ಉತ್ಸಾಹ ಹೆಚ್ಚಿಸಿದ ಮೀನು ಬೇಟೆ; 6ರಂದು ಸಮುದ್ರಕ್ಕಿ ಳಿಯಲಿವೆ ಬೋಟ್‌ ಗಳು


Team Udayavani, Aug 3, 2023, 10:15 AM IST

ಉತ್ಸಾಹ ಹೆಚ್ಚಿಸಿದ ಮೀನು ಬೇಟೆ; 6ರಂದು ಸಮುದ್ರಕ್ಕಿ ಳಿಯಲಿವೆ ಬೋಟ್‌ ಗಳು

ಕಾರವಾರ: ಮೀನು ಸಂತಾನೋತ್ಪತ್ತಿ ಕಾರಣದಿಂದ ಜೂನ್‌-ಜುಲೈನಲ್ಲಿ ಮೀನು ಬೇಟೆಗೆ ವಿರಾಮದ ನಂತರ ನಿನ್ನೆಯಿಂದ ಸಮುದ್ರ ಮೀನುಗಾರಿಕೆ ಆರಂಭವಾಗಿದೆ. ಉತ್ತರ ಕನ್ನಡದ ಮೀನುಗಾರರು ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ಪ್ರಾರಂಭಮಾಡಿದ್ದಾರೆ.

ಸಮುದ್ರಕ್ಕೆ ಮೀನು ಬೇಟೆಗೆ ಇಳಿಯಲು ಹವಣಿಸುತ್ತಿರುವ ಮೀನುಗಾರರ ಉತ್ಸಾಹ ಇದೀಗ ಹೆಚ್ಚಿದೆ. ಟ್ರಾಲರ್‌ಗಳು ಸಮುದ್ರಕ್ಕೆ ನಿನ್ನೆಯಿಂದ ತೆರಳಿವೆ. ನಿರಾಶಾದಾಯಕವಲ್ಲದ ಮೀನು ಬೇಟೆಯೂ ಆಗಿದೆ. ಆದರೆ ಇಪ್ಪತ್ತು ನಾಟಿಕಲ್‌ ಮೈಲಿಗಿಂತ ದೂರ ಸಮುದ್ರತನಕ ಮಾತ್ರ ಮತ್ಸ್ಯ ಬೇಟೆ ಸಾಧ್ಯವಾಗಿದೆ.

ಆಳ ಸಮುದ್ರಕ್ಕೆ ತೆರಳುವ ಪರ್ಷಿಯನ್‌ ದೋಣಿಗಳು ಆಗಸ್ಟ್‌ 6ರ ನಂತರ ಕಡಲಿಗೆ ಇಳಿಯಲಿವೆ. ನಾವು ನಮ್ಮ ದೋಣಿಗಳನ್ನು ನಿರ್ವಹಣೆ ಮತ್ತು ದುರಸ್ತಿ ಮಾಡಲು ಜೂನ್‌-ಜುಲೈ ಅವಧಿಯನ್ನು ಬಳಸಿದೆವು. ಕಡಲ ಮಡಿಲ ಆಶೀರ್ವಾದವಿರಲೆಂದು ಹಲವಾರು ವಿಶೇಷ ಪೂಜೆಗಳನ್ನು ಮಾಡಿ, ಕಡಲಿಗೆ ಇಳಿಯುವ ಸಂಪ್ರದಾಯವಿದೆ. ಅದನ್ನು ಆ. 1ರಂದು ಪೂರೈಸಿದೆವು. ಮೀನುಗಾರಿಕೆಯ ಈ ಪುನರಾರಂಭವನ್ನು ನಾವು ಮೀನುಗಾರಿಕೆಯ ಹೊಸ ವರ್ಷವೆಂದು ಪರಿಗಣಿಸುತ್ತೇವೆ. ಏಕೆಂದರೆ ಈ ನಿಷೇಧವು ಮೀನುಗಳ ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತದೆ. ಪ್ರತಿ ವರ್ಷದಂತೆ ಒಡಿಶಾ ಮತ್ತು ಇತರ ರಾಜ್ಯಗಳಿಂದ ನೂರಾರು ಕಾರ್ಮಿಕರು ಬಂದು ನಮ್ಮ ದೋಣಿಗಳಲ್ಲಿ ಕೆಲಸ ಮಾಡುತ್ತಾರೆ ಎಂದು ಗಣೇಶ್‌ ತಾಂಡೇಲ್‌ ವಿವರಿಸಿದರು.

ಜಿಲ್ಲೆಯಲ್ಲಿ 500 ಪರ್ಷಿಯನ್‌ ದೋಣಿಗಳು ಸೇರಿದಂತೆ, 1139 ಯಾಂತ್ರೀಕೃತ ದೋಣಿಗಳಿವೆ. ಮಳೆ ಇಳಿಮುಖವಾಗಿದ್ದು, ಸಮುದ್ರ ಶಾಂತ ಸ್ಥಿತಿಗೆ ಬರುತ್ತಿದೆ. ಸಮುದ್ರಕ್ಕೆ ಇಳಿಯುತ್ತಿರುವ ಮೀನುಗಾರರಲ್ಲಿ ಸಂಭ್ರಮ ಮನೆ ಮಾಡಿದೆ. 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ 7.3 ಲಕ್ಷ ಟನ್‌ ಗಳಷ್ಟು ಮೀನಿನ ಉತ್ಪಾದನೆ ಆಗಿತ್ತು. ಈ ಒಟ್ಟು ಫಿಶ್‌ ಕ್ಯಾಚಿಂಗ್‌ನಲ್ಲಿ 1.31 ಲಕ್ಷ ಟನ್‌ ಉತ್ಪಾದನೆ ಉತ್ತರ ಕನ್ನಡದ ಕೊಡುಗೆಯಾಗಿದೆ ಎಂದು ಮೀನುಗಾರಿಕಾ ಉಪ ನಿರ್ದೇಶಕ ಪ್ರತೀಕ್‌ ಹೇಳಿದರು.

ಆಗಸ್ಟ್‌ ಮೊದಲ ವಾರದಲ್ಲಿ ಚಂಡಮಾರುತ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದು ಇತ್ತೀಚೆಗೆ ಪ್ರಾರಂಭವಾಗಿರುವ ಮೀನುಗಾರಿಕೆಯನ್ನು ಇನ್ನೂ ಸ್ವಲ್ಪ ಸಮಯದವರೆಗೆ ಮುಂದೂಡುವಂತೆ ಮಾಡಬಹುದು. ಆದಾಗ್ಯೂ, ಮೀನುಗಾರರು ಇದನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ.

ಅಂಥ ಚಂಡಮಾರುತವು ದೊಡ್ಡ ಪ್ರಮಾಣದಲ್ಲಿ ಮೀನು ಹಿಡಿಯಲು (ಫಿಶ್‌ ಕ್ಯಾಚಿಂಗ್‌ಗೆ ) ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಕಳೆದ ವರ್ಷ ಚಂಡಮಾರುತ ಬಂದಿತ್ತು. ಇದರ ಪರಿಣಾಮವಾಗಿ 2.5 ಲಕ್ಷ ಟನ್‌ ಮೀನು ಹೆಚ್ಚುವರಿಯಾಗಿ ಬಲೆಗೆ ಬಿದ್ದವು. ಈ ವರ್ಷವೂ ಅಂತಹ ಬೆಳವಣಿಗೆಗೆ ಕಾರಣವಾಗಬಹುದು ಎಂದು ಮಾರುತಿ ತಾಂಡೇಲ್‌ ಹೇಳಿದರು. ಮೀನುಗಾರಿಕೆ ಉತ್ತರ ಕನ್ನಡದಲ್ಲಿ ಆರಂಭವಾಗಿದ್ದು, ನಿಧಾನಕ್ಕೆ ಮೀನು ಉದ್ಯಮ ಚೇತರಿಸಿಕೊಳ್ಳತೊಡಗಿದೆ.
ಮೀನುಗಾರಿಕೆಯ ಎರಡನೇ ದಿನ ನಿರಾಶೆಯಂತೂ ಆಗಿಲ್ಲ.

2022-23ನೇ ಸಾಲಿನಲ್ಲಿ ರಾಜ್ಯದಲ್ಲಿ 7.3 ಲಕ್ಷ ಟನ್‌ಗಳಷ್ಟು ಮೀನಿನ ಉತ್ಪಾದನೆ ಆಗಿತ್ತು. ಈ ಒಟ್ಟು ಫಿಶ್‌ ಕ್ಯಾಚಿಂಗ್‌ನಲ್ಲಿ
1.31 ಲಕ್ಷ ಟನ್‌ ಉತ್ಪಾದನೆ ಉತ್ತರ ಕನ್ನಡದ ಕೊಡುಗೆಯಾಗಿದೆ.
ಪ್ರತೀಕ್‌, ಮೀನುಗಾರಿಕಾ ಉಪ ನಿರ್ದೇಶಕ, ಕಾರವಾರ

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.