ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ


Team Udayavani, Oct 24, 2022, 3:09 PM IST

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

ಕುದೂರು: ದೀಪಾವಳಿ ಎಂದರೆ ಬೆಳಕಿನ ಹಬ್ಬ ಕಾರ್ತಿಕ ಮಾಸ ಆರಂಭದ ನಂತರ ಪ್ರತಿ ಮನೆ ಮನೆಗಳಲ್ಲೂ ಬೆಳಗುವ ದೀಪಗಳ ಸಾಲು ದೀಪಾವಳಿ ವೇಳೆಗೆ ವಿಶೇಷ ಮೆರಗು ಪಡೆಯುತ್ತದೆ. ಹತ್ತಿಯ ಬತ್ತಿ ಹೊಸದು ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆ ಸುರಿದು ಮನೆಯ ಮುಂದೆ 3 ಸಾಲಾಗಿ ಜೋಡಿಸಿ, ಹಣತೆ ಬೆಳಗಿಸುವುದು ಹಿಂದಿನಿಂದಲೂ ನೆಡೆದುಕೊಂಡು ಬಂದಿರುವ ಸಂಪ್ರದಾಯ. ದೀಪಾವಳಿ ಹಬ್ಬಕ್ಕೆ ಹಿಂದೆ ಪ್ರತಿ ಮನೆಯಲ್ಲೂ ಮಣ್ಣಿನ ಹಣತೆಗಳನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದರು.

ಇಂತಹ ಹಣತೆಗಳು ಇಂದು ಆಧುನಿಕ ಸ್ಪರ್ಶ ಪಡೆದಿದೆ. ಮಣ್ಣಿನ ಹಣತೆಗಳ ಸ್ಥಾನದಲ್ಲಿ ಪಿಂಗಾಣಿ, ಹಣತೆಗಳು, ಪ್ಲಾಸ್ಟಿಕ್‌, ಫೈಬರ್‌ ಹಣತೆಗಳು ಲಗ್ಗೆಯಿಟ್ಟಿವೆ. ದೀಪದ ಕೆಳಗೆ ಕತ್ತಲು ಎಂಬಂತೆ ಮತ್ತೂಬ್ಬರ ಮನೆಯ ದೀಪ ಬೆಳಗಲು ಮಣ್ಣಿನ ಹಣತೆ ತಯಾರಿಸುವ ಕುಂಬಾರರ ಬದುಕಿನಲ್ಲಿ ಕತ್ತಲು ಅವರಿಸಿದೆ. ದೀಪಾವಳಿ ಹಬ್ಬಕ್ಕೆ ಶ್ರೇಷ್ಟ ಮಣ್ಣಿನ ಹಣತೆಗಳನ್ನು ತಯಾರಿಸುವ ಕುಟುಂಬಗಳಿಗೆ ಇದೀಗ ವೈವಿಧ್ಯ ರೂಪದ ಪಿಂಗಾಣಿ ದೀಪಗಳು ಪೈಪೋಟಿ ನೀಡಿದ್ದು, ಒಂದೆಡೆ ಲೋಹದ ದೀಪಗಳ ಸ್ಟಾಂಡ್‌ಗಳು, ಪೈಬರ್‌ ದೀಪ, ಪ್ಲಾಸ್ಟಿಕ್‌ ದೀಪ, ವಿದ್ಯುತ್‌ ಅಲಂಕಾರಿಕ ಕೃತಕ ದೀಪಗಳು ಬಂದಿರುವುದರಿಂದ ರೇಷ್ಮೆ ಜಿಲ್ಲೆಯ ಕುಂಬಾರಿಕೆ ನೆಚ್ಚಿಕೊಂಡಿರುವ ಕುಟು ಂಬಗಳಿಗೆ ನೀರವ ಮೌನ ಅವರಿಸಿದೆ.

ಪ್ರತಿ ವರ್ಷ ದೀಪಾವಳಿ ಬಂತೆಂದರೆ ಕೈ ತುಂಬಾ ಕೆಲಸದ ಜೊತೆಗೆ ಕೆಲಸಕ್ಕೆ ತಕ್ಕಂತೆ ಹಣ ದೊರೆಯುತ್ತಿತ್ತು. ಈ ವರ್ಷ ದೀಪಾವಳಿ ಇವರ ಪಾಲಿಗೆ ಸಂಭ್ರಮಿ ಸುವುದಕ್ಕಿಂತ ಬೇಸರ ತಂದಿದೆ.

ಪಿಂಗಾಣಿ ದೀಪದ ಪೈಪೋಟಿ: ಇತ್ತೀಚಿನ ಕೆಲ ವರ್ಷಗಳಲ್ಲಿ ಹಣತೆ ಉದ್ಯಮದಲ್ಲಿ ಬದಲಾವಣೆ ಗಾಳಿ ಬೀಸಿದೆ. ಮಣ್ಣಿನ ಹಣತೆಯ ಪರ್ಯಾಯವಾಗಿ ಆಧುನಿಕ ಸ್ಪರ್ಶ ಪಡೆದ ಪಿಂಗಾಣಿ ಹಣತೆ, ಚೀನಿ ಮಣ್ಣಿನ ಹಣತೆಗಳು ಕುಂಬಾರರ ಬದುಕಿನಲ್ಲಿ ಬಿರುಗಾಳಿ ಬೀಸಿದೆ. ಮಣ್ಣು ಸಿಗುವುದೇ ಕಷ್ಟ: ಕುಂಬಾರರಿಗೆ ಮಣ್ಣೇ ಬಂಡವಾಳ. ಆದರೆ, ಈ ಬಾರಿ ಉತ್ತಮವಾಗಿ ಮಳೆಯಾಗಿರುವುದರಿಂದ ಕೆರೆಕಟ್ಟೆಗಳೆಲ್ಲ ಭರ್ತಿಯಾಗಿ ಮಣ್ಣು ಸಿಗುವುದೇ ಕಷ್ಟವಾಗುತ್ತಿದೆ. ಇದರಿಂದ ದೀಪ ತಯಾರಿಕೆಗೆ ಬೇಕಾದ ಹದವಾದ ಮಣ್ಣು ಸಿಗುತ್ತಿಲ್ಲ. ಹೀಗಾಗಿ ಶೇಖರಣೆ ದೊಡ್ಡ ಕೆಲಸ ಎನ್ನುತ್ತಾರೆ ಕುಂಬಾರರು.

ಕೈ ತುಂಬಾ ಕೆಲಸ: ಹಿಂದೆ ದೀಪಾವಳಿ ಬಂತೆಂದರೆ ಸಾಕು, ಕುಂಬಾರರಿಗೆ ಕೈತುಂಬಾ ಕೆಲಸವಿತ್ತು. ಹಬ್ಬಕ್ಕೂ ಒಂದು ತಿಂಗಳ ಮುಂಚೆ ಹಣತೆ ತಯಾರಿಸಲು ಸಿದ್ಧತೆ ಆರಂಭಿಸಿ, ತಿಂಗಳ ಪೂರ್ಣ ಮನೆಯ ಎಲ್ಲಾ ಸದಸ್ಯರು ಹಣತೆಗಳನ್ನು ತಯಾರಿಸುತ್ತಿದ್ದರು. ಹಬ್ಬಕ್ಕೆ ಒಂದು ವಾರ ಮುಂಚೆಯೇ ತಯಾರಿಸಿದ ಹಣತೆಗಳ ಮಾರಾಟ ಆರಂಭಿಸುತ್ತಿದ್ದರು. ಇದೊಂದು ಹಬ್ಬದಲ್ಲಿ ಆದ ದುಡಿಮೆ 3-4 ತಿಂಗಳ ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತಿತ್ತು. ಅಲ್ಲದೆ, ಬೇರೆ ಮಣ್ಣಿನ ಪರಿಕರಗಳ ತಯಾರಿಕೆಗೆ ಸ್ವಲ್ಪ ಮಟ್ಟಿನ ಬಂಡವಾಳ ತಂದು ಕೊಡುತ್ತಿತ್ತು ಎನ್ನುತ್ತಾರೆ ಕುಂಬಾರರು. ನಮಗೆ ಕುಂಬಾರಕೆ ಬಿಟ್ಟರೆ ಬೇರೆ ಕಸುಬು ಗೊತ್ತಿಲ್ಲ. ಕುಂಬಾರಿಕೆ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಕೆಲವು ಸಮುದಾಯದವರು ಮಾತ್ರ ಇಂದಿಗೂ ಮಂಗಳ ಕಾರ್ಯಗಳಿಗೆ ಉಪಯೋಗಿಸುತ್ತಾರೆ.

ಮಣ್ಣಿನ ವೈವಿಧ್ಯ ದೀಪಗಳು: ಆಧುನಿಕತೆ ತಕ್ಕಂತೆ ವೈವಿಧ್ಯಮಯ ವಿನ್ಯಾಸಗಳಿಂದ ಕುಂಬಾರಿಕೆಯ ಕೈ ಚಳಕದಿಂದ ಅರಳಿದ್ದ ದೀಪಗಳು ಹಿಂದೆ ದೀಪಾವಳಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದವು. ಸುಮಾರು 50 ವರ್ಷದಿಂದ ದೀಪಗಳು, ಮತ್ತಿತ್ತರ ಅಲಂಕಾರಿಕ ವಸ್ತುಗಳ ವ್ಯಾಪಾರ ಮಾಡುವವರಿಗೆ ಕಳೆದ 2 ವರ್ಷದಿಂದ ಕೊರೊನಾ ಹಿನ್ನೆಲೆ ವ್ಯಾಪಾರವಾಗದೆ ಬಹಳ ನಷ್ಟವಾಗಿ, ದೀಪಗಳು ಗೂಡು ಸೇರುವಂತಾಗಿದೆ. ಈ ಬಾರಿ ತಕ್ಕಮಟ್ಟಿಗೆ ವ್ಯಪಾರ ನಡೆಯುತ್ತಿದೆ. ಕುಂಬಾರಿಕೆ ಹೊರತು, ಬೇರೆ ಉದ್ಯೋಗ ನಮಗೆ ಬರುವುದಿಲ್ಲ. – ಸಂಜೀವಯ್ಯ ಕುಂಬಾರರು, ಕುಡಿಕೆ ಬೇಗೂರು

ರಂಜಾನ್‌ ಮಾಸದಿಂದ ಮಡಕೆ, ದೀಪಗಳ ಮಾರಾಟ ಶುರುವಾಗುತ್ತದೆ. ಕಾರ್ತಿಕ ಮಾಸ, ರಥಸಪ್ತಮಿ, ಸಂಕ್ರಾತಿ ಹಬ್ಬಗಳವರೆಗೂ ದೀಪದ ಮಾರಾಟವಿರುತ್ತದೆ. ನಮ್ಮ ಕುಟುಂಬಗಳ ಮೂಲ ಕಸುಬಾಗಿದ್ದ ಮಡಕೆ ತಯಾರಿಕೆ, ಇಂದು ಉಪಕಸುಬಾಗಿದೆ. – ರಾಜಣ್ಣ ಬಾಣವಾಡಿ, ಕುಂಬಾರರು

ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಬಂದ ಮೇಲೆ ಕುಂಬಾರಿಕೆಗೆ ಕುತ್ತು ಬಂದಿದೆ. ಸರ್ಕಾರ ಕುಲ ಕಸುಬುದಾರರ ನೆರವಿಗೆ ಬರಬೇಕು. – ಕೆ.ಆರ್‌.ಯತಿರಾಜು, ಮಾಜಿ ಅಧ್ಯಕ್ಷರು, ತಾಪಂ

ಕೊರೊನಾ ಮಹ ಮಾರಿಯಿಂದಾಗಿ ದೀಪಗಳ ವ್ಯಾಪಾರಕ್ಕೆ ಹೊಡೆತ ಬಿದ್ದಿತ್ತು. ಈಗ ಸ್ವಲ್ಪ ಚೇತರಿಸಿಕೊಂಡಿದೆ. ಹಣತೆ ವ್ಯಾಪಾರ ಮಂದಗತಿಯಲ್ಲಿ ಸಾಗಿದೆ. – ರೂಪ ಮಂಜುನಾಥ್‌, ವ್ಯಾಪಾರಸ್ಥರು

– ಕೆ.ಎಸ್‌.ಮಂಜುನಾಥ್‌

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.