ಜೀವನ್ಮರಣ ಹೋರಾಟದಲ್ಲಿದ್ದ ಬಿಡಾಡಿ ದನದ ರಕ್ಷಣೆ
Team Udayavani, Jul 20, 2023, 6:35 PM IST
ದಾಂಡೇಲಿ: ಅದೊಂದು ಮೂಕ ಜೀವ. ಜೀವನ್ಮರಣ ಹೋರಾಟದಲ್ಲಿ ಒದ್ದಾಡುತ್ತಿತ್ತು. ಅದರ ಆರೋಗ್ಯ ತೀವ್ರ ಹದಗೆಟ್ಟಿರುವುದನ್ನು ಅರಿತ ಸ್ಥಳೀಯರು ಅದರ ರಕ್ಷಣೆಗೆ ಮುಂದಾಗಿ, ಪಶುವೈದ್ಯ ಆಸ್ಪತ್ರೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು. ತಡವರಿಯದೇ ಸ್ಥಳಕ್ಕೆ ಪಶುವೈದ್ಯ ಆಸ್ಪತ್ರೆಯ ಸಿಬ್ಬಂದಿಗಳು ದೌಡಾಯಿಸಿ, ದನವನ್ನು ಪರೀಕ್ಷಿಸಿ, ತುರ್ತು ಚಿಕಿತ್ಸೆಯನ್ನು ನೀಡಿದರು.
ಇದು ದಾಂಡೇಲಿ ನಗರದ ಬಸ್ ನಿಲ್ದಾಣದ ಹತ್ತಿರದಲ್ಲಿರುವ ನಗರ ಸಭೆಯ ಮಳಿಗೆಯ ಮುಂಭಾಗದಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಬಿಡಾಡಿ ದನವೊಂದು ಸ್ಥಳೀಯರ ಸಮಯೋಚಿತ ರಕ್ಷಣೆಯಿಂದ ಬದುಕುಳಿದ ಘಟನೆ ಗುರುವಾರ ನಡೆದಿದೆ.
ಇಲ್ಲಿ ಬಿಡಾಡಿ ದನವೊಂದು ಮಧ್ಯಾಹ್ನದಿಂದಲೆ ನಗರ ಸಭೆಯ ಮಳಿಗೆಯೊಂದರ ಮುಂಭಾಗದಲ್ಲಿ ಅನಾರೋಗ್ಯದಿಂದ ಒದ್ದಾಡುತ್ತಿತ್ತು. ಇದನ್ನು ಕಮಡ ಸ್ಥಳೀಯ ವರ್ತಕರಾದ ಪುನೀತ್ ನಾಯಕ, ಪತ್ರಕರ್ತ ಪ್ರವೀಣ್ ಕುಮಾರ್ ಸುಲಾಖೆ, ವರ್ತಕರುಗಳಾದ ಬಾಬು ಪಗಡೆ, ರಿಯಾಜ್ ನವಲಗುಂದ ಅವರ ತಂಡ ದನವನ್ನು ಉಪಚರಿಸಿ, ಅದಕ್ಕೆ ಆಹಾರ ನೀಡಿದ್ದರು.
ಹೊಟ್ಟೆ ಉಬ್ಬರಿಸಿಕೊಂಡು ಶ್ವಾಸ ತೆಗೆಯಲು ಹೆಣಗಾಡುತ್ತಿದ್ದ ದನ ಜೀವನ್ಮರಣ ಹೋರಾಟದಲ್ಲಿ ಒದ್ದಾಡುತ್ತಿರುವುದರ ಬಗ್ಗೆ ಪಶುವೈದ್ಯ ಆಸ್ಪತ್ರೆಗೆ ಮಾಹಿತಿ ನೀಡಲಾಯ್ತು. ಪಶುವೈದ್ಯ ಆಸ್ಪತ್ರೆಯಿಂದ ಸಿಬ್ಬಂದಿಗಳು ತಡವರಿಯದೇ ಸ್ಥಳಕ್ಕಾಗಮಿಸಿ, ದನವನ್ನು ಪರೀಕ್ಷೆ ಮಾಡಿ ತುರ್ತು ಚಿಕಿತ್ಸೆ ಮಾಡಿ ಅದರ ಜೀವವನ್ನು ಉಳಿಸಿದ್ದಾರೆ. ಸ್ಥಳೀಯರ ಸಮಯೋಚಿತ ಸ್ಪಂದನೆ ಹಾಗೂ ಪಶುವೈದ್ಯ ಸಿಬ್ಬಂದಿಗಳು ತಡವರಿಯದೇ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆಯನ್ನು ನೀಡಿ ದನದ ಜೀವವನ್ನು ಉಳಿಸಿದರು.
ಇದನ್ನೂ ಓದಿ: ತಡರಾತ್ರಿ 2 ಗಂಟೆಗೆ ರಸ್ತೆಯ ಬದಿಯಲ್ಲಿ ಹೆಣ್ಣು ಮಗುವಿನ ರಕ್ಷಣೆ!; ನಡೆದಿದ್ದೇನು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
MUST WATCH
ಹೊಸ ಸೇರ್ಪಡೆ
Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ
LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು
Lok Sabha Election: ವಾರಾಣಸಿಯಲ್ಲಿ ರಿಯಲ್ ಮೋದಿ VS ರೀಲ್ ಮೋದಿ ಫೈಟ್!
ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ