2023ನೇ ಸಾಲಿನ ಸಾರ್ವತ್ರಿಕ ರಜೆಗಳು


Team Udayavani, Nov 22, 2022, 7:40 AM IST

tdy-15

ಬೆಂಗಳೂರು: 2023ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರ ದಿನದ ರಜೆಗಳನ್ನು ಹೊರತುಪಡಿಸಿ 20 ಸಾರ್ವತ್ರಿಕ ರಜೆಗಳು ಹಾಗೂ 17 ಪರಿಮಿತ (ಸಾಂದರ್ಭಿಕ) ರಜೆಗಳನ್ನು ಪ್ರಕಟಿಸಲಾಗಿದೆ.

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (ಜ.15), ಬಸವ ಜಯಂತಿ/ಅಕ್ಷಯ ತೃತೀಯ (ಏಪ್ರಿಲ್‌ 23) ನರಕ ಚತುರ್ದಶಿ (ನ.12) ಹಾಗೂ ಎರಡನೇ ಶನಿವಾರ ಬರುವ ಮಹಾಲಯ ಅಮಾವಾಸ್ಯೆ (ಅ.14), ನಾಲ್ಕನೇ ಶನಿವಾರ ಬರುವ ರಂಜಾನ್‌ ಹಬ್ಬ (ಏ.22), ಮಹರ್ಷಿ ವಾಲ್ಮೀಕಿ ಜಯಂತಿ (ಅ.28) ಇವುಗಳನ್ನು ಸಾರ್ವತ್ರಿಕ ರಜಾ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

ಅದೇ ರೀತಿ ನೂತನ ವರ್ಷಾರಂಭ (ಜ.1), ದೇವರ ದಾಸಿಮಯ್ಯ ಜಯಂತಿ (ಮಾ.26), ವಿಶ್ವಕರ್ಮ ಜಯಂತಿ (ಸೆ.17). ಕ್ರಿಸ್‌ಮಸ್‌ (ಡಿ.24) ಭಾನುವಾರದಂದು ಹಾಗೂ ಹೋಲಿ ಸ್ಯಾಟರ್‌ ಡೇ (ಏ.8) ಎರಡನೇ ಶನಿವಾರ ಬರುವುದರಿಂದ ಸಾಂದರ್ಭಿಕ ರಜೆ ಪಟ್ಟಿಯಲ್ಲಿ ಪ್ರಕಟಿಸಿಲ್ಲ.

ಅಲ್ಲದೆ, ಸೌರಮಾನ ಯುಗಾದಿ (ಏ.14) ಶುಕ್ರವಾರ, ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ, ಸ್ವರ್ಣಗೌರಿ ವ್ರತ (ಸೆ.18), ಸೋಮವಾರ, ವರಸಿದ್ಧಿ ವಿನಾಯಕ ವ್ರತ ಹಾಗೂ ಅನಂತಪದ್ಮನಾಭ ವ್ರತ (ಸೆ.28) ಗುರುವಾರ, ಈದ್‌ ಮಿಲಾದ್‌ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ರಜೆ ಪಟ್ಟಿಯಲ್ಲಿ ನಮೂದಿಸಿಲ್ಲ.

ರಜೆ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸ್ಲಿಮರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಮರು ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನ ರಜೆ ಮಂಜೂರು ಮಾಡಬಹುದು.

ಏಪ್ರಿಲ್‌ 1 ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನ ಆಗಿರುವುದರಿಂದ ಆ ದಿನ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜೆ ಇರುತ್ತದೆ.

ಸೆಪ್ಟೆಂಬರ್‌ 3 (ಭಾನುವಾರ) ಕೈಲ್‌ ಮೂಹೂರ್ತ, ಅ.18 (ಬುಧವಾರ) ತುಲಾ ಸಂಕ್ರಮಣ ಹಾಗೂ ನ.28 (ಮಂಗಳವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಸೂಚನೆ ತಿಳಿಸಿದೆ.

ಸಾರ್ವತ್ರಿಕ ರಜೆಗಳು :

ಜನವರಿ 26-ಗಣರಾಜ್ಯೋತ್ಸವ

ಫೆಬ್ರವರಿ 18-ಮಹಾ ಶಿವರಾತ್ರಿ

ಮಾರ್ಚ್‌ 22- ಯುಗಾದಿ

ಏಪ್ರಿಲ್‌ 1-ಬ್ಯಾಂಕುಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯ ದಿನ

ಏಪ್ರಿಲ್‌ 3-ಮಹಾವೀರ ಜಯಂತಿ

ಏಪ್ರಿಲ್‌ 7- ಗುಡ್‌ ಫ್ರೈಡೆ

ಏಪ್ರಿಲ್‌ 14- ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ

ಮೇ 1-ಕಾರ್ಮಿಕರ ದಿನಾಚರಣೆ

ಜೂನ್‌ 29- ಬಕ್ರೀದ್‌

ಜುಲೈ 29- ಮೊಹರಂ ಕಡೇ ದಿನ

ಆಗಸ್ಟ್‌ 15- ಸ್ವಾತಂತ್ರ್ಯ ದಿನಾಚರಣೆ

ಸೆಪ್ಟಂಬರ್‌ 18- ವರಸಿದ್ಧಿ ವಿನಾಯಕ ವ್ರತ

ಸೆಪ್ಟಂಬರ್‌ 28- ಈದ್‌ ಮಿಲಾದ್‌

ಅಕ್ಟೋಬರ್‌ 2-ಗಾಂಧಿ ಜಯಂತಿ

ಅಕ್ಟೋಬರ್‌ 23- ಮಹಾನವಮಿ ಆಯುಧ ಪೂಜೆ

ಅಕ್ಟೋಬರ್‌ 24- ವಿಜಯದಶಮಿ

ನವೆಂಬರ್‌ 1- ಕನ್ನಡ ರಾಜ್ಯೋತ್ಸವ

ನವೆಂಬರ್‌ 14- ಬಲಿಪಾಡ್ಯಮಿ ದೀಪಾವಳಿ

ನವೆಂಬರ್‌ 30-ಕನಕದಾಸ ಜಯಂತಿ

ಡಿಸೆಂಬರ್‌ 25-ಕ್ರಿಸ್‌ಮಸ್‌

ಸಾಂದರ್ಭಿಕ ರಜೆಗಳು:

ಜನವರಿ 30- ಮಧ್ವ ನವಮಿ

ಮಾರ್ಚ್‌ 7-ಷಬ್‌-ಏ-ಬರಾತ್‌

ಮಾರ್ಚ್‌ 8-ಹೋಳಿ ಹಬ್ಬ

ಮಾರ್ಚ್‌ 30-ಶ್ರೀರಾಮ ನವಮಿ

ಏಪ್ರಿಲ್‌ 18- ಷಬ್‌-ಏ-ಖದರ್‌

ಏಪ್ರಿಲ್‌ 21- ಜುಮತ್‌-ಉಲ್‌-ವಿದಾ

ಏಪ್ರಿಲ್‌ 25- ಶಂಕರಾಚಾರ್ಯ ಜಯಂತಿ, ರಾಮಾನುಜಾಚಾರ್ಯ ಜಯಂತಿ

ಮೇ 5- ಬುದ್ಧ ಪೂರ್ಣಿಮೆ

ಆಗಸ್ಟ್‌ 25- ವರಮಹಾಲಕ್ಷ್ಮಿ ವ್ರತ

ಆಗಸ್ಟ್‌ 29- ಋಗ್‌ ಉಪಕರ್ಮ, ತಿರು ಓಣಂ

ಆಗಸ್ಟ್‌ 30- ಯಜುರ್‌ ಉಪಕರ್ಮ

ಆಗಸ್ಟ್‌ 31-ಬ್ರಹ್ಮಶ್ರೀ ನಾರಾಯಣಗುರು ಜಯಂತಿ

ಸೆಪ್ಟಂಬರ್‌ 6- ಶ್ರೀ ಕೃಷ್ಣ ಜನ್ಮಾಷ್ಠಮಿ

ಸೆಪ್ಟಂಬರ್‌ 8- ಕನ್ಯಾ ಮರಿಯಮ್ಮ ಜಯಂತಿ

ಅಕ್ಟೋಬರ್‌ 18- ತುಲಾ ಸಂಕ್ರಮಣ

ನವೆಂಬರ್‌ 27- ಗುರು ನಾನಕ್‌ ಜಯಂತಿ

ನವೆಂಬರ್‌ 28-ಹುತ್ತರಿ ಹಬ್ಬ

ಟಾಪ್ ನ್ಯೂಸ್

ದೇಶಾದ್ಯಂತ ಟೋಲ್‌ ಸುಂಕ ದುಬಾರಿ

ದೇಶಾದ್ಯಂತ ಟೋಲ್‌ ಸುಂಕ ದುಬಾರಿ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!

ಶಾಸಕರನ್ನು ಇನ್ನೂ ಅನರ್ಹಗೊಳಿಸಲಿಲ್ಲವೇ?

ಶಾಸಕರನ್ನು ಇನ್ನೂ ಅನರ್ಹಗೊಳಿಸಲಿಲ್ಲವೇ?

kuchila

ಸ್ಥಳೀಯ ಕುಚ್ಚಲಕ್ಕಿ ಅಲಭ್ಯ: ಹೊಸ ತಳಿ ಅಕ್ಕಿ ವಿತರಣೆಗೆ ಚಿಂತನೆ

ಭಾರಿ ವಾಹನಗಳ ಕಡ್ಡಾಯ ಫಿಟ್ನೆಸ್ ಪರೀಕ್ಷೆ ಅವಧಿ ವಿಸ್ತರಣೆ

ಭಾರಿ ವಾಹನಗಳ ಕಡ್ಡಾಯ ಫಿಟ್ನೆಸ್ ಪರೀಕ್ಷೆ ಅವಧಿ ವಿಸ್ತರಣೆ

ಪಾಕಿಸ್ಥಾನ: ಹಿಂದೂಗಳ ಮತಾಂತರ ಖಂಡಿಸಿ ಪ್ರತಿಭಟನೆ

ಪಾಕಿಸ್ಥಾನ: ಹಿಂದೂಗಳ ಮತಾಂತರ ಖಂಡಿಸಿ ಪ್ರತಿಭಟನೆ

ನಾಸಾ ಯೋಜನೆಗೆ ಅಮಿತ್‌ ಕ್ಷತ್ರಿಯ ನೇಮಕ

ನಾಸಾ ಯೋಜನೆಗೆ ಅಮಿತ್‌ ಕ್ಷತ್ರಿಯ ನೇಮಕ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!

ಶಾಸಕರನ್ನು ಇನ್ನೂ ಅನರ್ಹಗೊಳಿಸಲಿಲ್ಲವೇ?

ಶಾಸಕರನ್ನು ಇನ್ನೂ ಅನರ್ಹಗೊಳಿಸಲಿಲ್ಲವೇ?

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ದಿಲ್ಲಿ ಸಭೆಯಲ್ಲೂ ಹಳ್ಳಿ ಅಭಿಪ್ರಾಯಕ್ಕೆ ಮನ್ನಣೆ;  ಜಿಲ್ಲೆಗಳಲ್ಲೂ ನಡೆದ ಕೋರ್‌ ಕಮಿಟಿ ಸಭೆ

ದಿಲ್ಲಿ ಸಭೆಯಲ್ಲೂ ಹಳ್ಳಿ ಅಭಿಪ್ರಾಯಕ್ಕೆ ಮನ್ನಣೆ;  ಜಿಲ್ಲೆಗಳಲ್ಲೂ ನಡೆದ ಕೋರ್‌ ಕಮಿಟಿ ಸಭೆ

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ದೇಶಾದ್ಯಂತ ಟೋಲ್‌ ಸುಂಕ ದುಬಾರಿ

ದೇಶಾದ್ಯಂತ ಟೋಲ್‌ ಸುಂಕ ದುಬಾರಿ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!

ಶಾಸಕರನ್ನು ಇನ್ನೂ ಅನರ್ಹಗೊಳಿಸಲಿಲ್ಲವೇ?

ಶಾಸಕರನ್ನು ಇನ್ನೂ ಅನರ್ಹಗೊಳಿಸಲಿಲ್ಲವೇ?

kuchila

ಸ್ಥಳೀಯ ಕುಚ್ಚಲಕ್ಕಿ ಅಲಭ್ಯ: ಹೊಸ ತಳಿ ಅಕ್ಕಿ ವಿತರಣೆಗೆ ಚಿಂತನೆ

ಭಾರಿ ವಾಹನಗಳ ಕಡ್ಡಾಯ ಫಿಟ್ನೆಸ್ ಪರೀಕ್ಷೆ ಅವಧಿ ವಿಸ್ತರಣೆ

ಭಾರಿ ವಾಹನಗಳ ಕಡ್ಡಾಯ ಫಿಟ್ನೆಸ್ ಪರೀಕ್ಷೆ ಅವಧಿ ವಿಸ್ತರಣೆ