Karwar; ತುಂಡಾದ ಬಸ್ ಕ್ಲಚ್ ಪ್ಲೇಟ್: ತಪ್ಪಿದ ಅನಾಹುತ
Team Udayavani, Jan 2, 2024, 1:07 PM IST
ಕಾರವಾರ: ಕಾರವಾರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಚಲಿಸುವಾಗಲೇ ಕ್ಲಚ್ ಪ್ಲೇಟ್ ತುಂಡಾದ ಪರಿಣಾಮ ಪ್ರಯಾಣಿಕರು ಗಾಯವಾದ ಘಟನೆ ಕಾರವಾರ ನಗರದ ಹಬ್ಬುವಾಡದ ಗೋಲ್ಡನ್ ಬೇಕರಿ ಸಮೀಪ ನಡೆದಿದೆ.
ಬಸ್ ನಗರವನ್ನು ದಾಟುವ ಮುನ್ನ ಕ್ಲಚ್ ಪ್ಲೇಟ್ ತುಂಡಾಗಿದೆ. ಬಸ್ ಉರುಳಿದ್ದರೆ ಭಾರೀ ಪ್ರಮಾಣದಲ್ಲಿ ಜನರಿಗೆ ಗಾಯಗಳಾಗುತ್ತಿದ್ದವು. ಅದೃಷ್ಟವಶಾತ್ ಬಸ್ ವೇಗ ಕಡಿಮೆ ಇದ್ದ ಕಾರಣ ಹೆಚ್ಚಿನ ಅನಾಹುತವಾಗಿಲ್ಲ. ಬಸ್ ನಲ್ಲಿ 50 ಜನ ಪ್ರಯಾಣಿಕರಿದ್ದು, 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೇ ಬಸ್ ರಸ್ತೆ ಮಧ್ಯೆ ನಿಂತ ಪರಿಣಾಮ ಹಬ್ಬುವಾಡ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಸಂಚಾರ ಒಂದು ತಾಸು ಬಂದ್ ಆಗಿತ್ತು. ಬಸ್ ಸ್ಥಳಾಂತರ ಮಾಡಿದ ನಂತರ ಕಾರವಾರ ಹಬ್ಬುವಾಡ ರಸ್ತೆಯಲ್ಲಿ ವಾಹನ ಸಂಚಾರ ಪುನಃ ಆರಂಭವಾಗಿದೆ.
ಗುಜರಿ ಬಸ್ ಬಿಟ್ಟು ಜನರ ಪ್ರಾಣದ ಜೊತೆ ಚೆಲ್ಲಾಟ ವಾಡುವ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಡಿಪೋ ಮ್ಯಾನೇಜರ್ ಬೇಜವಾಬ್ದಾರಿ ಬಸ್ ಅಪಘಾತಕ್ಕೆ ಕಾರಣ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ