ಯಾದಗಿರಿ: ಮತ್ತೆ 16 ಜನರಿಗೆ ಸೋಂಕು ದೃಢ; 1043ಕ್ಕೆ ಏರಿದ ಸೋಂಕಿತರ ಸಂಖ್ಯೆ
ಮೂರನೇ ಹಂತಕ್ಕೆ ಹರಡುತ್ತಿದೆಯೇ ಮಹಾಕ್ರೂರಿ !
Team Udayavani, Jul 9, 2020, 9:04 PM IST
ಯಾದಗಿರಿ: ಜಿಲ್ಲೆಯಲ್ಲಿ ಸೋಂಕು ಮೂರನೇ ಹಂತಕ್ಕೆ ತಲುಪಿದ್ದು, ಇಂದು ಮತ್ತೆ 16 ಜರನಲ್ಲಿ ಹರಡಿದ್ದು ಇದೀಗ ಸೋಂಕಿತರ ಸಂಖ್ಯೆ 1043ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಸುರಪುರ ತಾಲೂಕಿನಲ್ಲಿಯೇ ವ್ಯಾಪಕವಾಗಿ ಸೋಂಕು ಸಮುದಾಯಕ್ಕೆ ಹರಡುತ್ತಿದ್ದು ಜುಲೈ 1ರಂದು ಕೋವಿಡ್ಗೆ ತುತ್ತಾಗಿರುವ ಸುರಪುರ ತಾಲೂಕಿನ ಚಿಂಚೋಡಿಯ 34 ವರ್ಷದ ಪುರುಷ ಪಿ 15476ರ ಸಂಪರ್ಕದಿಂದ ಬುಧವಾರವಷ್ಟೇ ಮೂರು ಜನರಿಗೆ ತಗುಲಿದ್ದ ಸೋಂಕು, ಗುರುವಾರವೂ ಮತ್ತೆ ಏಳು ಜನರಿಗೆ ಹರಡಿರುವುದು ಆತಂಕಕ್ಕೆ ಕಾರಣವಾಗಿದೆ.
ಇವರ ಸಂಪರ್ಕದಿಂದ ಸುರಪುರಿನ ದಿವಳಗುಡ್ಡದ 24 ವರ್ಷದ ಪುರುಷ ಪಿ 29032, 46 ವರ್ಷದ ಪುರುಷ ಪಿ 29033, 16 ವರ್ಷದ ಬಾಲಕಿ ಪಿ 29034 , 18 ವರ್ಷದ ಬಾಲಕ ಪಿ 29035, 22 ವರ್ಷದ ಮಹಿಳೆ ಪಿ 29036, 80 ವರ್ಷದ ಮಹಿಳೆ ಪಿ 39037, 14 ವರ್ಷದ ಬಾಲಕಿ ಪಿ 29038 ಗೆ ಸೋಂಕು ತಗುಲಿದೆ.
ಇನ್ನು ಸುರಪುರ ತಾಲೂಕಿನ ಸುಗೂರ ಗ್ರಾಮದ 66 ವರ್ಷದ ಪುರುಷ ಪಿ 13411 ರ ಸಂಪರ್ಕದಿಂದಲೂ 4 ವರ್ಷದ ಬಾಲಕಿ ಪಿ 29043 ಸೇರಿದಂತೆ ಒಟ್ಟು 4 ಜನ 65 ವರ್ಷದ ಮಹಿಳೆ ಪಿ 20040 , 40 ವರ್ಷದ ಮಹಿಳೆ ಪಿ 29041, 45 ವರ್ಷದ ಮಹಿಳೆ ಪಿ 29046 ಗೆ ಸೋಂಕು ಒಕ್ಕರಿಸಿದೆ.
ಯಾವುದೇ ಸಂಪರ್ಕ ಪತ್ತೆಯಾಗದ ನಾಲ್ಕು ಜನ ಸುರಪುರ ಪೊಲೀಸ್ ಪೇದೆ ಎನ್ನಲಾದ 26 ವರ್ಷದ ಪಿ 29039,
ಸತ್ಯಂಪೇಟ್ನ 48 ವರ್ಷದ ಪುರುಷ ಪಿ 29044 , ಸುರಪುರ ಘಟಕದ 28 ವರ್ಷದ ಪುರುಷ ಪಿ 29045 ಹಾಗೂ ವಡಗೇರಾ ತಾಲೂಕಿನ ಹಯ್ಯಾಳ (ಬಿ)ಯ 40 ವರ್ಷದ ಮಹಿಳೆ ಪಿ 29047 ಗೆ ಸೋಂಕು ಪತ್ತೆಯಾಗಿದೆ.
ಅಲ್ಲದೆ ಮಹಾರಾಷ್ಟ್ರದಿಂದ ಆಗಮಿಸಿದ್ದ ಸುರಪುರ ತಾಲೂಕಿನ ಸುತಾರ ಹುಣಸಗಿ 20ವರ್ಷದ ಮಹಿಳೆ ಪಿ 29042 ಗೆ ಸೋಂಕು ಕಾಣಿಸಿದೆ.
28933 ಜನರ ಕೋವಿಡ್ ಪರೀಕ್ಷೆ: ಜಿಲ್ಲೆಯಲ್ಲಿ ಗುರುವಾರ 433 ಹೊಸ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದ್ದು, ಈವರೆಗೆ 28933 ಜನರ ಕೋವಿಡ್ ಪರೀಕ್ಷೆಯಾಗಿದ್ದು ಇವರಲ್ಲಿ 26613 ಜನರ ವರದಿ ನೆಗೆಟಿವ್ ಬಂದಿದ್ದು ಇನ್ನು 1277 ಜನರ ವರದಿ ಬರಬೇಕಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕದ 135 ಜನ ಪತ್ತೆಯಾಗಿದ್ದು ಒಟ್ಟು 2276 ಮತ್ತು ದ್ವಿತೀಯ ಸಂಪರ್ಕದ 168 ಜನ ಸೇರಿ ಈವರೆಗೆ 3606 ಜನರನ್ನು ಪತ್ತೆ ಹಚ್ಚಲಾಗಿದೆ. ಇಂದು 9 ಕಂಟೇನ್ಮೇಟ್ ಝೋನ್ ರಚಿಸಲಾಗಿದ್ದು ಒಟ್ಟು 105ಕ್ಕೆ ಏರಿಕೆಯಾಗಿದೆ. 1043 ಸೋಂಕಿತರಲ್ಲಿ ಈವರೆಗೆ 876 ಜನ ಗುಣಮುಖವಾಗಿದ್ದು, 166 ಪ್ರಕರಣ ಸಕ್ರಿಯವಾಗಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ