ಅಂತೂ ಯಕ್ಷಗಾನ ಪಠ್ಯಕ್ಕೆ ಮುದ್ರಣ ಭಾಗ್ಯ


Team Udayavani, Nov 23, 2018, 6:25 AM IST

yakshagana-textbook.jpg

ಶಿರಸಿ: ಯಕ್ಷಗಾನ ಪಠ್ಯ ರಚನೆಗೊಂಡು ಆರು ವರ್ಷಗಳ ಬಳಿಕ ಮುದ್ರಣಕ್ಕೆ ಸಮ್ಮತಿ ಸಿಕ್ಕಿದೆ. ಪ್ರಾಥಮಿಕ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್‌.ಎಂ. ರಾಘವೇಂದ್ರ ಅವರು (ಏಕ ಕಡತ ಸಂಖ್ಯೆ ಕ.ಪ.ಪು.ಸಂ/ ಯಪಪುರ 01/2011-12) ಉಲ್ಲೇಖದಡಿ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕರಿಗೆ ನ.16ರಂದು ಪತ್ರ ಬರೆದು ಆದೇಶಿಸಿದ್ದಾರೆ.

ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಯಕ್ಷಗಾನ ಪಠ್ಯವನ್ನು 5 ಸಾವಿರ ಸಂಖ್ಯೆಯಲ್ಲಿ ಮುದ್ರಿಸಲು ಸೂಚಿಸಿದ್ದಾರೆ. ಈ ಮೂಲಕ ಬಾಕಿ ಉಳಿದಿದ್ದ ಆಗಬೇಕಾದ ಕಾರ್ಯಕ್ಕೆ ಚಾಲನೆ ಸಿಕ್ಕಂತಾಗಿದ್ದು, ಯಕ್ಷ ಪ್ರಿಯರಲ್ಲಿ ಹರ್ಷ ತಂದಿದೆ.

ಬಡಗು, ತೆಂಕು, ಬಡಾಬಡಗು ಯಕ್ಷಗಾನ ನಾಡಿನ ಜನಪ್ರಿಯ ಕಲೆಗಳು. ಆದರೆ, ಇದಕ್ಕೆ ಸಂಬಂಧಿಸಿ ಸಂಗೀತ ಮಾದರಿಯಲ್ಲಿ ಪಠ್ಯಗಳು ರಚನೆ ಆಗಿರಲಿಲ್ಲ. ಜಾನಪದ, ಶಾಸ್ತ್ರೀಯ ಎಂಬ ಗೊಂದಲದ ಮಧ್ಯೆ ಶಾಸ್ತ್ರೀಯ ಕಲೆಯ ಮಾನ್ಯತೆಗೆ ಪಠ್ಯ ರಚನೆಯ ಅಗತ್ಯತೆ ಕೂಡ ಇತ್ತು. ಯಕ್ಷಗಾನ ಒಂದೇ ಆದರೂ ಒಂದೊಂದು ಕಡೆ ಒಂದೊಂದು ಮಾದರಿಯಲ್ಲಿ ಪಾಠ ಮಾಡುವ ರೂಢಿಯಲ್ಲಿತ್ತು. ಏಕ ಸೂತ್ರ ಅಳವಡಿಕೆ ಮಾಡಿ ಅದಕ್ಕೊಂದು ಶಾಸ್ತ್ರೀಯ ರೂಪ ನೀಡಬೇಕೆಂಬ ಆಗ್ರಹಗಳೂ  ವ್ಯಕ್ತವಾಗುತ್ತಲೇ ಇದ್ದವು.
ಆಗಿದ್ದು ಆಗಲೇ!: ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ ಯಕ್ಷಗಾನಕ್ಕೂ ಪಠ್ಯ ರಚನೆಯ ಪ್ರಸ್ತಾಪಕ್ಕೆ ಒಂದು ರೂಪ ಕೊಡುವ ಪ್ರಯತ್ನ ನಡೆಯಿತು. 

ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತ್‌, ಸದಾನಂದ ಐತಾಳ, ಪ್ರಕಾಶ ಮೂಡಿತ್ತಾಯ ಹಾಗೂ ಇತರನ್ನೊಳಗೊಂಡ ತಜ್ಞರ ಸಮಿತಿ ಯಕ್ಷಗಾನ ಪಠ್ಯಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ಒಂದು ರೂಪ ನೀಡಿತ್ತು.ಆದರೆ, ಸರ್ಕಾರಗಳು ಬದಲಾದಂತೆ ಕಡತ ಕೂಡ ಮುಂದುವರಿಯಲಿಲ್ಲ. ಈಗ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ವಿದ್ವಾಂಸ ಪ್ರೊ.ಎಂ.ಎ.ಹೆಗಡೆ ದಂಟ್ಕಲ್‌ ಅವರು ಬಂದ ಬಳಿಕ ಇದಕ್ಕೆ ಚಾಲನೆ ಸಿಕ್ಕಿದೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಮೋದ ಮಧ್ವರಾಜ್‌ ಕಡತ ಹುಡುಕಿಸಿ ಪಠ್ಯಪುಸ್ತಕ ಮುದ್ರಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಶಾಲಿನಿ ಅವರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ.

ಏನಿದೆ ಇಲ್ಲಿ?: ತೆಂಕು ಬಡಗು ಸೇರಿ ಯಕ್ಷಗಾನ ಕಲಿಕೆಗೆ ಅವಕಾಶ ಆಗುವ ಸೂತ್ರಗಳು ಇಲ್ಲಿವೆ. ಸಂಗೀತ ಪರೀಕ್ಷೆಯ ಮಾದರಿಯಲ್ಲಿ ಜೂನಿಯರ್‌ ಹಾಗೂ ಸೀನಿಯರ್‌ ಪರೀಕ್ಷೆಗಳಿಗೆ ಅಗತ್ಯವಾದ ಪಠ್ಯಗಳು ಆಸಕ್ತರ ಕೈಗೆ ಸಿಗಲಿವೆ. ಈಗಾಗಲೇ ಹಲವಡೆ ಯಕ್ಷಗಾನ ತರಬೇತಿ ನೀಡುತ್ತಿರುವ ಕೇಂದ್ರಗಳಿಗೆ, ವಾರಕ್ಕೊಂದು ತರಗತಿ ನಡೆಸುವ ಶಾಲೆಗಳಿಗೆ, ಯಕ್ಷಗಾನ ಅಕಾಡೆಮಿ ನಡೆಸುತ್ತಿರುವ ತರಬೇತಿ ಶಿಬಿರಗಳಿಗೆ ಅನುಕೂಲ ಆಗಲಿದೆ. ನಾಡಿನ ಎಲ್ಲೆಡೆ ಒಂದೇ ಮಾದರಿಯ ಪಠ್ಯ ಸಿಗಲಿದೆ. ಇದಕ್ಕೆ ಅಗತ್ಯವಾದ ಕೆಲವು ಮೂಲ ಸೌಕರ್ಯ, ಕಲಿಕಾ ಸಾಮಗ್ರಿಗಳನ್ನೂ ಇಲಾಖೆ ಒದಗಿಸಬೇಕಾಗಬಹುದಾಗಿದೆ.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪಠ್ಯ ರಚನೆಯ ಬಳಿಕ ಕಲಿಕಾ ಹಾಗೂ ಪರೀûಾ ವಿಧಾನಗಳಿಗೆ ಆದ್ಯತೆ ನೀಡಬೇಕಾಗಿದೆ. ಸೀನಿಯರ್‌, ಜೂನಿಯರ್‌ ಬಳಿಕ ವಿದ್ವತ್‌ ಪರೀಕ್ಷೆಗಳಿಗೂ ಪಠ್ಯ ರಚನೆ ಮಾಡಬೇಕಿದೆ. ಯಕ್ಷಗಾನ ಕಲಿತೇ ಕಲಾವಿದರು ಆದವರು ಇಲ್ಲ. ಹಾಗೆ ಕೇಂದ್ರಗಳಲ್ಲಿ ಕಲಿತವರಿಗೆ ಪ್ರಮಾಣ ಪತ್ರ ಕೂಡ ಇಲ್ಲ. ಆದರೆ, ಅವರು ನಡೆಸುವ ಕಲಿಕಾ ಕೇಂದ್ರಗಳಿಗೂ ಮಾನ್ಯತೆ ನೀಡಿ ಯಕ್ಷಗಾನ ಸೀಮೋಲ್ಲಂಘನಕ್ಕೆ ಮುಂದಾಗಬೇಕಿದೆ.

ಯಕ್ಷಗಾನ ಪಠ್ಯ ಮುದ್ರಣಕ್ಕೆ ಹೊರಟಿದ್ದು ಖುಷಿಯಾಗಿದೆ. ಅಂದಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು. ಯಕ್ಷಗಾನ ಪ್ರಿಯರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ.
– ಪ್ರೊ.ಎಂ.ಎ.ಹೆಗಡೆ ದಂಟ್ಕಲ್‌, ಅಧ್ಯಕ್ಷರು ಯಕ್ಷಗಾನ ಅಕಾಡೆಮಿ

ಕಲಿಕೆಯ ದೃಷ್ಟಿಯಿಂದ ಇಂಥ ಪಠ್ಯ ರಚನೆ ಆಗಿದ್ದು, ಈಗಲಾದರೂ ಮುದ್ರಣಕ್ಕೆ ಹೋಗಿದ್ದು ಸಂತಸ ಮೂಡಿಸಿದೆ. ಇದು ಎಲ್ಲ ಆಸಕ್ತರ ಕೈಗೆ ಸಿಕ್ಕು ಅಧ್ಯಯನಕ್ಕೆ ಅನುಕೂಲವಾಗಲಿ.
– ಕೇಶವ ಹೆಗಡೆ ಕೊಳಗಿ, ಪ್ರಸಿದ್ಧ ಭಾಗವತರು

– ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.