ಸುವರ್ಣ ತ್ರಿಭುಜ್ ಸಮುದ್ರದಾಳದ ಚಿತ್ರ ಬಿಡುಗಡೆ
Team Udayavani, May 10, 2019, 6:00 AM IST
'ಸುವರ್ಣ ತ್ರಿಭುಜ್' ಬೋಟ್ ಸಮುದ್ರದಾಳದ ಚಿತ್ರ.
ಕಾರವಾರ: ನಾಲ್ಕೂವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ನಂತರ ಮಹಾರಾಷ್ಟ್ರದ ಮಲ್ವಾಣ ವ್ಯಾಪ್ತಿಯ ಸಮುದ್ರದಾಳದಲ್ಲಿ ಮೇ 1ರಂದು ಪತ್ತೆಯಾದ ಮೀನುಗಾರಿಕಾ ಬೋಟ್ ‘ಸುವರ್ಣ ತ್ರಿಭುಜ್’ನ ಚಿತ್ರಗಳನ್ನು ನೌಕಾಪಡೆ ಗುರುವಾರ ಬಿಡುಗಡೆ ಮಾಡಿದೆ.
2018ರ ಡಿ.13ರಂದು ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ‘ಸುವರ್ಣ ತ್ರಿಭುಜ್’ ಬೋಟ್ ನಿಗೂಢವಾಗಿ ಕಣ್ಮರೆಯಾಗಿತ್ತು. ಕಾಣೆಯಾಗಿದ್ದ ಏಳು ಮೀನುಗಾರರು ಹಾಗೂ ಬೋಟ್ ಪತ್ತೆಗೆ ನೌಕಾದಳ ವ್ಯಾಪಕ ಹುಡುಕಾಟ ನಡೆಸಿತ್ತು. 4 ತಿಂಗಳ ನಂತರ ನೌಕಾದಳಕ್ಕೆ ಸೇರಿದ ಐಎನ್ಎಸ್ ನಿರೀಕ್ಷಕ್ ನೌಕೆ ‘ಸುವರ್ಣ ತ್ರಿಭುಜ್’ ಬೋಟ್ನ್ನು ಮಹಾರಾಷ್ಟ್ರದ ಮಲ್ವಾಣ ಕರಾವಳಿಯಲ್ಲಿ ಪತ್ತೆ ಹಚ್ಚಿತ್ತು. ಮಾಲ್ವಾಣ ಕರಾವಳಿಯಿಂದ 33 ನಾಟಿಕಲ್ ಮೈಲ್ ದೂರದಲ್ಲಿ ಸುಮಾರು 60 ಮೀಟರ್ ಸಮುದ್ರದಾಳದಲ್ಲಿ ನೌಕಾದಳದ ಮುಳುಗು ತಜ್ಞರು ಬೋಟ್ ಪತ್ತೆ ಹಚ್ಚಿದ್ದರು. ಈಗ ಭಾರತೀಯ ನೌಕಾಪಡೆಯು ಸಮುದ್ರದಾಳದಲ್ಲಿರುವ ಬೋಟ್ನ ಅವಶೇಷಗಳ ಚಿತ್ರವನ್ನು ಬಿಡುಗಡೆ ಮಾಡಿದೆ.
ಈ ಬೋಟ್ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಲಕ್ಷ ್ಮಣ, ರವಿ, ಸತೀಶ, ಹರೀಶ, ರಮೇಶ ಹಾಗೂ ಉಡುಪಿಯ ಚಂದ್ರಶೇಖರ ಮತ್ತು ದಾಮೋದರ್ ಸೇರಿದಂತೆ ಒಟ್ಟು ಏಳು ಮೀನುಗಾರರು ಇದ್ದರು. ಇವರೆಲ್ಲರೂ ಜಲಸಮಾಧಿ ಯಾದರೇ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ