ನಾಗೋಡಾ ವಿದ್ಯಾರ್ಥಿಗಳ ಅಪಾಯದ ಸಂಚಾರ


Team Udayavani, Jan 1, 2020, 4:15 PM IST

uk-tdy-2

ಜೋಯಿಡಾ: ಸೂಪಾ ಜಲಾಶಯ ನಿರ್ಮಾಣಗೊಂಡು ನಾಲ್ಕು ದಶಕಗಳು ಕಳೆದರೂ ಜೋಯಿಡಾ ತಾಲೂಕಿನ ಪ್ರಮುಖ ಗ್ರಾಪಂ ಕೇಂದ್ರವಾದ ನಾಗೋಡಾಕ್ಕೆ ಇನ್ನೂ ನೂತನ ಸೇತುವೆ ಭಾಗ್ಯವಿಲ್ಲದೆ ತುಂಬಿದ ಸೂಪಾ ಹಿನ್ನೀರಿನಿಂದಾಗಿ ವಿದ್ಯಾರ್ಥಿಗಳು ದಿನನಿತ್ಯ ಬೋಟ್‌ ಮೂಲಕ ಸಂಚರಿಸುವಂತಾಗಿದೆ.

ಸೂಪಾ ತಾಲೂಕು ಕೇಂದ್ರವಿದ್ದಾಗಲೇ ನಾಗೋಡಾ ಪ್ರಮುಖ ಗ್ರಾಮವಾಗಿತ್ತು. ಇಲ್ಲಿನ ನಾಗೋಡಾ ದೇಸಾಯಿ ಎಂಬಾತ ಸೂಪಾ ತಾಲೂಕಿನ ಅಂದಿನ ಪ್ರಮುಖ ಜನನಾಯಕನಾಗಿದ್ದು, ಅಂದೇ ಡಾಂಬರಿಕರಣ ರಸ್ತೆಗಳನ್ನು ಹೊಂದಿ ನಿತ್ಯ ಬಸ್‌ ಸಂಚಾರ ವ್ಯವಸ್ತೆ ಇರುವ ಪ್ರಮುಖ ಕೇಂದ್ರವಾಗಿತ್ತು. ಸೂಪಾ ಮುಳುಗಡೆಯಾದ ಮೇಲೆ ಜೋಯಿಡಾ ತಾಲೂಕು ಕೇಂದ್ರವಾಗಲು ಇವರೇ ಕಾರಣರಾಗಿದ್ದರು. ಆದರೆ ಅವರಿಲ್ಲದ ನಾಗೋಡಾಡಕ್ಕೆ ಈಗ ಸೇತುವೆ ಭಾಗ್ಯವೂ ಇಲ್ಲದೆ, ಸರ್ವಋತು ರಸ್ತೆಗಳೂ ಇಲ್ಲದೆ ಕೊರಗುವಂತಾಗಿದೆ.

ನಾಗೋಡಾ ತಾಲೂಕು ಕೇಂದ್ರದಿಂದ ಅನತಿ ದೂರದಲ್ಲಿದ್ದರೂ ಇದರ ಮುಖ್ಯ ರಸ್ತೆ ಪ್ರತಿವರ್ಷ ಹಿನ್ನೀರಿನಿಂದ ಮುಳುಗಡೆ ಹೊಂದುತ್ತಿದ್ದು, ಗ್ರಾಮಸ್ಥರಿಗೆ, ನಿತ್ಯ ಸಂಚರಿಸುವ ಶಾಲಾ ವಿದ್ಯಾರ್ಥಿಗಳಿಗೆ ಜಲರಾಶಿಯ ಅಪಾಯವನ್ನೆದುರಿಸಿ ಬೋಟ್‌ ಮೂಲಕ ಸಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತಿದೆ. ಇಷ್ಟಕ್ಕೂ ಇಲ್ಲಿ ಸೇತುವೆ ನಿರ್ಮಾಣ ಅಸಾಧ್ಯವೇನು ಅಲ್ಲ. ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆ ಈ ಗ್ರಾಮವನ್ನು ನಿರ್ಲಕ್ಷಿಸುವಂತೆ ಮಾಡಿದೆ. ಈ ಗ್ರಾಮದಿಂದ ನಿತ್ಯ ಪ್ರಾಥಮಿಕ ಪ್ರೌಢಶಾಲೆ, ಕಾಲೇಜುಗಳಿಗೆ ಜೋಯಿಡಾ ಕೇಂದ್ರಕ್ಕೆ ಸುಮಾರು 25 ರಿಂದ 30 ವಿದ್ಯಾರ್ಥಿಗಳು ಹೋಗುತ್ತಾರೆ. ನಿತ್ಯ ಸಂಚರಿಸುವ ಇವರ ಬಗ್ಗೆ ಯಾವ ಜನನಾಯಕನ ಕನಿಕರೂ ಇಲ್ಲವೇ? ಎನ್ನುವಂತೆ ಭಾಸವಾಗುತ್ತಿದೆ.

ಇದು ಮಾಜಿ ಸಚಿವ ರಾಜ್ಯದ ಪ್ರಭಾವಿ ನಾಯಕ ಆರ್‌ .ವಿ.ದೇಶಪಾಂಡೆಯವರ ಕ್ಷೇತ್ರ. ತಾಲೂಕಿನ ಅಭಿವೃದ್ಧಿಗೆ ಈಗಾಗಲೇ ನೂರಾರು ಕೋಟಿ ಅಭಿವೃದ್ಧಿ ಕೆಲಸ ಮಾಡಿಸಿದ, ಮಾಡುತ್ತಾ ಬಂದ ಇವರಿಗೆ ಇವೆಲ್ಲಾ ದೊಡ್ಡದೇನಲ್ಲ. ಆದರೆ ಸ್ಥಳೀಯ ಅಧಿಕಾರಿಗಳು, ಜನನಾಯಕರ ನಿರ್ಲಕ್ಷ ಈ ಗ್ರಾಮಕ್ಕೆ ಹಿಂದೆ ಇದ್ದ ಗೌರವವನ್ನು ಕಡಿಮೆಗೊಳಿಸುವಂತೆ ಮಾಡಿದೆ. ಇದು ಜೋಯಿಡಾ ತಾಲೂಕಿನ ದುರ್ಭಾಗ್ಯದ ಸಂಗತಿ.

ನಾಗೋಡಾ ಗ್ರಾಮದ ವಿದ್ಯಾರ್ಥಿಗಳ, ಯುವಜನತೆ ಭವಿಷ್ಯದ ದೃಷ್ಟಿಯಿಂದಲಾದರೂ ಈ ಗ್ರಾಮಕ್ಕೆ ಸರ್ವಋತು ಸೇತುವೆ ಅಗತ್ಯವಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಕ್ರಮಕೈಗೊಂಡು ಅನುಷ್ಠಾನಗೊಳಿಸಬೇಕಿದೆ.

ಟಾಪ್ ನ್ಯೂಸ್

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shirur landslide; Green signal for National highway traffic in three or four days?

Shirur landslide; ರಾ.ಹೆದ್ದಾರಿ ಸಂಚಾರಕ್ಕೆ ಮೂರ್ನಾಲ್ಕು ದಿನಗಳಲ್ಲಿ ಗ್ರೀನ್ ಸಿಗ್ನಲ್ ?

Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ

Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ

1-ccc-aa

Shiruru hill collapse; 10 ದಿನದಿಂದ ಇಲ್ಲೇ ಇದ್ದೇನೆ : ಟೀಕೆಗಳಿಗೆ ಶಾಸಕ ಸೈಲ್‌ ಬೇಸರ

1–eewr-aa-aa

Shiruru hill collapse; ಮಣ್ಣು ತೆಗೆಯುವ ಕಾರ್ಯಾಚರಣೆ ವೇಳೆ ಸಿಕ್ಕ ಹೋಟೆಲ್ ಅವಶೇಷಗಳು

1–eewr-aa

Shiruru hill collapse; ನದಿಯ ನಾಲ್ಕು ಕಡೆ ಅವಶೇಷಗಳು ಬೆಳಕಿಗೆ:ಇಂದ್ರಬಾಲನ್‌ ನಂಬಿಯಾರ್

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.