![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
ಚಿಕಿತ್ಸೆ ಪಡೆದರಷ್ಟೇ ಕೋವಿಡ್ ದಿಂದ ಮುಕ್ತಿ
ಅನಗತ್ಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ; ಸೋಂಕಿತರಿಗೆ ಮನೋಸ್ಥೈರ್ಯ ತುಂಬುವುದು ಮುಖ್ಯ: ಡಿಸಿ
Team Udayavani, May 24, 2020, 11:05 AM IST
![ಚಿಕಿತ್ಸೆ ಪಡೆದರಷ್ಟೇ ಕೋವಿಡ್ ದಿಂದ ಮುಕ್ತಿ](https://www.udayavani.com/wp-content/uploads/2020/05/karwar-dc-620x397.jpg)
ಕಾರವಾರ: ಕೋವಿಡ್ -19 ಒಂದು ಸಹಜ ರೋಗ ಲಕ್ಷಣವಾಗಿದ್ದು, ವೈದ್ಯರಿಂದ ಚಿಕಿತ್ಸೆಗೊಳಪಟ್ಟಲ್ಲಿ ಗುಣಮುಖರಾಗಲು ಸಾಧ್ಯವಿದ್ದು, ಜನರು ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್ ಹೇಳಿದರು. ಶನಿವಾರ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್ -19
ವಾರ್ಡ್ನಿಂದ 20 ಗುಣಮುಖರನ್ನುಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋವಿಡ್ -19 ಗೆ ಸಂಬಂಧಿಸಿದಂತೆ ಜನರಲ್ಲಿ ತಿಳಿವಳಿಕೆ ಇರಬೇಕು, ಅಷ್ಟೇ. ಶನಿವಾರ ಕಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಯಾದವರಲ್ಲಿ ಎಲ್ಲಾ ವಯೋಮಾನ ಮತ್ತು ವರ್ಗದವರಿದ್ದು, ಎಲ್ಲರೂ ಚಿಕಿತ್ಸೆಗೆ ಸಹಕಾರ ನೀಡಿದ್ದಾರೆ. ಇವರು ಮುಂದಿನ 14 ದಿನ ಕೂಡ ಅರೋಗ್ಯಾಧಿಕಾರಿಗಳ ನಿಗಾದಲ್ಲಿರುವರು. ಜೋಯಿಡಾ
ತಾಲೂಕಿನ ಯುವಕ ಗೋವಾದಲ್ಲಿ ಕೋವಿಡ್ -19 ಪರೀಕ್ಷೆಗೊಳಗಾಗಿ ಆಸ್ಪತ್ರೆಯಲ್ಲಿದ್ದು, ಆತನ ವರದಿಯೂ ನೆಗಟಿವ್ ಬಂದಿದೆ. ಆ ಯುವಕನೂ ಶನಿವಾರ ಬಿಡುಗಡೆ ಆಗುತ್ತಿದ್ದಾನೆ. ಯಾರೂ ಆತಂಕ ಪಡಬೇಕಿಲ್ಲ. ಎಲ್ಲ ಸೋಂಕಿತರಿಗೆ ಮನೋಸ್ಥೈರ್ಯ ತುಂಬಿದರು.
ಎಸ್ಪಿ ಶಿವಪ್ರಕಾಶ್ ದೇವರಾಜ ಮಾತನಾಡಿ, ಮೇ 25ರಂದು ರಂಜಾನ್ ಹಬ್ಬ ಇದ್ದು, ಈ ಸಂದರ್ಭದಲ್ಲಿ ಯಾರೂ ಗುಂಪು – ಗುಂಪಾಗಿ ಪ್ರಾರ್ಥನೆ ಸಲ್ಲಿಸಬಾರದು. ಯಾರೇ ಆಗಲಿ ಜನರು ಗುಂಪಾಗಿ ಯಾವುದೇ ಚಟುವಟಿಕೆಯಲ್ಲಿ ತೊಡಗಿದಾಗ ಕೊರೊನಾ ಸೋಂಕು ಹರಡುವ ಸಂಭವ ಇದೆ. ಈ ಹಿನ್ನೆಲೆಯಲ್ಲಿ ಜನರು ಗುಂಪಾಗಿ ಸೇರುವುದು ಸರಕಾರ ನಿರ್ಬಂಧಿಸಿದ್ದು ಇದಕ್ಕೆ ಜನರು ಸ್ಪಂದಿಸಬೇಕೆಂದರು. ಪಿಜಿಷಿಯನ್ ಡಾ| ರಾಜು ಹಾಗೂ ಚಿಕ್ಕ ಮಕ್ಕಳ ತಜ್ಞರು ತಾವು ಸೋಂಕಿತರಿಗೆ ಚಿಕಿತ್ಸೆ ನೀಡಿದ ಅನುಭವ ಹಂಚಿಕೊಂಡರು. ಜಿಪಂ ಸಿಇಒ ಎಂ. ರೋಶನ್, ಕಾರವಾರ ವೈದ್ಯಕೀಯ ವಿಜ್ಞಾಗಳ ಸಂಸ್ಥೆ ನಿರ್ದೇಶಕ ಡಾ| ಗಜಾನನ ನಾಯ್ಕ, ಡಿಎಚ್ಒ ಡಾ| ಜಿ.ಎನ್. ಅಶೋಕಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shirur landslide; Green signal for National highway traffic in three or four days?](https://www.udayavani.com/wp-content/uploads/2024/07/1-27-150x83.jpg)
Shirur landslide; ರಾ.ಹೆದ್ದಾರಿ ಸಂಚಾರಕ್ಕೆ ಮೂರ್ನಾಲ್ಕು ದಿನಗಳಲ್ಲಿ ಗ್ರೀನ್ ಸಿಗ್ನಲ್ ?
![Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ](https://www.udayavani.com/wp-content/uploads/2024/07/shiruu-150x83.jpg)
Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ
![1-ccc-aa](https://www.udayavani.com/wp-content/uploads/2024/07/1-ccc-aa-150x94.jpg)
Shiruru hill collapse; 10 ದಿನದಿಂದ ಇಲ್ಲೇ ಇದ್ದೇನೆ : ಟೀಕೆಗಳಿಗೆ ಶಾಸಕ ಸೈಲ್ ಬೇಸರ
![1–eewr-aa-aa](https://www.udayavani.com/wp-content/uploads/2024/07/1-eewr-aa-aa-150x91.jpg)
Shiruru hill collapse; ಮಣ್ಣು ತೆಗೆಯುವ ಕಾರ್ಯಾಚರಣೆ ವೇಳೆ ಸಿಕ್ಕ ಹೋಟೆಲ್ ಅವಶೇಷಗಳು
![1–eewr-aa](https://www.udayavani.com/wp-content/uploads/2024/07/1-eewr-aa-150x89.jpg)
Shiruru hill collapse; ನದಿಯ ನಾಲ್ಕು ಕಡೆ ಅವಶೇಷಗಳು ಬೆಳಕಿಗೆ:ಇಂದ್ರಬಾಲನ್ ನಂಬಿಯಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.