ಅಂಗನವಾಡಿ ಕೇಂದ್ರದಲ್ಲಿ ಮಂಗಗಳ ಹಾವಳಿ
Team Udayavani, Jun 30, 2019, 11:12 AM IST
ಯಾದಗಿರಿ: ವಡಗೇರಾ ತಾಲೂಕಿನ ಬೆಂಡೆಬೆಂಡಳಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಮಂಗಗಳು.
ಯಾದಗಿರಿ: ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಜನರ ನಿದ್ದೆಗೆಡಿಸಿದ್ದ ಮಂಗಗಳು ಇದೀಗ ಪೌಷ್ಟಿಕ ಆಹಾರ ಸಿಗುವ ಅಂಗನವಾಡಿ ಕೇಂದ್ರಗಳಲ್ಲಿ ತನ್ನ ದರ್ಬಾರ್ ಮುಂದುವರೆಸಿವೆ.
ಕೆಲ ತಿಂಗಳ ಹಿಂದೆ ಮಂಗಗಳು ಮೆನೆಗಳಿಗೆ ನುಗ್ಗಿ ಅಡುಗೆ ಖಾಲಿ ಮಾಡುತ್ತಿದ್ದವು. ಆದರೆ ಇದೀಗ ನೇರ ಅಂಗನವಾಡಿ ಕೇಂದ್ರಗಳಿಗೆ ನುಗ್ಗಿ ಆಹಾರವನ್ನು ತಿನ್ನುತ್ತಿವೆ. ಇಲ್ಲಿನ ಅಂಗನವಾಡಿ ಕೇಂದ್ರ 1ರ ಮೇಲ್ವಿಚಾರಕಿ ಮತ್ತು ಸಹಾಯಕಿ ನಿತ್ಯ ಮಂಗಗಳು ಒಳನುಸುಳದಂತೆ ಕಾಯುವುದೇ ಇವರ ಕೆಲಸವಾಗಿದೆ. ಮಂಗಗಳ ಹೆದರಿಕೆಯಿಂದ ಪಾಲಕರು ಪುಟ್ಟ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಲು ಹಿಂಜರಿಯುತ್ತಿದ್ದಾರೆ.
ಸುಮಾರು 6 ತಿಂಗಳಿಂದ ಬೀಡುಬಿಟ್ಟಿರುವ ಮಂಗಗಳು ಗ್ರಾಮದಲ್ಲಿನ ಕಂಡ ಕಂಡವರ ಕೈಯಲ್ಲಿರುವ ತಿನುಸುಗಳನ್ನು ದೋಚಿಕೊಂಡು ಹೋಗುತ್ತಿರುವುದು ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ. 300ರಷ್ಟು ಮಂಗಗಳು ಕಾಡಿನಿಂದ ನಾಡಿಗೆ ವಲಸೆ ಬಂದಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿವೆ.
ಗ್ರಾಮದಲ್ಲಿ ಮಕ್ಕಳು ಏನಾದರೂ ತಿನ್ನುವ ಆಹಾರ ಕೈಯಲ್ಲಿ ಹಿಡಿದುಕೊಂಡು ಹೋದರೆ ಸಾಕು ಬೆನ್ನತ್ತಿ ಕೈಯಿಂದ ಕಸಿದು ಪರಾರಿಯಾಗುವ ಮಂಕಿಗಳ ಕಾಟಕ್ಕೆ ಇಲ್ಲಿನ ಜನ ಬೇಸತ್ತಿದ್ದಾರೆ. ಕೈಯಲ್ಲಿನ ವಸ್ತುವನ್ನು ಬಿಟ್ಟುಕೊಡದಿದ್ದರೆ ಹಲ್ಲೆಗೂ ಮುಂದಾಗುತ್ತಿವೆ ಎಂದು ಜನರು ಭಯದಲ್ಲಿಯೇ ಕಾಲಕಳೆಯುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಬೆಂಡೆಬೆಂಬಳಿಯಲ್ಲಿ ನೂರಾರು ಮಂಗಗಳು ಬೀಡು ಬಿಟ್ಟಿರುವುದು ಸಾರ್ವನಿಕರಲ್ಲಿ ಆತಂಕ ಮನೆ ಮಾಡಿದೆ. ಇದೀಗ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಮಕ್ಕಳ ಆಟಿಕೆ ಸಾಮಗ್ರಿಗಳ ಮೇಲೆ ಕುಣಿದು ಆಹಾರವನ್ನು ತಿನ್ನಲು ಮುಂದಾಗಿವೆ.
•ಸೂಗಣ್ಣ ಸೂಗರೆಡ್ಡಿ, ನಿವೃತ್ತ ಶಿಕ್ಷಕ
ಗ್ರಾಮದಲ್ಲಿ ಮಂಗಗಳ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಗೋಳು ಯಾರಿಗೆ ಹೇಳಿಕೊಳ್ಳಬೇಕು ಎನ್ನುವುದು ತೋಚುತ್ತಿಲ್ಲ. ಗ್ರಾಪಂ, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮಂಗಗಳಿಂದ ಮುಕ್ತಿ ಕೊಡಿಸಬೇಕು.
•ನಿಂಗಣ್ಣ ಜಡಿ, ರೈತ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ