ಕೃಷಿಭೂಮಿಗೆ ನೀರು: ಕಂಗಾಲಾದ ಕೃಷಿಕರು
Team Udayavani, Jun 12, 2018, 7:50 AM IST
ಕೋಟೇಶ್ವರ: ಗೋಪಾಡಿ, ಬೀಜಾಡಿ ಪರಿಸರದಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದ ನೀರಿನ ಹೊರ ಹರಿವಿಗೆ ಅನುಕೂಲ ಕಲ್ಪಿಸುವ ನೆಲಯಲ್ಲಿ ಪಂಚಾಯತ್ ಕೆಲವೆಡೆ ಹೂಳೆತ್ತದಿರುವುದರಿಂದ ಆ ಭಾಗದ ಚರಂಡಿಗಳಲ್ಲಿ ನೀರು ತುಂಬಿ ಅಕ್ಕಪಕ್ಕದ ಗದ್ದೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿರುವುದು ಕೃಷಿಕರಿಗೆ ಆತಂಕದ ವಾತಾವರಣ ಸೃಷ್ಟಿಸಿದೆ.
ಗೋಪಾಡಿಯಲ್ಲಿ ಉಂಟಾಗಿರುವ ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಗ್ರಾ.ಪಂ. ಸಹಕಾರದೊಡನೆ ಆ ಭಾಗದ ನಿವಾಸಿಗಳು ಸ್ವಯಂಪ್ರೇರಣೆಯಿಂದ ತೋಡಿನ ತೊಡಕನ್ನು ನಿಭಾಯಿಸಿದರೂ ಕೂಡ ಅನೇಕ ಗದ್ದೆಗಳು ಜಲಾವೃತಗೊಂಡಿದೆ. ಈ ರೀತಿಯ ವಿದ್ಯಮಾನಕ್ಕೊಂದು ಪರಿಹಾರ ಕಂಡುಕೊಳ್ಳುವಲ್ಲಿ ಮಳೆಗಾಲದ ಮೊದಲು ಎಲ್ಲಾ ಗ್ರಾಮ ಪಂಚಾಯತ್ ಗಳು ಒಳಚರಂಡಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಕೃತಕ ನೆರೆಯ ಹಾವಳಿಯನ್ನು ತಪ್ಪಿಸಲು ಸಾಧ್ಯವೆಂದು ಅಲ್ಲಿನ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.
ಇನ್ನಾದರೂ ಹೂಳೆತ್ತಿಯಾರೇ ?
ಬಹುತೇಕ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಒಳಚರಂಡಿ ಮಾಯವಾಗಿದ್ದು ಆ ಭಾಗದ ನಿವಾಸಿಗಳ ಮನೆಯ ಪಾಗಾರವು ಚರಂಡಿಯನ್ನು ಚಾಚಿರುವುದು ಪಂಚಾಯತ್ಗಳಿಗೆ ಇರಿಸು ಮುರಿಸಾದರೂ ಮುಂಬರುವ ದಿನಗಳಲ್ಲಿ ಸುರಿಯುವ ಭಾರೀ ಮಳೆಗೆ ಗ್ರಾಮೀಣ ಪ್ರದೇಶಗಳ ಮನೆಗಳು ನೀರಿನ ಹೊರ ಹರಿವಿಗೆ ವ್ಯವಸ್ಥೆ ಇಲ್ಲದೇ ಜಲಾವೃತಗೊಳ್ಳುವ ಮೊದಲೇ ಪಂಚಾಯತ್ಗಳು ಎಚ್ಚೆತ್ತುಕೊಳ್ಳಬೇಕಾಗಿದೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ