Karwar ಸಂಕ್ರುಭಾಗ ಬಳಿ ಬಸ್ ಸ್ಕಿಡ್: ಬಸ್ ನಲ್ಲಿದ್ದ ಸೀಬರ್ಡ್ ಕಾರ್ಮಿಕರಿಗೆ ಗಾಯ
Team Udayavani, Jan 4, 2024, 10:35 AM IST
ಕಾರವಾರ: ಕಾರವಾರ ಸಂಕ್ರುಭಾಗ ಬಳಿ ಸರ್ಕಾರಿ ಬಸ್ ಸ್ಕಿಡ್ ಆಗಿ ಬಸ್ ನಲ್ಲಿದ್ದ ಸೀಬರ್ಡ್ ನ 35 ಜನ ಕಾರ್ಮಿಕರಿಗೆ ಗಾಯವಾದ ಘಟನೆ ಇಂದು ಬೆಳಿಗ್ಗೆ 8.30 ರ ಸುಮಾರಿಗೆ ನಡೆದಿದೆ.
ಬಿಣಗಾದಿಂದ ಸೀಬರ್ಡ್ ಕೆಲಸದ ಗುತ್ತಿಗೆ ಕಂಪನಿಯಾದ ಸಾಬುರ್ಜಿ ಕಂಪನಿ ಕಾರ್ಮಿಕರು ಬಸ್ ನಲ್ಲಿ ಕಾರವಾರ ಹಾಗೂ ಬಿಣಗಾ ಕಾರ್ಮಿಕ ಕಾಲೋನಿಯಿಂದ ಯೋಜನಾ ಸ್ಥಳಕ್ಕೆ ಬಸ್ ನಲ್ಲಿ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಕ್ರುಭಾಗ ಬಳಿ ಬಸ್ ಘಟ್ಟದ ತಿರುವು ಇಳಿವಾಗ ಬಸ್ ಬ್ರೇಕ್ ಫೇಲ್ ಅಥವಾ ಸ್ಕಿಡ್ ಆಗಿದೆ. ರಾತ್ರಿ ಮಳೆ ಕಾರಣ ರಸ್ತೆ ಜಾರುವ ಸ್ಥಿತಿ ಯಲ್ಲಿತ್ತು ಎಂದು ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ನೈಜ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
ಬಸ್ ನಲ್ಲಿದ್ದ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆ ಪಕ್ಕ ಹೆಚ್ಚಿನ ಆಳದ ತಗ್ಗು ಇಲ್ಲದ ಕಾರಣ ಹಾಗೂ ಸೀಬರ್ಡ್ ರಕ್ಷಣಾ ಗೋಡೆ ಇರುವ ಕಾರಣ ಹೆಚ್ಚಿನ ಅನಾಹುತವಾಗುವುದು ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ