D. K. Shivakumar ಆಸ್ತಿ ಮಾರಿ ಜನರಿಗೆ 15 ಲಕ್ಷ ಕೊಡಲಿ: ಯತ್ನಾಳ್
ಪ್ರಿಯಾಂಕ್ ಖರ್ಗೆ ಆಸ್ತಿ ಮಾರಿ ದಲಿತರಿಗೆ ಮನೆ ಕಟ್ಟಿಕೊಡಲಿ
Team Udayavani, Apr 12, 2024, 6:40 PM IST
ಕಾರವಾರ: ಉಪಮುಖ್ಯಮಂತ್ರಿ, ಕನಕಪುರಬಂಡೆ ಪದೇ ಪದೇ 15 ಲಕ್ಷದ ವಿಷಯ ಮಾತಾಡುತ್ತಿದ್ದಾರೆ. ಜನರ ಆಕೌಂಟ್ಗೆ ಮೋದಿಯ ಹಣ ಬಂದಿಲ್ಲ ಎಂದು ಜಪ ಮಾಡುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಆಸ್ತಿ ಮಾರಿದರೆ ಕರ್ನಾಟಕದ ಪ್ರತಿ ಪ್ರಜೆಗೆ 15 ಲಕ್ಷ ರೂ. ಹಾಕಬಹುದು ಆ ಕೆಲಸ ಮೊದಲು ಮಾಡಿ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಅವರು, ನಾನು ಹೇಳಿದಂತೆ ಕೇಳು. ನಿನ್ನ ಆಸ್ತಿ ಮಾರಿ, ಜನರ ಆಕೌಂಟ್ಗೆ ದುಡ್ಡು ಹಾಕು. ಮೋದಿ ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಸುಮ್ಮನೆ ಮಾತನಾಡುವ ಬದಲು ಆಸ್ತಿ ಮಾರಿ ಎಲ್ಲರ ಅಕೌಂಟ್ಗೆ ದುಡ್ಡು ಹಾಕಪಾ. ಡಿಕೆಶಿ ಹಾಗೇ ನಮ್ಮ ಕಡೆ ಪ್ರಿಯಾಂಕ್ ಖರ್ಗೆ ಅಂತಾ ಒಬ್ಬ ಇದಾನ. ಅವನೂ ಸಹ ಬಿಜೆಪಿಯವರು 15 ಲಕ್ಷ ರೂ. ಹಾಕಿಲ್ಲ ಅಂತ ಪದೇ ಪದೇ ಹೇಳ್ತಿರ್ತಾನೆ. ಪ್ರಿಯಾಂಕ್ ನಿಮ್ಮ ಅಪ್ಪ ಮಾಡಿದ ಆಸ್ತಿ ಬೇಕಾದಷ್ಟಿದೆ. ನಿನ್ನ ಆಸ್ತಿ ಮಾರಿ ಕರ್ನಾಟಕದ ದಲಿತರಿಗೆ ಮನೆ ಕಟ್ಟಿಕೊಡು. ಸುಮ್ಮನೆ ದಲಿತರ ಪರ ಅಂತಾ ಮಾತಾಡೋದಲ್ಲ. ಅವರಿಗಾಗಿ ನಿನ್ನ ಆಸ್ತಿ ಸ್ವಲ್ಪ ಖರ್ಚು ಮಾಡು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ