ಕರಾವಳಿ ತೋಟದಲ್ಲೂ ಫೈಬರ್‌ ದೋಟಿ! ಅಡಿಕೆ ಕೊಯ್ಲು, ಔಷಧ ಸಿಂಪಡಣೆ ಇನ್ನು ಸುಲಭ


Team Udayavani, Feb 10, 2022, 6:15 AM IST

ಕರಾವಳಿ ತೋಟದಲ್ಲೂ ಫೈಬರ್‌ ದೋಟಿ! ಅಡಿಕೆ ಕೊಯ್ಲು, ಔಷಧ ಸಿಂಪಡಣೆ ಇನ್ನು ಸುಲಭ

ಪುತ್ತೂರು: ಅಡಿಕೆ ಕೊಯ್ಲು ಮತ್ತು ಮರಕ್ಕೆ ಔಷಧ ಸಿಂಪಡಣೆಗೆ ಸಾಗರ-ಸೊರಬ ಪ್ರಾಂತ್ಯದಲ್ಲಿ ಬಳಕೆ ಯಲ್ಲಿರುವ ಕಾರ್ಬನ್‌ ಫೈಬರ್‌ ದೋಟಿ ಕರಾವಳಿಗೂ ಕಾಲಿಟ್ಟಿದೆ.

ಕಾರ್ಮಿಕರ ಅಭಾವ, ಮರ ಏರುವಾಗಿನ ಅಪಾಯದ ಭೀತಿಯ ಹಿನ್ನೆಲೆಯಲ್ಲಿ ಅಗತ್ಯಕ್ಕನುಸಾರವಾಗಿ ಏರಿಳಿತ
ಮಾಡಿಕೊಂಡು ನೆಲ ದಿಂದಲೇ ಬಳಸಬಹುದಾದ ಈ ದೋಟಿ ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಕೊಯ್ಲು ಸಂದರ್ಭ ಕತ್ತಿಯನ್ನು ಕಟ್ಟಿದರೆ, ಸಿಂಪಡಣೆಗೆ ಸಾಮಾನ್ಯ ಪೈಪನ್ನೇ ಅಳವಡಿಸಿಕೊಳ್ಳಬಹುದು. 85 ಅಡಿ ವರೆಗಿನ ದೋಟಿಗಳು ಲಭ್ಯವಿವೆ. ಬೆಲೆ ಅಡಿಗೆ 1,000 ರೂ. ಆಗಿದ್ದು, 50 ಸಾವಿರ ರೂ. ಬಂಡವಾಳ ಹೂಡಿದರೆ ದೀರ್ಘ‌ ಬಾಳಿಕೆ ಬರುತ್ತದೆ. ಬಳಿಕ ಸಣ್ಣ- ಪುಟ್ಟ ನಿರ್ವಹಣೆ ವೆಚ್ಚ ಮಾತ್ರ. 40 ವರ್ಷ ದಾಟಿದ ಮರವಾದರೆ 80 ಅಡಿ ಎತ್ತರ ಇರಬಹುದು.

ಈಗ ಗಿಡ್ಡ ತಳಿಗಳೇ ಹೆಚ್ಚಾಗಿರುವ ಕಾರಣ 50 ಅಡಿಯ ದೋಟಿ ಸಾಕಾಗುತ್ತದೆ. ಕನಿಷ್ಠ 6 ಅಡಿಗೆ ಮಡಚಿ ವಾಹನದಲ್ಲಿ ಕೊಂಡೊಯ್ಯ ಬಹುದು. ದೋಟಿಗಿಂತಲೂ ಎತ್ತರದ ಮರವಾಗಿದ್ದರೆ ಅಗತ್ಯಕ್ಕೆ ತಕ್ಕಷ್ಟು ಏಣಿಯನ್ನು ಬಳಸಿ ಕೊಂಡರಾಯಿತು.

ತರಬೇತಿ
ದೋಟಿಯನ್ನು ನೆಲದಿಂದಲೇ ಬಳಸ ಬಹುದಾದರೂ ಕೌಶಲ ಮತ್ತು ಸಮತೋಲನ ಕಾಪಾಡಿಕೊಳ್ಳುವ ಸಾಮರ್ಥ್ಯ ಅಗತ್ಯ. ಗೊನೆ ಕೊಯ್ಯು ವಾಗ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಕ್ಯಾಂಪ್ಕೋ, ಅಡಿಕೆ ಪತ್ರಿಕೆ, ಸಿಪಿಸಿಆರ್‌ಐ ಮತ್ತು ಅಖಿಲ ಭಾರತೀಯ ಅಡಿಕೆ ಬೆಳೆಗಾರರ ಸಂಘದ ಆಶ್ರಯದಲ್ಲಿ ವಿವಿಧೆಡೆ ಉಚಿತ ತರಬೇತಿ ನಡೆದಿದೆ. ಪ್ರಾಥಮಿಕ ಸಹಕಾರಿ ಸಂಘ, ಸಂಘ-ಸಂಸ್ಥೆಗಳು ಮತ್ತು ರೈತ ಉತ್ಪಾದಕ ಸಂಘಗಳೂ ತರಬೇತಿ ಹಮ್ಮಿಕೊಳ್ಳುತ್ತಿವೆ.

ಮುಖ್ಯಮಂತ್ರಿಗೆ
ಕ್ಯಾಂಪ್ಕೋ ಮನವಿ
ಕಾರ್ಬನ್‌ ಫೈಬರ್‌ ದೋಟಿಯ ಮೇಲಿನ ಕಸ್ಟಮ್ಸ್‌ ಸುಂಕ, ಜಿಎಸ್‌ಟಿ ಇಳಿಸುವ ಮೂಲಕ ದೋಟಿಯ ಬೆಲೆ ಕಡಿಮೆ ಮಾಡುವಲ್ಲಿ ಸಹಕಾರ ನೀಡುವಂತೆ ಕ್ಯಾಂಪ್ಕೋ ಸಂಸ್ಥೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ಬಹು ಹಗುರ ಈ ದೋಟಿ!
50 ಅಡಿ ಉದ್ದ ಫೈಬರ್‌ ದೋಟಿಯು ಕೇವಲ ನಾಲ್ಕೂವರೆ ಕೆಜಿ ತೂಕದ್ದಾಗಿದೆ. ಅನಂತರ 80 ಅಡಿ ಇದ್ದರೂ ಗರಿಷ್ಠ ತೂಕ ಐದೂವರೆ ಕೆಜಿ ಇರುತ್ತದೆ. ಆದ್ದರಿಂದ ಇದನ್ನು ಬಳಸುವಾಗ ಸಮತೋಲನ ಕಾಯ್ದುಕೊಳ್ಳುವುದು ಸುಲಭಸಾಧ್ಯ.

ಕಾರ್ಬನ್‌ ಫೈಬರ್‌ ದೋಟಿ ಬಳಕೆಯ ತರಬೇತಿಗೆ ಹೆಚ್ಚಿನ ಬೇಡಿಕೆ ಇದೆ. 5 ಕಡೆಗಳಲ್ಲಿ 3 ದಿನಗಳ ಕಾಲ ನಡೆದ ತರಬೇತಿಯಲ್ಲಿ 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ. ಹೊಸ ಅಡಿಕೆ ತಳಿಯ ಮರ ಹೆಚ್ಚು ಎತ್ತರ ಇಲ್ಲದ ಕಾರಣ ಈ ದೋಟಿ ಬಳಕೆಗೆ ಅನುಕೂಲವಾಗಿದೆ.
– ಡಾ| ಭವಿಷ್ಯ, ವಿಜಾನಿ, ಸಿಪಿಸಿಆರ್‌ಐ ವಿಟ್ಲ

ಟಾಪ್ ನ್ಯೂಸ್

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.