ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಯೇಸುದಾಸ್ 80ನೇ ಹುಟ್ಟುಹಬ್ಬ
Team Udayavani, Jan 10, 2020, 6:46 PM IST
ಕೊಲ್ಲೂರು: ಗಾನ ಗಂಧರ್ವ, ಪಂಚಭಾಷಾ ಗಾಯಕ, ಪದ್ಮಶ್ರೀ ಡಾ|ಕೆ.ಜೆ.ಯೇಸುದಾಸ್ ಅವರು ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಚಂಡಿಕಾ ಹೋಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ 80ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
ಯೇಸುದಾಸ್ ಮತ್ತು ಪ್ರಭಾ ಯೇಸುದಾಸ್ ದಂಪತಿ ಜ.9ರಂದು ಕ್ಷೇತ್ರಕ್ಕೆ ಆಗಮಿಸಿ, ಮಹಾಲಕ್ಷ್ಮೀ ವಸತಿಗೃಹದಲ್ಲಿ ತಂಗಿದ್ದರು. ಶುಕ್ರವಾರ ಬೆಳಗಿನ ಜಾವ ದೇಗುಲಕ್ಕೆ ಆಗಮಿಸಿ, ಮೂಕಾಂಬಿಕೆಯನ್ನು ಧ್ಯಾನಿಸಿ, ಚಂಡಿಕಾ ಹೋಮ ಸಂಕಲ್ಪದಲ್ಲಿ ಪಾಲ್ಗೊಂಡರು. ಕುಟುಂಬಿಕರು ಉಪಸ್ಥಿತರಿದ್ದರು.
ಸತತ 30ನೇ ವರ್ಷದ ಸಂಗೀತೋಪಾಸನೆ:
ಯೇಸುದಾಸ್ ಅವರು 30 ವರ್ಷಗಳಿಂದ ಮೂಕಾಂಬಿಕೆಯ ಸನ್ನಿಧಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತ ಬಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ದೇವಿಯ ಅನುಗ್ರಹದಿಂದ ಸಂಗೀತ ಕ್ಷೇತ್ರದಲ್ಲಿ ಕಿಂಚಿತ್ ಸಾಧನೆ ಮಾಡಿದ್ದೇನೆ. ಕೊಲ್ಲೂರು ಕ್ಷೇತ್ರವು ವಾಗೆªàವಿಯ ಸಾನ್ನಿಧ್ಯ ಹೊಂದಿರುವುದರಿಂದ ಸಂಗೀತ ಸಾಧಕರು ಆಕೆಗೆ ನಮಿಸಿ, ಭಜಿಸಿ ಮುಂದುವರಿದಾಗ ನವ ಶಾರೀರ, ಹೊಸ ಚೈತನ್ಯ ಪಡೆಯಲು ಸಾಧ್ಯವಾಗುತ್ತದೆ. ಯುವ ಗಾಯಕರು ಗುರು-ಹಿರಿಯರನ್ನು ಗೌರವಿಸುವುದರೊಡನೆ ಭಗವಂತನನ್ನು ಸ್ಮರಣೆ ಮಾಡುತ್ತ ಸಂಸ್ಕಾರಯುತ ಜೀವನ ಸಾಗಿಸಿದಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯ’ ಎಂದರು.
ಸ್ವರ್ಣಮುಖೀಯಲ್ಲಿ ಸಂಗೀತಾರ್ಚನೆ:
ದೇಗುಲದ ಸ್ವರ್ಣಮುಖೀ ಮಂಟಪದಲ್ಲಿ ಸೇರಿದ್ದ ಸಂಗೀತಾರಾಧಕರ ಸಮ್ಮುಖದಲ್ಲಿ ಅನೇಕ ಸಂಗೀತ ಕಲಾವಿದರು ಯೇಸುದಾಸರ ಜನ್ಮದಿನದ ಸಲುವಾಗಿ ಶಾಸ್ತ್ರೀಯ ಭಕ್ತಿಗೀತೆಗಳನ್ನು ದಿನವಿಡೀ ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ