ಹೈಕ ವಿಮೋಚನೆಗೆ ಹೋರಾಡಿದ ನಿತ್ಯಸ್ಮರಣೀಯರು


Team Udayavani, Sep 17, 2018, 11:26 AM IST

gul-1.jpg

ಯಾದಗಿರಿ: ಹೈದ್ರಾಬಾದ ಕರ್ನಾಟಕದ ವಿಮೋಚನೆಗಾಗಿ ರಜಾಕರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡಿದ ನಗರದ ಗಾಂಧಿ  ವೃತ್ತದಲ್ಲಿ ರಕ್ತ ಸುರಿಸಿದ ಸ್ವಾತಂತ್ರ್ಯಾ ಸೇನಾನಿ ಹಾಗೂ ದಯಾನಂದ ಶಿಕ್ಷಣ ಸಂಸ್ಥೆ ಸಂಸ್ಥಾಪಕ, ಆರ್ಯ ಸಮಾಜದ ಪ್ರಮುಖ ಲಿಂ. ಈಶ್ವರ ಲಾಲ್‌ ಭಟ್ಟಡ ಅವರೊಂದಿಗೆ ಹೈ.ಕ ವಿಮೋಚನೆಗಾಗಿ ಹೋರಾಡಿದ ಮಹನಿಯರು ನಿತ್ಯ ಸ್ಮರಣಿಯರು.

71ನೇ ಹೈ.ಕ. ವಿಮೋಚನಾ ಚಳವಳಿ ಸಂದರ್ಭದಲ್ಲಿ ಪಟ್ಟಣದಲ್ಲಿ ನಡೆದ ಹೋರಾಟದ ಘಟನೆಯನ್ನು ಮೆಲುಕು ಹಾಕುತ್ತ, ಈ ಭಾಗವನ್ನು ರಜಾಕಾರರ ಕಪಿಮುಷ್ಠಿಯಿಂದ ಸ್ವಾತಂತ್ರ್ಯಾವಾಗಲು ಹೋರಾಡಿದವರನ್ನು “ಉದಯವಾಣಿ’ ಸ್ಮರಿಸಿದೆ. 1947ರ ವಿಜಯ ದಶಮಿ ದಿನ ಯಾದಗಿರಿಯಲ್ಲಿ ಸೀಮೋಲ್ಲಂಘನದ ಮೆರವಣಿಗೆ ಹೊರಟಿತ್ತು. ಈ ನಡುವೆ ರಜಾಕಾರರು ಮೆರವಣಿಗೆ ಮೇಲೆ ದಾಳಿ ನಡೆಸಿದ್ದರು. ಮುಖ್ಯವಾಗಿ ಅವರ ದಾಳಿ ಉದ್ದೇಶ ಸ್ವಾತಂತ್ರ್ಯಾ ಹೋರಾಟಗಾರ, ನಿಜಾಮನಿಗೆ ಸಿಂಹಸ್ವಪ್ನವಾಗಿದ್ದ ತರುಣ ಹೋರಾಟಗಾರ ಈಶ್ವರಲಾಲ್‌ ಭಟ್ಟಡ ಅವರ ಮೇಲೆ ಹಲ್ಲೆ ನಡೆಸುವುದಾಗಿತ್ತು. 

ದಾಳಿ ಸಂದರ್ಭದಲ್ಲಿ ಭಟ್ಟಡ ಅವರ ಮೇಲೆ ಹಲ್ಲೆ ನಡೆಸಿದ ದುಷ್ಟ ರಜಾಕಾರರ ಪೈಕಿ ಒಬ್ಬ ಚೂರಿಯಿಂದ ಈಶ್ವರ ಲಾಲ್‌ ಹೊಟ್ಟೆಗೆ ತಿವಿದ. ರಕ್ತ ಒಸರುತ್ತಿದ್ದ ಭಟ್ಟಡ ಗಾಂಧಿ ವೃತ್ತದಲ್ಲಿ ನೆರಕ್ಕುರುಳಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಇಷ್ಟೆಲ್ಲ ಘಟನೆಗಳು ನಡೆದರೂ ಹಲ್ಲೆ ಮಾಡಿದ ರಜಾಕಾರರು ಪೊಲೀಸ್‌ ಠಾಣೆಗೆ ಹೋಗಿ ತಾವು ತಮ್ಮ ಪಾಡಿಗೆ ಹೋಗುತ್ತಿರುವಾಗ ಮೆರವಣಿಗೆಯಲ್ಲಿ ಬರುತ್ತಿದ್ದ ಕೊಯಿಲೂರು
ಮಲ್ಲಪ್ಪ, ಜ್ಞಾನೇಂದ್ರ ಶರ್ಮಾ, ಈಶ್ವರಲಾಲ್‌ ಭಟ್ಟಡ, ಜಗನ್ನಾಥರಾವ್‌ ಚಂಡ್ರಕಿ, ಹರಿದಾಸಬಾಯಿ ಮುಂತಾದವರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಅವರೊಂದಿಗೆ ಹೋರಾಡಿ ಆತ್ಮರಕ್ಷಣೆ ಮಾಡಿಕೊಂಡು ಓಡಿ ಬಂದಿದ್ದೇವೆ ಎಂದು ಸುಳ್ಳು ದೂರು ಸಲ್ಲಿಸಿದ್ದರು.

ಅಂದೇರಿ ನಗರಿಯ ಆಡಳಿತದಲ್ಲಿ ಈ ಐವರ ಮೇಲೆ ದೂರು ದಾಖಲಾಯಿತು. ಬಸವಕಲ್ಯಾಣದ ಖ್ಯಾತ ವಕೀಲ ಗಣಪತಿ ಶಾಸ್ತ್ರೀ ಎಷ್ಟೇ ವಾದ ಮಾಡಿದರೂ ಎಲ್ಲರಿಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಭಟ್ಟಡ ಅವರ ಈ ರೋಮಾಂಚನಕಾರಿ ಘಟನೆಯನ್ನು ಯಾದಗಿರಿ ಜನತೆ ಸ್ಮರಿಸಲೇಬೇಕಾಗುತ್ತದೆ.

ಭಟ್ಟಡರಂತೆ ಲಿಂ| ವಿಶ್ವನಾಥರೆಡ್ಡಿ ಮುದ್ನಾಳ, ಗುರುಮಠಕಲ್‌ನ ವಿದ್ಯಾಧರ ಗುರೂಜಿ, ಸರ್ದಾರ ಶರಣಗೌಡ ಇನಾಂದಾರ, ಸ್ವಾಮಿ ರಮಾನಂದ ತೀರ್ಥರು, ವಿಪಿ ದೇವಳಗಾಂವಕರ್‌, ಚೆನ್ನಬಸವ ಕುಳಗೇರಿ, ಅಣ್ಣಾರಾವ್‌ ವೀರಭದ್ರಪ್ಪ ಪಾಟೀಲ, ಅನ್ನಪೂರ್ಣಸ್ವಾಮಿ ಎಲ್ಲೆರಿ, ಶಿವಮೂರ್ತಿಸ್ವಾಮಿ ಅಳವಂಡಿ, ವೀರಭದ್ರಪ್ಪ ಶಿರೂರ, ತೀರ್ಥನಕೇಸರಿ ಜಯರಾಮಾಚಾರ್ಯ ಕೊಪ್ಪಳ, ಮಲ್ಲಣ್ಣ ಅಂಬಿಗೇರ, ಹುಮನಾಬಾದ ಪಂ. ಶಿವಚಂದ್ರ, ರಾಮಚಂದ್ರ ವೀರಪ್ಪ, ವಿರೂಪಾಕ್ಷಗೌಡ ರಾಜನಕೊಳ್ಳೂರು, ಬ್ಯಾರಿಸ್ಟರ್‌ ರಾಜಾ ವೆಂಕಟಪ್ಪ ನಾಯಕ, ಅಚ್ಚಪ್ಪಗೌಡ ಸುಬೇದಾರ ಸಗರ ಹಾಗೂ ಮುಂತಾದ ಹೋರಾಟಗಾರರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. 

ಹೈ.ಕ ವಿಮೋಚನೆಗೆ ಹೋರಾಟ ಮಾಡಿದ ಸರ್ವರನ್ನು ಸ್ಮರಿಸುತ್ತ ಗೌರವ ಸಲ್ಲಿಸುವದರೊಂದಿಗೆ ಸೆ. 17ರಂದು ಧೀಮಂತ ಹೋರಾಟಗಾರರಿಗೆ ಒಂದು ಸೆಲ್ಯೂಟ್‌ ನೀಡಬೇಕಾದುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಭಾಗದ ನಾಗರಿಕರು ಅಂದಿನ ಧ್ವಜಾರೋಹಣದಲ್ಲಿ ಪಾಲ್ಗೊಂಡು ಅವರ ತ್ಯಾಗವನ್ನು ಗೌರವಿಸೋಣ.
ಅಯ್ಯಣ್ಣ ಹುಂಡೇಕಾರ್‌, ಸಾಹಿತಿ

„ಅನೀಲ ಬಸೂದೆ

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.