ಬಳಿಚಕ್ರ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ| ಗ್ರಾಮಸ್ಥರಲ್ಲಿ ಆತಂಕ
Team Udayavani, Aug 20, 2021, 9:24 PM IST
ಯಾದಗಿರಿ: ತಾಲೂಕಿನ ಬಳಿ ಚಕ್ರ ಗ್ರಾಮದ ಬೆಟ್ಟಗಳಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ.
ಕಳೆದ ಒಂದು ವಾರದಿಂದ ಕುರಿ ಮತ್ತು ಹಸುಗಳ ಸಂಖ್ಯೆ ಕಡಿಮೆಯಾಗುತ್ತಿದ್ದವು. ಇದು ಗ್ರಾಮಸ್ಥರು ಅನುಮಾನ ಮೂಡಿಸಿತ್ತು. ಇತ್ತೀಚೆಗಷ್ಟೇ ಎಮ್ಮೆ ಮೇಯಿಸಲು ಹೋದ ಸಂದರ್ಭದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಎಮ್ಮೆಗಳನ್ನು ಬೆನ್ನಟ್ಟಿದ್ದ ಚಿರತೆ ಕಂಡು ದನಕಾಯುವವರು ಬೆಚ್ಚಿ ಬಿದ್ದಿದ್ದರು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಒಂದೊಂದಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿರುವ ಚಿರತೆ ಜನಗಳ ಮೇಲೆ ಎರಗುವುದಕ್ಕಿಂತ ಮುಂಚಿತವಾಗಿ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿ ಅದನ್ನು ಹಿಡಿದು, ಜನರ ಪ್ರಾಣ ರಕ್ಷಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.