಾರ ನೀಡುವುದು ಸೇರಿ) ಪ್ರಯತ್ನ ನಡೆದಿದೆ. ಕಾಮಗಾರಿಗಳನ್ನು 2024 25ನೇ ಸಾಲಿನಲ್ಲಿ ಪೂರ್ಣಗೊಳಿಸಲು ಸೂಚಿಸ ಲಾಗಿದೆ. ಸರಕಾರದ ಅನುದಾನದ ಲಭ್ಯತೆಯ ಆಧಾರದಲ್ಲಿ ಮುಂದಿನ ಕ್ರಮ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಎಲ್ಲ ತಾಲೂಕುಗಳಿಗೂ ನೀರು
ವಾರಾಹಿ ಅಚ್ಚುಕಟ್ಟಿನ ಪ್ರದೇಶಕ್ಕೆ ನೀರುಣಿಸಲು ಯೋಜನೆಯನ್ನು ಆರಂಭಿಸಲಾಗಿತ್ತು. ಅನಂತರ ಯೋಜನೆಯನ್ನು ತಾಲೂಕಿನಿಂದ ಹೊರಗೂ ವಿಸ್ತರಿಸಲಾಯಿತು. ಪ್ರಸ್ತುತ ವಾರಾಹಿಯಿಂದಲೇ ಉಡುಪಿ ನಗರಕ್ಕೂ ಕುಡಿಯುವ ನೀರು ಪೂರೈಸುವ ಯೋಜನೆ ಚಾಲ್ತಿಯಲ್ಲಿದೆ. ಬೈಂದೂರು ಮತ್ತು ಕಾರ್ಕಳ ತಾಲೂಕಿಗೂ ಪ್ರತ್ಯೇಕ ಯೋಜನೆಯಡಿ ವಿಸ್ತರಿಸಲಾಗಿದೆ ಮತ್ತು ಕಾಮಗಾರಿಯೂ ನಡೆಯುತ್ತಿದೆ. ಹೀಗೆ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ವಾರಾಹಿ ಬರಲಿದೆಯಂತೆ.

9.43 ಕೋ.ರೂ.ಗಳಿಂದ ಯೋಜನೆ ಆರಂಭವಾಗಿ 2003 2004ರಲ್ಲಿ 569.53 ಕೋ.ರೂ.ಗಳಿಗೆ ಯೋಜನೆ ಪರಿಷ್ಕೃತಗೊಂಡಿತು. 2006ರಲ್ಲಿ ಸರಕಾರ ಈ ಪರಿಷ್ಕೃತ ಯೋಜನೆಗೆ ಆನುಮೋದನೆ ನೀಡಿತು. ವಿಶೇಷವೆಂದರೆ ಈವರೆಗೆ 1,302 ಕೋ.ರೂ. ವೆಚ್ಚ ಮಾಡಲಾಗಿದೆ.

ಹೊಸ ಡಿಪಿಆರ್‌
ವಾರಾಹಿ ಯೋಜನೆಯನ್ನು ಇನ್ನಷ್ಟು ವಿಸ್ತರಿ ಸುವ ಹಿನ್ನೆಲೆಯಲ್ಲಿ 2014 15ರಲ್ಲಿ 1,789.50 ಕೋ.ರೂ.ಗಳಿಗೆ ಪರಿಷ್ಕೃತ ವಿಸ್ತೃತ ಯೋಜನ ವರದಿ (ಡಿಪಿಆರ್‌) ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಸರಕಾರ ಇನ್ನೂ ಅನುಮತಿ ನೀಡಿಲ್ಲ. ಪರಿಷ್ಕೃತ ಡಿಪಿಆರ್‌ಗೆ ಒಪ್ಪಿಗೆ ನೀಡಿದಲ್ಲಿ ಯೋಜನೆಯ ಗಾತ್ರ ಇನ್ನಷ್ಟು ಹಿಗ್ಗಲಿದೆ ಎಂದು ಹೇಳಲಾಗುತ್ತಿದೆ.

ಕಾಮಗಾರಿ ವಿಳಂಬ ಏಕೆ?
ಯೋಜನೆಯ ಬಹುಪಾಲು ಪ್ರದೇಶದಲ್ಲಿ ಅರಣ್ಯ, ಸಂರಕ್ಷಿತ ಅರಣ್ಯ ಇರುವುದರಿಂದ ಕಾಮಗಾರಿಗೆ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ ಎನ್ನುವುದು ಅಧಿಕಾರಿಗಳ ವಾದ. ಆದರೆ ತಾಂತ್ರಿಕ ಸಮಸ್ಯೆ ಇಲ್ಲದ ಕಡೆಗಳಲ್ಲೂ ಕಾಮಗಾರಿ ವಿಳಂಬವಾಗುತ್ತಿದೆ ಎಂಬುದಕ್ಕೆ ಅಧಿಕಾರಿಗಳಲ್ಲಿ ಉತ್ತರ ಇಲ್ಲ ಎನ್ನುವುದು ಸಾರ್ವಜನಿಕರ ವಾದ.

- ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

Bantwal ವರ್ಷದ ಮೊದಲ ಮಳೆ; ಕುದ್ರೆಬೆಟ್ಟು ಹೆದ್ದಾರಿಯಲ್ಲಿ ಕಾರು ಪಲ್ಟಿ

Bantwal ವರ್ಷದ ಮೊದಲ ಮಳೆ; ಕುದ್ರೆಬೆಟ್ಟು ಹೆದ್ದಾರಿಯಲ್ಲಿ ಕಾರು ಪಲ್ಟಿ

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Bommai BJP

Basavaraj Bommai; ಕಟುಸತ್ಯ ಹೇಳಲು ಇವತ್ತಿನ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ

rain-1

Rain; ಮತ್ತೆ 10 ಜಿಲ್ಲೆಗಳಲ್ಲಿ ಮಳೆ ಆರ್ಭಟ: 2 ಸಾವು

ಕರಾವಳಿಗೆ ಮುಂದುವರಿದ ಪ್ರವಾಸಿಗರ ಪ್ರವಾಹ; ದೇಗುಲ, ಬೀಚ್‌ಗಳಲ್ಲಿ ಜನಸಂದಣಿ

ಕರಾವಳಿಗೆ ಮುಂದುವರಿದ ಪ್ರವಾಸಿಗರ ಪ್ರವಾಹ; ದೇಗುಲ, ಬೀಚ್‌ಗಳಲ್ಲಿ ಜನಸಂದಣಿ

Mangaluru ಮೂಲದ ಫಾ| ವಿಲ್ಫ್ರೆಡ್‌ ; ಝಾನ್ಸಿ ಧರ್ಮಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕ

Mangaluru ಮೂಲದ ಫಾ| ವಿಲ್ಫ್ರೆಡ್‌ ; ಝಾನ್ಸಿ ಧರ್ಮಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕ

1-weqwqe

Babaleshwar: ಸಾಲ ಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಬೈಕ್‌ ಅಪಘಾತ ಸವಾರ ಸಾವು

Road Mishap; ಬೈಕ್‌ ಅಪಘಾತ ಸವಾರ ಸಾವು

Road Mishap ಪಡುಬಿದ್ರಿ; ಬುಲೆಟ್‌ ಬೈಕ್‌ ಅಪಘಾತ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ; ಬುಲೆಟ್‌ ಬೈಕ್‌ ಅಪಘಾತ: ಇಬ್ಬರಿಗೆ ಗಾಯ

Manipal ಪಾರ್ಟ್‌ಟೈಮ್‌ ಉದ್ಯೋಗದ ಆಮಿಷ: ಲಕ್ಷಾಂತರ ರೂ. ವಂಚನೆ

Manipal ಪಾರ್ಟ್‌ಟೈಮ್‌ ಉದ್ಯೋಗದ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಬೈಲೂರು: ಮನೆಯಿಂದ ನಗ, ನಗದು ಕಳವು; ದೂರು ದಾಖಲು

Udupi ಬೈಲೂರು: ಮನೆಯಿಂದ ನಗ, ನಗದು ಕಳವು; ದೂರು ದಾಖಲು

Manipal: ವೈದ್ಯರ ಲ್ಯಾಪ್‌ಟಾಪ್‌ ಕಳವು; ದೂರು ದಾಖಲು

Manipal: ವೈದ್ಯರ ಲ್ಯಾಪ್‌ಟಾಪ್‌ ಕಳವು; ದೂರು ದಾಖಲು

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

Bantwal ವರ್ಷದ ಮೊದಲ ಮಳೆ; ಕುದ್ರೆಬೆಟ್ಟು ಹೆದ್ದಾರಿಯಲ್ಲಿ ಕಾರು ಪಲ್ಟಿ

Bantwal ವರ್ಷದ ಮೊದಲ ಮಳೆ; ಕುದ್ರೆಬೆಟ್ಟು ಹೆದ್ದಾರಿಯಲ್ಲಿ ಕಾರು ಪಲ್ಟಿ

Supreme Court

ತೀರ್ಪು ತಿದ್ದಿದ ಪ್ರಕರಣ: ಡಾ| ಸಿದ್ಧಲಿಂಗ ಸ್ವಾಮೀಜಿಗೆ ಸುಪ್ರೀಂ ನೋಟಿಸ್‌ ಜಾರಿ

accident

Sakaleshpura ಪಿಕಪ್‌ ಪಲ್ಟಿ: ಕಕ್ಯಪದವಿನ ಯುವಕ ಸಾವು

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Bommai BJP

Basavaraj Bommai; ಕಟುಸತ್ಯ ಹೇಳಲು ಇವತ್ತಿನ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.