Bhatkal:ಒಂದೇ ಒಂದು ಪಟಾಕಿ ಅಂಗಡಿ; ನಿರಾಸೆಯಿಂದ ಪಾಪಾಸಾದ ಗ್ರಾಹಕರು!

ನೂಕು ನುಗ್ಗಲಾಗಿದ್ದು ಮಾರಾಟಕ್ಕೆ ತಂದಿದ್ದ ಎಲ್ಲಾ ಪಟಾಕಿಗಳೂ ಖಾಲಿ...

Team Udayavani, Nov 11, 2023, 11:20 PM IST

1-wewqeewqe

ಭಟ್ಕಳ: ದೀಪಾವಳಿಯ ಪಟಾಕಿ ಮಾರಾಟಕ್ಕೆ ತಾಲೂಕಿನಲ್ಲಿ ಒಂದೇ ಒಂದು ಅಂಗಡಿಗೆ ತಹಸೀಲ್ದಾರ್ ಶರತ್ತು ಬದ್ಧ ಪರವಾನಿಗೆಯನ್ನು ನೀಡಿದ್ದು ದೀಪಾವಳಿಗೂ ಮುನ್ನವೇ ಪಟಾಕಿ ಸಂಪೂರ್ಣ ಖಾಲಿಯಾಗಿ ಗ್ರಾಹಕರು ನಿರಾಸೆಯಿಂದ ಪಾಪಾಸಾಗುವಂತಾಗಿದೆ.

ಇತ್ತೀಚೆಗೆ ಸರಕಾರದ ಆದೇಶದಂತೆ ಪಟಾಕಿ ಅಂಗಡಿಗಳನ್ನು ಹಾಕಲು ಹಲವಾರು ನಿಬಂಧನೆಗಳನ್ನು ವಿಧಿಸಿದ್ದು ಅಲ್ಲದೇ ಮಾರಾಟ ಮಡುವ ಪಟಾಕಿಗಳಲ್ಲೂ ಕೂಡಾ ಅನೇಕ ರೀತಿಯ ನಿಯಂತ್ರಣ ಹೇರಿತ್ತು. ಅದರಂತೆ ದೀಪಾವಳಿಗೆ ಪಟಾಕಿ ಮಾರಾಟ ಮಾಡುವವರು ತಾಲೂಕಾ ಆಡಳಿತದಿಂದ ಕಡ್ಡಾಯವಾಗಿ ಪರವಾನಿಗೆಯನ್ನು ಪಡೆದು ಪಟಾಕಿ ಅಂಗಡಿಗಳನ್ನು ಹಾಕಬೇಕಾಗಿದ್ದು ಅರ್ಜಿ ಸಲ್ಲಿಸಿದವರಲ್ಲಿ ಓರ್ವರಿಗೆ ಮಾತ್ರ ಪಟಾಕಿ ಮಾರಾಟ ಮಾಡಲು ಪರವಾನಿಗೆಯನ್ನು ನೀಡಲಾಗಿತ್ತು. ಶನಿವಾರ ಪಟಾಕಿ ಅಂಗಡಿಯಲ್ಲಿ ಒಂದೇ ಸಮನೆ ನೂಕು ನುಗ್ಗಲಾಗಿದ್ದು ಮಾರಾಟಕ್ಕೆ ತಂದಿದ್ದ ಎಲ್ಲಾ ಪಟಾಕಿಗಳೂ ಖಾಲಿಯಾಗಿ ಪಟಾಕಿ ಖರೀದಿಸಲು ಬಂದಿದ್ದ ಜನರು ನಿರಾಸೆಯಿಂದ ವಾಪಾಸು ಹೋಗುವಂತಾಯಿತು. ಹಲವರು ತಮ್ಮ ಇಷ್ಟದ ಪಟಾಕಿಗಳನ್ನು ಕೊಂಡು ಹೋಗಿ ದೀಪಾವಳಿಯಂದು ಪಟಾಕಿ ಹಚ್ಚಲು ಯೋಚಿಸಿದ್ದರೆ, ಪಟಾಕಿಯೇ ಸಿಗದೇ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂತು.

ನಾವು ಪ್ರತಿ ವರ್ಷವೂ ಕೂಡಾ ದೀಪಾವಳಿಯಂದು ಪಟಾಕಿಯನ್ನು ಹಚ್ಚಿ ಸಂಭ್ರಮಿಸುತ್ತಿದ್ದೆವು. ವರ್ಷದಲ್ಲಿ ಒಂದು ದಿನ ನಾವು ಮನೆಯವರು, ಅಕ್ಕ ಪಕ್ಕದ ಮನೆಯವರು ಸೇರಿ ಸಂಬ್ರಮಿಸುವುದಕ್ಕೂ ಕಲ್ಲು ಹಾಕಿದ ಸರಕಾರದ ಕ್ರಮ ಖಂಡನೀಯ. ಪಟಾಕಿ ಮಾರಾಟಿಕ್ಕೆ ಓರ್ವರಿಗೆ ಮಾತ್ರ ಪರವಾನಿಗೆಯನ್ನು ಕೊಟ್ಟಿರುವುದರಿಂದ ಈ ರೀತಿಯಾಗಿದೆ. ನಮ್ಮ ಹಬ್ಬಗಳಂದು ಸಂಬ್ರಮಕ್ಕೆ ತಡೆಯೊಡ್ಡುವ ಸರಕಾರದ ಕ್ರಮ ಸರಿಯಲ್ಲ.
-ಭವಾನಿಶಂಕರ ನಾಯ್ಕ.

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.