ಜುಂಬಲಕ ಜಿಮ್‌ ಬಾಲೆ!


Team Udayavani, May 13, 2019, 9:57 AM IST

5

ಹತ್ತಿ, ಸ್ಪ್ಯಾಂಡೆಕ್ಸ್, ಖಾದಿ, ಇತ್ಯಾದಿ ಬಟ್ಟೆಗಳಿಂದ ತಯಾರಿಸಲಾದ ಹಗುರವಾದ ಜಿಮ್‌ ಉಡುಗೆ ತಾರೆಯರ ಅಚ್ಚು ಮೆಚ್ಚಿನ ಆಯ್ಕೆ. ಈ ಉಡುಗೆಯಲ್ಲಿ ಮೈಕಟ್ಟು ಎದ್ದು ಕಾಣುವುದರಿಂದ, ತಾವೆಷ್ಟು ಗಟ್ಟಿ ಮುಟ್ಟಾಗಿದ್ದೇವೆ ಎಂದು “ಶೋ ಆಫ್’ ಮಾಡಿಕೊಳ್ಳಲೂಬಹುದು!

ಅರೋಗ್ಯ ಕಾಪಾಡಲು ವ್ಯಾಯಾಮ, ಕಸರತ್ತು, ಯೋಗ, ಧ್ಯಾನ, ನೃತ್ಯ, ಸಮರ ಕಲೆಗಳು, ಇತ್ಯಾದಿಯನ್ನು ಕಲಿಯುತ್ತಾರೆ, ಅಭ್ಯಾಸ ಮಾಡುತ್ತಾರೆ. ಅದಕ್ಕೆಂದು ತರಗತಿಗೆ ತೊಡುವ ಸಮವಸ್ತ್ರ ಅಥವಾ ಉಡುಪೇ ಫ್ಯಾಷನ್‌ ಆಗಿಬಿಟ್ಟರೆ? ಈಗ ಜಿಮ್‌ಗೆ ತೊಡುವ ಉಡುಗೆ ಟ್ರೆಂಡ್‌ ಆಗುತ್ತಿದೆ. ಇದಕ್ಕೆ ಕಾರಣ, ಜಿಮ್‌ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ನಟಿಯರು.

ಜಿಮ್‌ ವೇರ್‌ ಏಕಿಷ್ಟ?
ಹಾಲಿವುಡ್‌ ನಟಿಯರಿಂದ ಪ್ರೇರಣೆ ಪಡೆದ ಬಾಲಿವುಡ್‌ ನಟಿಯರು ಜಿಮ್‌ನಿಂದ ಹೊರ ಬಂದಾಗಲೂ ಅದೇ ಉಡುಪಿನಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. ಬೆವರು ಹೀರುವ, ಮೈಗಂಟದಿರುವ, ವ್ಯಾಯಾಮ ಮಾಡಲು ಆರಾಮದಾಯಕ ಆಗಿರುವ, ಸ್ಟ್ರೆಚ್‌ ಆಗುವ ಬಟ್ಟೆಯಿಂದ ಈ ಉಡುಗೆಯನ್ನು ತಯಾರಿಸಲಾಗುತ್ತದೆ. ಹತ್ತಿ, ಸ್ಪ್ಯಾಂಡೆಕ್ಸ್, ಖಾದಿ, ಇತ್ಯಾದಿ ಬಟ್ಟೆಗಳಿಂದ ತಯಾರಿಸಲಾದ ಜಿಮ್‌ ಉಡುಗೆ ತಾರೆಯರ ಅಚ್ಚು ಮೆಚ್ಚಿನ ಆಯ್ಕೆ.

ಸ್ಟೈಲ್‌ ಮತ್ತು ಕಂಫ‌ರ್ಟ್‌
ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಜಿಮ್‌ ವೇರ್‌ನಲ್ಲಿ ನಟಿಯರು ಕಾಣಿಸಿಕೊಳ್ಳುವುದರಿಂದ ಬ್ರಾಂಡ್‌ಗಳ ಪ್ರಚಾರವೂ ಆಗುತ್ತದೆ. ಅಂತೆಯೇ ತಮ್ಮ ರಾಯಭಾರಿಯಾಗಲು, ಬ್ರಾಂಡ್‌ಗಳು, ನಟಿಯರನ್ನು ಕೇಳಿಕೊಳ್ಳುತ್ತವೆ. ಹೀಗಾಗಿ ಇಬ್ಬರಿಗೂ ಲಾಭವಿದೆ. ಕೇವಲ ಸ್ಟೈಲ್‌ಗಾಗಿ ಅಲ್ಲದೆ, ಆರಾಮಕ್ಕಾಗಿಯೂ ಇದು ಉಪಯೋಗ ಆಗುವ ಕಾರಣ, ಜಿಮ್‌ ವೇರ್‌ ಅನ್ನು ಮಹಿಳೆಯರು ವಾಕಿಂಗ್‌, ಜಾಗಿಂಗ್‌ ಮತ್ತು ಸಂತೆ, ಶಾಪಿಂಗ್‌, ವಿಮಾನ ನಿಲ್ದಾಣ ಹಾಗು ಆಫೀಸ್‌ಗೂ ತೊಟ್ಟು ಬರುತ್ತಾರೆ!

ನಟಿಯರ ಮೆಚ್ಚಿನ ದಿರಿಸು
ಶಾರ್ಟ್ಸ್, ಪ್ಯಾಂಟ್‌, ಜಾಕೆಟ್‌, ಟಿ-ಶರ್ಟ್‌, ಟ್ಯಾಂಕ್‌ ಟಾಪ್‌, ಹುಡ್ಡೀ, ನ್ಪೋರ್ಟ್ಸ್ ಬ್ರಾ, ಸಾಕ್ಸ್ ಮತ್ತು ಶೂ. ಇವಿಷ್ಟನ್ನು ಜಿಮ್‌ ವೇರ್‌ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದೂ ಒಳ್ಳೆ ಬ್ರಾಂಡ್‌ ನದ್ದಾಗಿರುತ್ತದೆ. ಇಂಥ ಉಡುಗೆಯಲ್ಲಿ ಮೈಕಟ್ಟು ಎದ್ದು ಕಾಣುವುದರಿಂದ, ತಾವೆಷ್ಟು ಗಟ್ಟಿ ಮುಟ್ಟಾಗಿದ್ದೇವೆ ಎಂದು “ಶೋ ಆಫ್’ ಮಾಡಿಕೊಳ್ಳಲೂಬಹುದು! ಹಿಂದಿ ಚಿತ್ರ ನಟಿಯರಾದ ಸೋನಾಕ್ಷಿ ಸಿಂಹ, ಸಾರಾ ಅಲಿ ಖಾನ್‌, ಪರಿಣೀತಿ ಚೋಪ್ರಾ, ಮಲೈಕಾ ಅರೋರಾ ಖಾನ್‌, ಕರೀನಾ ಕಪೂರ್‌ ಖಾನ್‌, ಜಾಹ್ನವಿ ಕಪೂರ್‌, ಕತ್ರೀನಾ ಕೈಫ್ ಹಾಗು ನಟ ಶಾಹಿದ್‌ ಕಪೂರ್‌ ಪತ್ನಿ ಮೀರಾ ರಜಪೂತ್‌ ಕಪೂರ್‌ ಎಲ್ಲರೂ ಆಗಾಗ ಛಾಯಾಚಿತ್ರಕಾರರ ಕಣ್ಣಿಗೆ ಜಿಮ್‌ ವೇರ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ, ಅವರ ಚಿತ್ರಗಳೆಲ್ಲ ಪತ್ರಿಕೆಗಳಲ್ಲಿ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ತೊಟ್ಟ ಜಿಮ್‌ ವೇರ್‌ಅನ್ನೇ ಹುಡುಕಾಟ ನಡೆಸುವ ಪ್ರವೃತ್ತಿಯೂ ಬೆಳೆಯುತ್ತಿದೆ. ಹತ್ತಿರದ ಅಂಗಡಿಗಳಲ್ಲಿ ಸಿಗದಿದ್ದರೂ ಆನ್‌ಲೈನ್‌ ಮೂಲಕ ಅವುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ದರ್ಜಿಗಳ ಬಳಿ ತಮಗೆ ಬೇಕಾದ ವಿನ್ಯಾಸದಲ್ಲಿ ಹೊಲಿಸಿ, ಆಲೆಶನ್‌ ಮಾಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಈ ಜಿಮ್‌ ವೇರ್‌ ಫ್ಯಾಷನ್‌ ಟ್ರೆಂಡ್‌ ಬಹು ಕಾಲ ಸುದ್ದಿ ಮಾಡಲಿದೆ.

– ಅದಿತಿಮಾನಸ ಟಿ. ಎಸ್‌.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.