Shree Swarnavalli Matha; ಸ್ವಸಹಾಯ ಸಂಘಗಳ ಸಮಾವೇಶ ಸಮಾರೋಪ‌

ಸಂಘಗಳಿಗೆ ವರದಿ ಹಾಗೂ ಲೆಕ್ಕ ಮಹತ್ವದ್ದು; ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ‌ಸ್ವಾಮೀಜಿ

Team Udayavani, Aug 13, 2023, 11:00 PM IST

1-saasdas-d

ಶಿರಸಿ: ಸ್ವಸಹಾಯ ಸಂಘಗಳಿಗೆ ವರದಿ ಹಾಗೂ ಲೆಕ್ಕ ಮಹತ್ವದ್ದು. ಸಂಘದ ಎರಡು ಮುಖಗಳು ಅವು ಎಂದು‌ ಸೋಂದಾ ಸ್ವರ್ಣವಲ್ಲೀ ಮಹಾ‌ ಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ‌ಸ್ವಾಮೀಜಿಗಳು‌ ನುಡಿದರು.

ಸ್ವರ್ಣವಲ್ಲೀ‌ ಮಹಾ‌ ಸಂಸ್ಥಾನದಲ್ಲಿ ರವಿವಾರ ಗ್ರಾಮಾಭ್ಯುದಯ ಸಂಸ್ಥೆ ಹಮ್ಮಿಕೊಂಡ ಸ್ವಸಹಾಯ ಸಂಘಗಳ ಸಮಾವೇಶದ ಸಮಾರೋಪ‌ ಸಮಾರಂಭದಲ್ಲಿ ಸಾನ್ನಿಧ್ಯ ನೀಡಿ‌ ಆಶೀರ್ವಚನ ನುಡಿದರು.

ಮನುಷ್ಯನಿಗೆ ಮನಸ್ಸು ಹಾಗೂ ಬುದ್ದಿ ಸರಿಯಾಗಿದ್ದರೆ ವ್ಯಕ್ತಿ ಪರಿಪೂರ್ಣ ಆಗುತ್ತಾನೆ‌. ವ್ಯಕ್ತಿಗೆ ಈ ಎರಡು ಮುಖವಾದರೆ, ಸ್ವಹಾಯ ಸಂಘಕ್ಕೆ ವರದಿ, ಲೆಕ್ಕ ಸರಿ‌ ಇಡಬೇಕು. ಕಾರ್ಯಕ್ರಮ‌ ಮಾಡಿ ಲೆಕ್ಕ ಸರಿ ಇಡದೇ ಹೋದರೆ ಕಷ್ಟ, ಪ್ರಯೋಜನ ಇಲ್ಲ ಎಂದರು.

ವರದಿ ನೋಡಿದರೆ ಸ್ವ ಸಹಾಯ ಸಂಘಗಳ ಮನಸ್ಥಿತಿ ಅರ್ಥವಾಗುತ್ತದೆ. ಸಂಘಟನೆಯ‌ ಜೀವಂತಿಕೆ ಇರುವದು ಕಾರ್ಯಕ್ರಮ‌ಗಳ ಜೀವಂತಿಕೆಯದ್ದಾಗಿದೆ. ಕಾರ್ಯಕ್ರಮ‌ ನಿಂತರೆ ಸಂಘಟನೆ ಜೀವಂತಿಕೆ ಇರುವುದಿಲ್ಲ ಎಂದರು.

ಯಾವತ್ತೂ ನಮ್ಮ ಕ್ರಿಯಾ ಶಕ್ತಿಗಳು ಜಾಗೃತರಾಗಿರಬೇಕು. ಮನುಷ್ಯನಿಗೆ ಮೂರು ಶಕ್ತಿ ಪ್ರಮುಖವಾಗಿರುತ್ತವೆ. ಅವೇ
ಜ್ಞಾನ, ಇಚ್ಛಾ ಹಾಗೂ ಕ್ರಿಯಾ ಶಕ್ತಿ ಇರುತ್ತದೆ. ಜ್ಞಾನ ಶಕ್ತಿ, ತಿಳುವಳಿಕೆ, ಇಚ್ಚಾ ಶಕ್ತಿ ಎಂದರ್ಥ. ನಂತರ ಆಚರಣೆ ಶಕ್ತಿ. ಮೂರನೆ ಶಕ್ತಿ ಮಾತ್ರ ಎಲ್ಲರ ಗಮನಕ್ಕೆ ಬರುತ್ತದೆ. ಕ್ರಿಯಾ ಶಕ್ತಿ‌ ಮೂಲಕವೇ ಉಳಿದ ಎರಡು ಶಕ್ತಿ ಅರ್ಥವಾಗುತ್ತದೆ ಎಂದರು.

ಗೋವಿನ ಉತ್ಪನ್ನಗಳ ಸಿದ್ದತೆ ಮಾಡಬೇಕು. ಸ್ವಸಹಾಯ ಸಂಘಗಳು ಉತ್ಪಾದನಾ ಚಟುವಟಿಕೆ ಜೊತೆ ಧಾರ್ಮಿಕ ಚಟುವಟಿಕೆ ಕೂಡ ಹೆಚ್ಚಿಸಬೇಕು ಎಂದರು.

ಶಾಸಕ ಭೀಮಣ್ಣ‌ ನಾಯ್ಕ ಮಾತನಾಡಿ, ಸ್ವ ಸಹಾಯ ಸಂಘಗಳ ಮೂಲಕ ಸಮುದಾಯದ ಅಭಿವೃದ್ದಿಗೆ ಮಠ, ಶ್ರೀಗಳು ನೀಡಿದ ಕೊಡುಗೆ ಅನನ್ಯ. ಶ್ರೀಗಳ‌ ಆಶಯದಂತೆ‌ ನಡೆದರೆ ಬದುಕು ನೆಮ್ಮದಿ, ಹಿತವಾಗಿರುತ್ತದೆ ಎಂದರು.

ಆರ್ಥಿಕ ಹಿಂದುಳಿಕೆ ಇದ್ದವರು ಮರ್ಯಾದೆಯಿಂದ ಬದುಕು ನಡೆಸಲು ಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳಲು ಸ್ವ ಸಹಾಯ ಸಂಘ ಬಳಸಿಕೊಳ್ಳಬೇಕು. ಆದರೆ, ಪಡೆದ ಹಣವನ್ನು ಆ ಉದ್ದೇಶಕ್ಕೆ ಬಳಸಬೇಕು. ಇಲ್ಲವಾದರೆ ಆರ್ಥಿಕ‌ ಮುಗ್ಗಟ್ಟಿಗೆ ಬಲಿಯಾಗುವ ಆತಂಕ ಇದೆ. ವ್ಯವಹಾರ ನಿರ್ವಹಣೆ ಅಚ್ಚುಕಟ್ಟಾಗಿ‌ ಮಾಡಬೇಕು ಎಂದು‌ ಹೇಳಿದ ಅವರು, ಗೋವಿನ ರಕ್ಷಣೆ ಮಾಡಬೇಕಿದೆ ಎಂದರು.

ಮಠದ ಕಾರ್ಯಾಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಪ್ರಮುಖರಾದ ಎಂ.ಸಿ.ಹೆಗಡೆ ಶಿರಸಿಮಕ್ಕಿ, ಎಲ್.ಎಂ.ಹೆಗಡೆ ಇತರರು ಇದ್ದರು. ಎಂ.ಕೆ.ಹೆಗಡೆ ಗೋಳಿಕೊಪ್ಪ ಸ್ವಾಗತಿಸಿದರು. ರಮೇಶ ಹೆಗಡೆ ನಿರ್ವಹಿಸಿದರು. ಉದಯ ಮರಾಠಿ, ಸಂತೋಷ ಭಟ್ ಕೋಡಿಗಾರ ವಂದಿಸಿದರು.
ಮುಂಜಾನೆಯಿಂದ ಮಧುಕೇಶ್ವರ ಹೆಗಡೆ, ಗಣೇಶ ಹೆಗಡೆ ನಿಲೇಸರ, ಉಮೇಶ ಕುಲಕರ್ಣಿ, ಅಶೋಕ ಗೋಳಿಕೈ, ಎಲ್.ಎಂ.ಹೆಗಡೆ ಉಪನ್ಯಾಸ ನೀಡಿದರು. ಇದೇ ವೇಳೆ ಹತ್ತಕ್ಕೂ ಸ್ವ ಸಹಾಯ ಸಂಘಗಳನ್ನು ಪುರಸ್ಕಾರಿಸಲಾಯಿತು.

ಸ್ವ ಸಹಾಯ ಸಂಘಗಳಿಗೆ ನಿರಂತರ ಕೆಲಸ ಕೊಡಬೇಕು. ಇದರ ಬಗ್ಗೆ ಏನು‌ ಮಾಡಬಹುದು ಹಾಗೂ ಬೆಟ್ಟ ಅಭಿವೃದ್ದಿಗೆ ಏನು ಮಾಡಬೇಕು ಎಂಬುದನ್ನು ಸರಕಾರದ ಹಂತದಲ್ಲಿ ಕೆಲಸ ಮಾಡಲು‌ ಪ್ರಯತ್ನ ಮಾಡುತ್ತೇನೆ. ಸ್ವರ್ಣವಲ್ಲೀ ಶ್ರೀಗಳು ಈ ಬಗ್ಗೆ ಸೂಚನೆ ನೀಡಲು ಕೋರುತ್ತೇನೆ.
ಭೀಮಣ್ಣ ನಾಯ್ಕ, ಶಾಸಕ

ನಮ್ಮ ಕುಟುಂಬ ವ್ಯವಸ್ಥೆ ಹಾಳಾಗಲು ವಿವಾಹ‌ ವಿಚ್ಛೇಧನ ಕಾರಣ ಆಗುತ್ತಿದೆ. ಮಕ್ಕಳಿಗೂ ಸಂಸ್ಕಾರ ತಿಳಿಸಬೇಕು. ಇದಕ್ಕಾಗಿ ಸರ್ವ ದಂಪತಿ ಶಿಬಿರ ಕೂಡ ನಡೆಸುತ್ತಿದ್ದೇವೆ. ಸಂತಾನಾಪೇಕ್ಷಿತ ದಂಪತಿಗಳು ಪಾಲ್ಗೊಳ್ಳಬೇಕು.
– ಸ್ವರ್ಣವಲ್ಲೀ ಶ್ರೀಗಳು

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.