ಯಕ್ಷಕಾಶಿ ಗುಂಡಬಾಳದಲ್ಲಿ ಭಾವೈಕ್ಯ ಹಬ್ಸಿ

ಅಲವಂಗ, ಮಲವಂಗ, ಗೋದಿರೋಟಿ ಖಾವುಂಗ, ಸಿದ್ಧಾಪುರನೆ ಆವುಂಗಾ ಘೋಷಣೆ

Team Udayavani, May 3, 2019, 4:09 PM IST

uttar-kannada-3-tdy..

ಹೊನ್ನಾವರ: ಯಕ್ಷಕಾಶಿ ಗುಂಡಬಾಳೆಯಲ್ಲಿ ಭಾವೈಕ್ಯದ ಹಬ್ಸಿ ಮಹೋತ್ಸವ ನಡೆಯಿತು.

ಹೊನ್ನಾವರ: ಯಕ್ಷಕಾಶಿ ಎಂದು ಕರೆಯಲ್ಪಡುವ, ಯಕ್ಷಗಾನ ಕಲಾಲೋಕದ ನಟರ ವಿಶ್ವವಿದ್ಯಾಲಯ ಗುಂಡಬಾಳ ಮುಖ್ಯಪ್ರಾಣ ಸನ್ನಿಧಿಯಲ್ಲಿ ಸೋತವನಿಗೂ ವಿರೋಚಿತ ಗೌರವ ಸಲ್ಲಿಸುವ ಸಂಪ್ರದಾಯ ಶತಮಾನಗಳಿಂದ ನಡೆದು ಬಂದಿದೆ.

ಒಂದೇ ಸ್ಥಳದಲ್ಲಿ ಪ್ರತಿವರ್ಷ 150ಕ್ಕೂ ಹೆಚ್ಚು ಬಯಲಾಟ ಸೇವೆ ನಡೆಯುವ ಜಗತ್ತಿನ ಏಕೈಕ ರಂಗಸ್ಥಳ ಗುಂಡಬಾಳ. ಇಲ್ಲಿ ಆಟ ಆಡುವುದು, ಆಡಿಸುವುದು, ನೋಡುವುದು ಒಂದು ಸೇವೆ. ರಂಗಸ್ಥಳಕ್ಕೆ ಹೋಗಿ ಧೂಳನ್ನು ಹಣೆಗೆ ಹಚ್ಚಿಕೊಂಡು ಬಂದರೂ ಅದು ಸೇವೆ. ಭಾರತದ ಮೇಲೆ ಆಬಸೇನಿಯಾ ಜನಾಂಗವು ದಾಳಿಮಾಡಿ ಲೂಟಿ ಮಾಡುತ್ತಿದ್ದರು. ಈ ಜನಾಂಗ ಲೂಟಿ ಮಾಡುತ್ತಾ ಗುಂಡಬಾಳ ತಲುಪಿತ್ತು. ಈತನನ್ನು ಊರವರು ಒಟ್ಟಾಗಿ ಹತ್ಯೆಗೈದರು. ನಂತರ ಈ ದುಷ್ಟ ದೈವವಾಗಿ ಊರನ್ನು ಕಾಡಲು ತೊಡಗಿದ. ಆಗ ಊರ ಜನ ಮುಖ್ಯಪ್ರಾಣನಿಗೆ ಶರಣು ಬಂದರು. ಈ ದೈವದಿಂದ ಶಾಶ್ವತ ವಿಮೋಚನೆ ಪಡೆಯಲು ದೇವರ ಸಾನ್ನಿಧ್ಯದಲ್ಲಿ ಗೌರವದ ಸ್ಥಾನ ನೀಡಿ, ಅದನ್ನು ಶಮನಗೊಳಿಸಲಾಯಿತು.

ಈ ಘಟನೆಯನ್ನು ನೆನಪಿಸುವಂತೆ ಅನ್ಯಕೋಮಿನ ಹಬ್ಸಿ ಎಂದು ಕರೆಯುವ ಈ ದೈವವನ್ನು ವರ್ಷಕ್ಕೊಮ್ಮೆ ಆಹ್ವಾನಿಸಿ ಸೇವೆಗೆ ಅವಕಾಶ ಮಾಡಿಕೊಟ್ಟು ಮರಳಿಸಲಾಗುತ್ತಿದೆ. ಈ ಭಾಗದ ಅತ್ಯಂತ ಪುರಾತನ ಕ್ಷೇತ್ರಗಳಲ್ಲೊಂದಾದ ಗುಂಡಬಾಳದಲ್ಲಿ ಯಕ್ಷಗಾನದ ಸೇವೆ ನಡೆಯುವ ತಿಂಗಳಲ್ಲಿ ಹಬ್ಸಿಯ ಆವೇಶ ಮಾವಿನಕುರ್ವೆ ಪುರೋಹಿತ ಕುಟುಂಬಕ್ಕೂ, ವೀರಭದ್ರ ಆವೇಶ ಗುಂಡಬಾಳ ಕಾಮತ್‌ ಕುಟುಂಬಕ್ಕೂ, ಕೃಷ್ಣ ಆವೇಶ ಚಿಕ್ಕನಕೋಡಿನ ನಾಯಕ ಮನೆತನಕ್ಕೂ ಬರುತ್ತದೆ. ಹಬ್ಸಿ ರುದ್ರ ರಮಣೀಯ ಪ್ರವೇಶ, ಆರ್ಭಟ ನೋಡುಗರನ್ನು ದಂಗುಬಡಿಸುತ್ತದೆ. ಧರ್ಮದರ್ಶಿಗಳು ಬಣ್ಣ ಹಚ್ಚಿ, ಕಪ್ಪು ಬಟ್ಟೆಯನ್ನು, ಗೆಜ್ಜೆಯನ್ನು ತೊಡಿಸುತ್ತಾರೆ. ಉಪವಾಸ ಕೈಗೊಂಡ ಹಬ್ಸಿ ಪಾತ್ರಧಾರಿ ಮುಖ್ಯಪ್ರಾಣನಿಗೆ, ನಂತರ ಗಣಪತಿಗೆ ಆರತಿ ಎತ್ತಿ ವೇಷಧಾರಿಯನ್ನು ಎತ್ತಿಕೊಂಡೇ ತರುತ್ತಾರೆ. ಆಗ ಅಪರಿಚಿತ ಭಾಷೆಯಲ್ಲಿ ಅಲವಂಗ, ಮಲವಂಗ, ಗೋದಿರೋಟಿ ಖಾವುಂಗ, ಸಿದ್ಧಾಪುರನೆ ಆವುಂಗಾ ಎಂಬ ಘೋಷಣೆಗಳಾಗುತ್ತವೆ. ಹಬ್ಸಿ ಪೋಷಾಕುಗಳು ಉಡುಗೊರೆಯಾಗಿ ಬರುತ್ತವೆ.

ಪರಂಪರೆ ಮುಂದುವರಿಸಲು ಮಾವಿನಕುರ್ವೆ ಗೋಪಾಲಕೃಷ್ಣ ನಾಗಪ್ಪ ಭಟ್ ಹಬ್ಸಿ ಕಲಾವಿದರಾಗಿ ರಂಗಪ್ರವೇಶ ಮಾಡಿದ್ದಾರೆ. ಹಲವು ನಿಗೂಢ ಸಂಪ್ರದಾಯ, ಪರಂಪರೆಗಳನ್ನು ಉಳಿಸಿಕೊಂಡು ಬಂದಿರುವ ಗುಂಡಬಾಳ ಕ್ಷೇತ್ರದ ಆಡಳಿತ ಮಂಡಳಿ ತನ್ನ ಯಕ್ಷಗಾನ ಸಂಪ್ರದಾಯದಿಂದಾಗಿ ಕಲಾಲೋಕಕ್ಕೆ ನೂರಾರು ಕಲಾವಿದರನ್ನು ಕೊಟ್ಟಿದೆ, ಕೊಡುತ್ತಿದೆ. ಸರ್ಕಾರದ ಯಾವ ನೆರವಿಲ್ಲದೇ ನಿರಂತರವಾಗಿ ನಡೆಯುತ್ತ ಬಂದ ಯಕ್ಷಗಾನ ಪರಂಪರೆಯಿಂದಾಗಿ ಕೆರೆಮನೆ, ಕೊಂಡದಕುಳಿ, ಚಿಟ್ಟಾಣಿ, ಜಲವಳ್ಳಿ, ಯಾಜಿ, ಹುಡಗೋಡು, ಮೊದಲಾದ ಸುಪ್ರಸಿದ್ಧ ಮತ್ತು ಪ್ರಸಿದ್ಧ ಕಲಾವಿದರ ಹುಟ್ಟಿಗೆ ಕ್ಷೇತ್ರ ಕಾರಣವಾಗಿದೆ.

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.