ಲೋಕಸಭಾ ಸ್ಥಾನದ ಮೇಲೆ ಕಣ್ಣಿಟ್ಟ ಅಸ್ನೋಟಿಕರ್: ರೂಪಾಲಿ ನಾಯ್ಕ ವಿರುದ್ಧ ಕಿಡಿ
Team Udayavani, May 18, 2023, 4:11 PM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಸ್ಥಾನಕ್ಕೆ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವ ಬಯಕೆಯಿದೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.
ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಂದೆ ಲೋಕಸಭೆಗೆ ಸ್ಪರ್ಧಿಸಿ, 30 ದಿನಗಳ ಅತ್ಯಲ್ಪ ಸಮಯದಲ್ಲಿ ಪ್ರಚಾರ ಮಾಡಿ, 3.60 ಲಕ್ಷ ಮತ ಪಡೆದಿದ್ದೆ. ಈ ಸಲ ಲೋಕಸಭಾ ಕ್ಷೇತ್ರದಲ್ಲಿ ಗಂಭೀರವಾಗಿ ಪ್ರಚಾರದಲ್ಲಿ ತೊಡಗಿಕೊಳ್ಳುವೆ. ಆರು ತಿಂಗಳ ಮೊದಲೇ ಕಾರ್ಯ ಪ್ರಾರಂಭಿಸುವೆ ಎಂದರು.
ಕಾರ್ಯಕರ್ತರ ಸಲಹೆ ಪಡೆದು ತಿಂಗಳೊಪ್ಪತ್ತಿನಲ್ಲಿ ರಾಜಕೀಯ ನಿರ್ಧಾರ ಮಾಡುವೆ. ಕಾಂಗ್ರೆಸ್, ಬಿಜೆಪಿಯಲ್ಲಿ ಒಳ್ಳೆಯ ಸಂಪರ್ಕ ಇದೆ. ಮರಾಠಿ, ಕೊಂಕಣಿ, ಹಿಂದಿ, ಇಂಗ್ಲಿಷ್, ಕನ್ನಡ ಬಲ್ಲ ನನಗೆ ಕ್ಷೇತ್ರದಲ್ಲಿ ಈ ಎಲ್ಲಾ ಭಾಷೆ ಮಾತನಾಡುವ ಜನರ ತಲುಪಬಲ್ಲೆ. ಜಾತಿ, ಭಾಷೆ, ಹಣ, ಜನರ ಒಡನಾಟ. ಚುನಾವಣೆ ಗೆಲ್ಲಲು ಅವಶ್ಯ ಎಂದ ಅವರು ಒಬಿಸಿ ಜನಾಂಗದವರು ಮುಂದೆ ಲೋಕಸಭಾ ಸದಸ್ಯರಾಗಬೇಕು. ಕಳೆದ 25 ವರ್ಷದಿಂದ ಬ್ರಾಹ್ಮಣರು ಸಂಸದರಾಗಿದ್ದರು. ಈಗ ಬದಲಾವಣೆ ಬೇಕಾಗಿದೆ ಎಂದರು.
ಛೇಡಿಸಿದ್ದೆ ಸೋಲಿಗೆ ಕಾರಣ: ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸತೀಶ್ ಸೈಲ್ ಮಾಜಿ ಮಾಜಿ ಎಂದು ಛೇಡಿಸಿದ್ದೆ ಶಾಸಕಿ ರೂಪಾಲಿ ನಾಯ್ಕ ಚುನಾವಣೆಯಲ್ಲಿ ಸೋಲಲು ಕಾರಣ ಎಂದು ಆನಂದ ಅಸ್ನೋಟಿಕರ್ ಹೇಳಿದರು.
ರೂಪಾಲಿ ನಾಯ್ಕ ಸರ್ವಾಧಿಕಾರಿಯ ರೀತಿ ವರ್ತಿಸುತ್ತಿದ್ದರು. ಅವರು ಸೋತ ನಂತರ ಬಿಜೆಪಿ ಹಿರಿಯರನ್ನು, ಮೂಲ ಹಿರಿಯ ಕಾರ್ಯಕರ್ತರನ್ನು ಬೈದಿರುವ ಆಡಿಯೋ ನನ್ನ ಬಳಿಯಿದೆ. ಆದರೆ ಬಿಜೆಪಿಯ ಒಂದು ಮತವೂ ಕಾಂಗ್ರೆಸ್ ಗೆ ಬಂದಿಲ್ಲ. ಬಿಜೆಪಿ ಮತ ಬಿಜೆಪಿಗೆ ಬಿದ್ದಿವೆ. ಆದರೂ ಬಿಜೆಪಿ ಮೂಕ ಕಾರ್ಯಕರ್ತರನ್ನು ಮಾಜಿ ಶಾಸಕಿ ಬಾಯಿಗೆ ಬಂದಂತೆ, ಅಸಂವಿಧಾನಿಕ ಪದ ಬಳಸಿ ಬೈದಿದ್ದಾರೆ. ಅವರ ವರ್ತನೆ ಬಹುತೇಕ ಸರ್ವಾಧಿಕಾರಿಯಂತಿತ್ತು ಎಂದು ಅಸ್ನೋಟಿಕರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ. ಬಹುಶಃ ಕಮಿಷನ್ ಸರಿಯಾಗಿ ತಂದು ಕೊಟ್ಟಿದ್ದಕ್ಕೆ ಧನ್ಯವಾದ ಹೇಳಬೇಕಿತ್ತು. ಅಲ್ಲದೆ ಶಾಸಕಿ ಅಧಿಕಾರದಲ್ಲಿ ಇದ್ದಾಗ ಅಧಿಕಾರಿಗಳಿಗೆ ಕೊಟ್ಟ ಕಿರುಕುಳ ದಾಖಲೆಯಗುವಂತಹದ್ದು ಎಂದರು. ಬಿಜೆಪಿ ಬಿಟ್ಟು ಆಕೆ ಪಕ್ಷೇತರರಾಗಿ ನಿಲ್ಲಲಿ. 2000 ಮತಗಳು ಬಂದರೆ ಹೆಚ್ಚು ಎಂದು ಆನಂದ ಲೇವಡಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ