ವಾರಾಹಿ ಅಣೆಕಟ್ಟು ಪ್ರದೇಶಕ್ಕೆ ಸಚಿವ ಡಿಕೆಶಿ ಭೇಟಿ
Team Udayavani, Oct 3, 2018, 9:43 AM IST
ಸಿದ್ದಾಪುರ: ಹೊಸಂಗಡಿ ಗ್ರಾಮದ ಹೊಳೆಶಂಕರನಾರಾಯಣ ಸಮೀಪ ಇರುವ ವಾರಾಹಿ ಅಣೆಕಟ್ಟು ಪ್ರದೇಶಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಂಗಳ ವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾರಾಹಿ ಬಲ ದಂಡೆ ಯೋಜನೆ ಮತ್ತು ಉಡುಪಿಗೆ ಹಾಲಾಡಿ ಸಮೀಪದ ಭರತ್ಕಲ್ನಿಂದ ವಾರಾಹಿ ನೀರು ಹರಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಾರಾಹಿ ನೀರಿನ ಮಟ್ಟ ಅರಿತು ಬಲದಂಡೆ ನೀರಾವರಿ ಯೋಜನೆ ಜಾರಿ ಮಾಡಲು ಸರಕಾರ ಚಿಂತಿಸಿದೆ. ಭರತ್ಕಲ್ನಿಂದ ಉಡುಪಿಗೆ ವಾರಾಹಿ ನೀರು ಒಯ್ಯುವ ಬಗ್ಗೆ ಮುಂದೆ ತಿಳಿಸುತ್ತೇನೆ ಎಂದರು.
ಮಾಜಿ ಶಾಸಕ ಗೋಪಾಲ ಪೂಜಾರಿ, ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಯತೀಶ್ಚಂದ್ರ, ವಾರಾಹಿ ಅಧೀಕ್ಷಕ ಎಂಜಿ ನಿಯರ್ ಬಿ. ಪದ್ಮನಾಭ, ಎಂಜಿನಿಯರ್ಗಳಾದ ಪ್ರಸನ್ನ, ಕಿರಣ್, ಎನ್.ಜಿ. ಭಟ್, ಪ್ರೀತಮ್, ಅಶೋಕ್ ಉಪಸ್ಥಿತರಿದ್ದರು.
ದೇವಸ್ಥಾನ ಭೇಟಿ
ಸಚಿವರು ವಾರಾಹಿ ಅಣೆ ಕಟ್ಟಿನ ಪಕ್ಕದಲ್ಲಿರುವ ಶ್ರೀ ಹೊಳೆ ಶಂಕರ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಸಚಿವರ ಪತ್ನಿ ಹಾಗೂ ಪುತ್ರಿ ಪ್ರತ್ಯೇಕವಾಗಿ ಹೊಸಂಗಡಿಯ ಕರ್ನಾಟಕ ಪವರ್ ಕಾರ್ಪೊರೇಶನ್ನ ಭೂಗರ್ಭ ವಿದ್ಯುದಾಗಾರಕ್ಕೆ ಭೇಟಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ