ಪರಿಹಾರ ನೀಡಲು ಆಗ್ರಹ
Team Udayavani, Oct 18, 2019, 1:23 PM IST
ಯಲ್ಲಾಪುರ: ಸಾಲ ನೀಡಿದವರ ಹಿಂಸೆ ಮತ್ತು ದೌರ್ಜನ್ಯ ತಡೆದುಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಂಡ ಹೊನ್ನಾವರ ತಾಲೂಕಿನ ಕಳಸನಮೂಟೆ ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ಅಂಬಿಗ ಸಾವಿಗೆ ಕಾರಣರಾದವರನ್ನು ಬಂಧಿಸಿ, ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಅಂಗನವಾಡಿ ನೌಕರರು ತಹಶೀಲ್ದಾರ್ ಎಚ್.ವಿಶ್ವನಾಥಗೆ ಮನವಿ ನೀಡಿದ್ದಾರೆ.
ನೇತ್ರಾವತಿ ಕುಟುಂಬಕ್ಕೆ ಆತ್ಮಹತ್ಯೆಗೆ ಕಾರಣರಾದವರೇ ಪರಿಹಾರ ನೀಡಬೇಕು. ಸರ್ಕಾರ ಕಾನೂನು ಬದ್ಧವಾಗಿ ನೀಡಬಹುದಾದ ನೆರವು ನೀಡಬೇಕು. ಮೃತ ನೇತ್ರಾವತಿ ಅವಲಂಬಿತ ವ್ಯಕ್ತಿಗೆ ತೆರವಾದ ಅಂಗನವಾಡಿ ಸ್ಥಾನ ನಿಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ