ಸಣ್ಣ ಮೊತ್ತದ ಟೆಂಡರ್ ಕರೆಯಲು ಒತ್ತಾಯ
Team Udayavani, Oct 2, 2020, 6:11 PM IST
ಯಲ್ಲಾಪುರ: ವಿದ್ಯುತ್ ನಿಗಮದ ಟೆಂಡರ್ ಪ್ರಕ್ರಿಯೆಲ್ಲಿ ದೊಡ್ಡ ಮೊತ್ತದ ಟೆಂಡರ್ ಬದಲು ಸಣ್ಣ ಮೊತ್ತದ ಟೆಂಡರ್ ಕರೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿ ವತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಗುತ್ತಿಗೆದಾರರು ಹಾಗೂ ಇದಕ್ಕೆ ಸಂಬಂಧಿಸಿದ ಕಾರ್ಮಿಕರು ಹೆಸ್ಕಾಂ ಗುತ್ತಿಗೆ ಕಾಮಗಾರಿ ಅವಲಂಬಿಸಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಆದರೆ ಈಗಾಗಲೇ ಇ-ಪ್ರೊಕ್ಯೂರ್ವೆುಂಟ್ನಲ್ಲಿ ಪ್ರಕಟಿಸಿರುವ ಟೆಂಡರ್ ಭಾರಿ ಮೊತ್ತದ್ದಾಗಿದ್ದು, ಜಿಲ್ಲೆಯ ಸಣ್ಣ ಗುತ್ತಿಗೆದಾರರು ಟೆಂಡರ್ನಲ್ಲಿ ಭಾಗವಹಿಸುವುದು ಕಷ್ಟಸಾಧ್ಯವಾಗಿದೆ. ಆದರೂ ಈಗ ದೊಡ್ಡ ಮೊತ್ತದ ಟೆಂಡರ್ ಕರೆದಿರುವುದರಿಂದ ಗುತ್ತಿಗೆದಾರರುಕೋವಿಡ್ನಂತಹ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದಾರೆ. ಈಗ ದೊಡ್ಡ ಮೊತ್ತದ ಟೆಂಡರ್ ಕರೆದಿರುವುದು ಸಾಮಾನ್ಯ ಗುತ್ತಿಗೆದಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದೊಡ್ಡ ಮೊತ್ತದ ಟೆಂಡರ್ ಗಳನ್ನು ಹಿಂತೆಗೆದುಕೊಂಡು ಇ-ಟೆಂಡರ್ಗಳನ್ನುಉಪವಿಭಾಗದ ಮಟ್ಟದಲ್ಲಿ ಅಥವಾ ಕಡಿಮೆ ಮೊತ್ತದ ಟೆಂಡರ್ಗಳನ್ನಾಗಿ ಕರೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕಾಧ್ಯಕ್ಷ ವೇಣುಗೋಪಾಲ ಮದ್ಗುಣಿ, ಸದಸ್ಯರಾದ ಶಾಂತಾರಾಮ ಹೆಗಡೆ, ಶಿವರಾಮ ಹಂಗಾರಿ, ಬಾಲಚಂದ್ರ ಕುಂಬ್ರಿತೋಟ, ದಿನೇಶ ರೇವಣಕರ, ದಾದಾಪೀರ ಹನುಮಸಾಗರ, ಮಕ್ಬೂಲ್, ರಾಘು ಜಡ್ಡಿಪಾಲ, ಪ್ರಶಾಂತ ಮಹೇಕರ, ರೀಗನ್ ಡಿಸೋಜಾ, ಶ್ರೀನಿವಾಸ, ಜಾಫರ್ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್