ಶ್ರೀಕಾಂತ ಹೆಗಡೆ ಪೇಟೇಸರರಿಗೆ ದಿ.ಚಂದುಬಾಬು ಪ್ರಶಸ್ತಿ
Team Udayavani, Jul 10, 2022, 3:12 PM IST
ಶಿರಸಿ: ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡಿದ ಚಂದುಬಾಬು ಅವರ ಹೆಸರಿನಲ್ಲಿ ನೀಡಲಾಗುವ ದಿ.ಚಂದುಬಾಬು ಪ್ರಶಸ್ತಿ-೨೦೨೨ನ್ನು ಈ ಬಾರಿ ಯಕ್ಷಗಾನ, ತಾಳಮದ್ದಲೆ ಸಹಿತ ಅತ್ಯಂತ ಹಳೆಯ ಕಾರ್ಯಕ್ರಮಗಳ ಧ್ವನಿ ಮುದ್ರಣ ಸಂಗ್ರಹಕಾರ ಶ್ರೀಕಾಂತ ಹೆಗಡೆ ಪೇಟೇಸರ ಅವರಿಗೆ ನೀಡಲಾಗುತ್ತಿದೆ.
ಯಕ್ಷ ಸಂಭ್ರಮದ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ ಈ ವಿಷಯ ಪ್ರಕಟಿಸಿದ್ದು, ಮೂಲತಃ ಸಿದ್ದಾಪುರ ತಾಲೂಕಿನ ಪೇಟೇಸರದ ಶ್ರೀಕಾಂತ ಹೆಗಡೆ ಅವರು, ಹಿಂದುಸ್ತಾನಿ ಸಂಗೀತಾಭ್ಯಾಸಿ, ಹವ್ಯಕ ಸಾಂಪ್ರದಾಯಿಕ ಹಾಡುಗಳ ಸಂಗ್ರಾಹಕರು. ಯಕ್ಷಗಾನ, ತಾಳಮದ್ದಲೆ, ಸಂಗೀತ ಕಾರ್ಯಕ್ರಮಗಳ ಸಂಯೋಜಕರು. ಮುಖ್ಯವಾಗಿ ಯಕ್ಷಗಾನ, ತಾಳಮದ್ದಲೆ, ಸಂಗೀತ ಸಹಿತ ಅತ್ಯಂತ ಹಳೆಯ ಕಾರ್ಯಕ್ರಮಗಳ ಧ್ವನಿ ಮುದ್ರಣ ಸಂಗ್ರಹಕಾರ, ಯೂಟ್ಯೂಬ್ ಮೂಲಕ ಇತರರಿಗೂ ಹಂಚುವವರು. ಶ್ರೀಕಾಂತ ನರಸಿಂಹ ಹೆಗಡೆ ಅವರ ಈ ಸದ್ದಿಲ್ಲದ ಕಲಾ ಸೇವೆಗೆ ಈ ಪ್ರಶಸ್ತಿ ನೀಡುವುದು ನಮಗೆ ಖುಷಿ ಹೆಚ್ಚಿಸಿದೆ ಎಂದಿದ್ದಾರೆ.
ಶ್ರೀಕಾಂತ ಹೆಗಡೆ ಅವರ ತಂದೆ ನರಸಿಂಹ ಹೆಗಡೆ ಅವರೂ ಭಾಗವತರಾಗಿ, ಮದ್ದಲೆವಾದಕರಾಗಿ, ಮುಮ್ಮೇಳದ ಕಲಾವಿದರಾಗಿ ಕೂಡ ಅನೇಕ ಶಿಷ್ಯರನ್ನು ಸಿದ್ಧ ಮಾಡಿದ್ದು ಗಮನಾರ್ಹ. ಅಪ್ಪನ ಕಲಾಸಕ್ತಿ ಮಗನಿಗೂ ಹರಿದು ಬಂದು ಇದೀಗ ಇವರ ಬಳಿ ಸುಮಾರು ಎರಡು ಸಾವಿರಕ್ಕೂ ಅಧಿಕ ಅಪರೂಪದ ಧ್ವನಿ ಮುದ್ರಣ ಇರುವದು ವಿಶೇಷವಾಗಿದೆ.
ಆಗಷ್ಟನಲ್ಲಿ ಯಕ್ಷ ಸಂಭ್ರಮ ಶಿರಸಿಯಲ್ಲಿ ನಡೆಸುವ ತಾಳಮದ್ದಲೆ ಸರಣಿಯ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ಸಂಸ್ಥೆ ಕೋಶಾಧ್ಯಕ್ಷ ಚಂದು ಸೀತಾರಾಮ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ