Bhatkal:ಒಂದೇ ಒಂದು ಪಟಾಕಿ ಅಂಗಡಿ; ನಿರಾಸೆಯಿಂದ ಪಾಪಾಸಾದ ಗ್ರಾಹಕರು!
ನೂಕು ನುಗ್ಗಲಾಗಿದ್ದು ಮಾರಾಟಕ್ಕೆ ತಂದಿದ್ದ ಎಲ್ಲಾ ಪಟಾಕಿಗಳೂ ಖಾಲಿ...
Team Udayavani, Nov 11, 2023, 11:20 PM IST
ಭಟ್ಕಳ: ದೀಪಾವಳಿಯ ಪಟಾಕಿ ಮಾರಾಟಕ್ಕೆ ತಾಲೂಕಿನಲ್ಲಿ ಒಂದೇ ಒಂದು ಅಂಗಡಿಗೆ ತಹಸೀಲ್ದಾರ್ ಶರತ್ತು ಬದ್ಧ ಪರವಾನಿಗೆಯನ್ನು ನೀಡಿದ್ದು ದೀಪಾವಳಿಗೂ ಮುನ್ನವೇ ಪಟಾಕಿ ಸಂಪೂರ್ಣ ಖಾಲಿಯಾಗಿ ಗ್ರಾಹಕರು ನಿರಾಸೆಯಿಂದ ಪಾಪಾಸಾಗುವಂತಾಗಿದೆ.
ಇತ್ತೀಚೆಗೆ ಸರಕಾರದ ಆದೇಶದಂತೆ ಪಟಾಕಿ ಅಂಗಡಿಗಳನ್ನು ಹಾಕಲು ಹಲವಾರು ನಿಬಂಧನೆಗಳನ್ನು ವಿಧಿಸಿದ್ದು ಅಲ್ಲದೇ ಮಾರಾಟ ಮಡುವ ಪಟಾಕಿಗಳಲ್ಲೂ ಕೂಡಾ ಅನೇಕ ರೀತಿಯ ನಿಯಂತ್ರಣ ಹೇರಿತ್ತು. ಅದರಂತೆ ದೀಪಾವಳಿಗೆ ಪಟಾಕಿ ಮಾರಾಟ ಮಾಡುವವರು ತಾಲೂಕಾ ಆಡಳಿತದಿಂದ ಕಡ್ಡಾಯವಾಗಿ ಪರವಾನಿಗೆಯನ್ನು ಪಡೆದು ಪಟಾಕಿ ಅಂಗಡಿಗಳನ್ನು ಹಾಕಬೇಕಾಗಿದ್ದು ಅರ್ಜಿ ಸಲ್ಲಿಸಿದವರಲ್ಲಿ ಓರ್ವರಿಗೆ ಮಾತ್ರ ಪಟಾಕಿ ಮಾರಾಟ ಮಾಡಲು ಪರವಾನಿಗೆಯನ್ನು ನೀಡಲಾಗಿತ್ತು. ಶನಿವಾರ ಪಟಾಕಿ ಅಂಗಡಿಯಲ್ಲಿ ಒಂದೇ ಸಮನೆ ನೂಕು ನುಗ್ಗಲಾಗಿದ್ದು ಮಾರಾಟಕ್ಕೆ ತಂದಿದ್ದ ಎಲ್ಲಾ ಪಟಾಕಿಗಳೂ ಖಾಲಿಯಾಗಿ ಪಟಾಕಿ ಖರೀದಿಸಲು ಬಂದಿದ್ದ ಜನರು ನಿರಾಸೆಯಿಂದ ವಾಪಾಸು ಹೋಗುವಂತಾಯಿತು. ಹಲವರು ತಮ್ಮ ಇಷ್ಟದ ಪಟಾಕಿಗಳನ್ನು ಕೊಂಡು ಹೋಗಿ ದೀಪಾವಳಿಯಂದು ಪಟಾಕಿ ಹಚ್ಚಲು ಯೋಚಿಸಿದ್ದರೆ, ಪಟಾಕಿಯೇ ಸಿಗದೇ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂತು.
ನಾವು ಪ್ರತಿ ವರ್ಷವೂ ಕೂಡಾ ದೀಪಾವಳಿಯಂದು ಪಟಾಕಿಯನ್ನು ಹಚ್ಚಿ ಸಂಭ್ರಮಿಸುತ್ತಿದ್ದೆವು. ವರ್ಷದಲ್ಲಿ ಒಂದು ದಿನ ನಾವು ಮನೆಯವರು, ಅಕ್ಕ ಪಕ್ಕದ ಮನೆಯವರು ಸೇರಿ ಸಂಬ್ರಮಿಸುವುದಕ್ಕೂ ಕಲ್ಲು ಹಾಕಿದ ಸರಕಾರದ ಕ್ರಮ ಖಂಡನೀಯ. ಪಟಾಕಿ ಮಾರಾಟಿಕ್ಕೆ ಓರ್ವರಿಗೆ ಮಾತ್ರ ಪರವಾನಿಗೆಯನ್ನು ಕೊಟ್ಟಿರುವುದರಿಂದ ಈ ರೀತಿಯಾಗಿದೆ. ನಮ್ಮ ಹಬ್ಬಗಳಂದು ಸಂಬ್ರಮಕ್ಕೆ ತಡೆಯೊಡ್ಡುವ ಸರಕಾರದ ಕ್ರಮ ಸರಿಯಲ್ಲ.
-ಭವಾನಿಶಂಕರ ನಾಯ್ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ