ಕಲಾವಿದರ ಮಾಸಾಶನ 500 ರೂ. ಹೆಚ್ಚಳ


Team Udayavani, Nov 28, 2019, 4:13 PM IST

uk-tdy-1

ಶಿರಸಿ: ಕಲಾವಿದರುಗಳಿಗೆ, ಸಾಹಿತಿಗಳಿಗೆ ನೀಡಲಾಗುವ ಮಾಸಾಶನವನ್ನು ರಾಜ್ಯ ಸರಕಾರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇದು ಕಲಾವಿದರ ಬದುಕಿಗೆ ಒಂದಿಷ್ಟು ನೆರವಿನ ಊರುಗೋಲಾಗಲಿದೆ. ಸರಕಾರದ ನೂತನ ಆದೇಶದ ಪರಿಣಾಮ ಈವರೆಗೆ ಮಾಸಾಶನವನ್ನು ಪಡೆಯುತ್ತಿದ್ದ ಕಲಾವಿದರು, ಸಾಹಿತಿಗಳು 1500 ರೂ. ಬದಲಿಗೆ ಇನ್ಮುಂದೆ ಮಾಸಿಕ ಎರಡು ಸಾವಿರ ರೂ. ಪಡೆಯಲಿದ್ದಾರೆ.

ಬೇಡಿಕೆ ಈಡೇರಿಕೆ: ಕಳೆದ ಹಲವು ವರ್ಷಗಳಿಂದ ಮಾಸಾಶನ ಹೆಚ್ಚಳ ಮಾಡುವಂತೆ ಅನೇಕ ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸರಕಾರವನ್ನು ಆಗ್ರಹಿಸುತ್ತಲೇ ಇದ್ದವು. ಆದರೆ, ಬೇರೆ ಬೇರೆ ಕಾರಣ, ಆರ್ಥಿಕಹೊರೆಯನ್ನು ಮುಂದಿಟ್ಟು ಸರಕಾರ ಅನುಮೋದನೆ ನೀಡುತ್ತಿರಲಿಲ್ಲ. ಸರಕಾರದ ಮುಂದೆ ಪ್ರಸ್ತಾಪಿತ ಸಾಂಸ್ಕೃತಿಕ ನೀತಿಯಲ್ಲೂ ಈ ಹೆಚ್ಚಳಕ್ಕೆ ಪ್ರಸ್ತಾವನೆ ನೀಡಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಶಕ್ತ ಕಲಾವಿದರು ಹಾಗೂ ಸಾಹಿತಿಗಳಿಗೆ ವೃದ್ಧಾಪ್ಯದಲ್ಲಿ ನೆರವಾಗುವ ಕಾರಣದಿಂದ ಮಾಸಾಶನವನ್ನು ನೀಡುತ್ತಿತ್ತು.ಗೌರವಯುತವಾಗಿ ಬದುಕು ನಡೆಸಲು ಈ ಮಾಸಾಶನ ನೆರವಾಗುತ್ತಿತ್ತು. ಕೊಡುವುದು ಕೇವಲ 1500 ರೂ. ಸಾಕಾಗದೇ ಇದ್ದರೂ ಕನಿಷ್ಠ ಆರೋಗ್ಯ ನೆರವಿಗಾದರೂ ಅನುಕೂಲ ಆಗುತ್ತದೆ ಎಂದು ಪಡೆದುಕೊಳ್ಳುತ್ತಿದ್ದರು.

ಕಷ್ಟ ತಪ್ಪಿರಲಿಲ್ಲ: ಯೌವನದಲ್ಲಿ ರಂಗದಲ್ಲಿ ಮಿಂಚಿದ್ದವರು, ರಾಜನಾಗಿ ಮೆರೆದಿದ್ದವರು ವೃದ್ಧಾಪ್ಯದಲ್ಲಿ ಕಷ್ಟ ಅನುಭವಿಸುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಮಿಂಚಿದ್ದ ಅನೇಕರಿಗೆ ವೃದ್ಧಾಪ್ಯದಲ್ಲಿ ಬರೆಯಲಾಗದೇ ಆದಾಯ ಕೊರತೆ ಅನುಭವಿಸುತ್ತಿದ್ದರು. ಇಂಥವರಿಗೆ ನೆರವಾಗಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಸಾಶನದ ಮೂಲಕ ನೆರವಾಗುವ ಯತ್ನ ಮಾಡಿತ್ತು. ಯೋಜನೆ ಆರಂಭದಲ್ಲಿ ಮಾಸಿಕ 200, 300 ರೂ. ಪಡೆದವರೂ ಇದ್ದರು.

ದಿನದಿಂದ ದಿನಕ್ಕೆ ಏರಿಕೆಯಾದ ಬೆಲೆಗಳಿಗೆ ಸರಕಾರ ನೀಡುವ ಈ ಮೊತ್ತ ಏನಕ್ಕೂ ಸಾಲದು ಎಂಬ ಬೇಡಿಕೆಯ ಹಕ್ಕೊತ್ತಾಯ ಮಂಡಿಸುತ್ತಲೇ ಇದ್ದರು. 2013ರಲ್ಲಿ 1500 ರೂ.ಗೆ ಏರಿಸಲಾಗಿತ್ತು. ಇದೀಗ ಸರಕಾರಕ್ಕೆಕನ್ನಡ ಮತ್ತು ಸಂಸ್ಕೃತಿ ಇಲಾಖೆಯುಸಾಂಸ್ಕೃತಿಕ ನೀತಿಯ ಅನುಮೋದನೆಯಂತ ಮಂಡಿಸಿದ ಪ್ರಸ್ತಾವನೆಗೆ ಹಸಿರು ನಿಶಾನೆ ಸಿಕ್ಕಿದೆ. ಮಾಸಿಕ 500 ರೂ. ಹೆಚ್ಚಳ ಮಾಡಿ

ಆದೇಶ ಹೊರಡಿಸಲಾಗಿದೆ. ಮಾಸಿಕ 1500ರಿಂದ 2000 ರೂ.ಗೆ ಏರಿಸಿದಾಗ ಸರಕಾರಕ್ಕೆ 8,21,82,000 ರೂ. ಹೆಚ್ಚುವರಿ ಹೊರೆ ಬೀಳಲಿದೆ. ವರ್ಷಕ್ಕೆ 6000ಸಾವಿರ ರೂ.ಗಳನ್ನು. 13,697 ಕಲಾವಿದರು, ಸಾಹಿತಿಗಳು ಪಡೆದುಕೊಳ್ಳಲಿದ್ದಾರೆ. ಸರಕಾರದ ಅಧೀನ ಕಾರ್ಯದರ್ಶಿ ಪಿ.ಎಸ್‌. ಮಾಲತಿ ಅವರು ಕಳೆದ 16ರಂದು ಈ ಆದೇಶ ಹೊರಡಿಸಿದ್ದಾರೆ.

ಇನ್ನೂ ಅರ್ಜಿಗಳಿವೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಂದೆ ಪ್ರತಿ ದಿನವೂ ಮಾಸಾಶನಕ್ಕೆ ಅರ್ಜಿ ಬರುತ್ತಲೇ ಇವೆ.ಇಲಾಖೆ ಮಾಹಿತಿ ಪ್ರಕಾರ ವರ್ಷಕ್ಕೆ 25-30 ಸಾವಿರ ಅರ್ಜಿಗಳು ಬರಲಿವೆ. ಆದರೆ, ಸರಕಾರದ ಹಣಕಾಸಿನ ಮಿತಿ ಆಧರಿಸಿ ಅರ್ಜಿಗಳನ್ನು ಪರಿಶೀಲಿಸಿ ಮಾಸಾಶನಕ್ಕೆ ಅನುಮೋದನೆ ನೀಡಲಾಗುತ್ತಿದೆ. ಅನೇಕ ಕಲಾವಿದರು, ಸಾಹಿತಿಗಳು ಇಲಾಖೆಬಾಗಿಲಿಗೆ ಅಲೆಯುವುದೂ ಆಗಿದೆ, ಇನ್ನೂ ಸಿಕ್ಕಿಲ್ಲ ಎಂದು ದೂರುವವರೂ ಇದ್ದಾರೆ. ಸರಕಾರ ಈ ಅರ್ಜಿಗಳಿಗೂ ಮಾನ್ಯ ನೀಡಬೇಕು, ಎಲ್ಲ ಅರ್ಹ ಸಾಹಿತಿ, ಕಲಾವಿದರಿಗೂ ನೆರವು ಸಿಗಬೇಕು ಎಂಬುದು ಹಕ್ಕೊತ್ತಾಯವಾಗಿದೆ.

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.