ಅಪ್ಪು ನಮನ; ಕಲಾವಿದರ ಕೈಚಳಕದಲ್ಲಿ ಮೂಡಿದ ಅಪ್ಪು
ಕಲಾವಿದರು 46 ಕೆ.ಜಿ ತೂಕದ ಬೆಣ್ಣೆಯಲ್ಲಿ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ನಿರ್ಮಿಸಿದ್ದಾರೆ.
Team Udayavani, Oct 29, 2022, 6:07 PM IST
ಬೆಂಗಳೂರು: ಪುನೀತ್ ರಾಜಕುಮಾರ್ ಸ್ಮರಣಾರ್ಥ ಅನೇಕ ಕಲಾವಿದರು ತಮ್ಮ ಕಲಾಸ್ಪರ್ಶದ ಮೂಲಕ ತಮ್ಮದೇ ಆದ ರೀತಿಯಲ್ಲಿ ಪುನೀತ್ ಅವರನ್ನು ಸ್ಮರಿಸುತ್ತಿದ್ದಾರೆ. ಕೊಬ್ಬರಿ, ತೆಂಗಿನಕಾಯಿ, ಕಲ್ಲಂಗಡಿ ಹಣ್ಣು, ತೈಲವರ್ಣ, ಬೆಣ್ಣೆ, ಅಕ್ಷರಮಾಲೆ, ಮೇಣದಬತ್ತಿ, ಸೀಮೆಸುಣ್ಣ ಹೀಗೆ ಅನೇಕ ವಸ್ತುಗಳಲ್ಲಿ ಕಲಾವಿದರು ಪುನೀತ್ ಅವರ ಭಾವಚಿತ್ರವನ್ನು ಅರಳಿಸಿದ್ದಾರೆ.
ಇದನ್ನೂ ಓದಿ:ವ್ಯಾನ್ನನ್ನೇ ಮನೆ ಮಾಡಿಕೊಂಡು ದೇಶ–ವಿದೇಶ ಸುತ್ತುವ ದಂಪತಿ:ಇವರದ್ದು ಅದ್ಭುತ ಅನುಭವದ ಯಾತ್ರೆ
ಕಲಾವಿದ ಸೇಂದಿಲ್ ಕುಮಾರ್ 46 ಕಲ್ಲಂಗಡಿ ಹಣ್ಣುಗಳಲ್ಲಿ ಪುನೀತ್ ರಾಜಕುಮಾರ್ ಅವರ ವಿವಿಧ ಭಂಗಿಯ ಭಾವಚಿತ್ರಗಳನ್ನು ಮೂಡಿಸಿದರೆ, ಬೆಂಗಳೂರಿನ ಚೆನ್ನೈಸ್ನ ಅಮೃತಕಲಾ ಸಂಸ್ಥೆಯ ಕಲಾವಿದರು 46 ಕೆ.ಜಿ ತೂಕದ ಬೆಣ್ಣೆಯಲ್ಲಿ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ನಿರ್ಮಿಸಿದ್ದಾರೆ.
ಇದಲ್ಲದೆ ಅನೇಕ ಕಲಾವಿದರು ತೈಲವರ್ಣದಲ್ಲಿ ಪುನೀತ್ ಭಾವಚಿತ್ರ ಮೂಡಿಸಿದರೆ, ಇನ್ನು ಕೆಲವು ಕಲಾವಿದರು ಮೇಣದಬತ್ತಿ, ಸೀಮೆಸುಣ್ಣದಲ್ಲೂ ಪುನೀತ್ ಅವರ ಪುತ್ಥಳಿ ನಿರ್ಮಿಸಿದ್ದಾರೆ. ಇದಲ್ಲದೆ ಪುನೀತ್ ಅವರ ಸ್ಮರಣೆಯ ಸಲುವಾಗಿ ವಿಶೇಷ ರುದ್ರಾಕ್ಷಿ ಮಾಲೆ, ಮಂಡಕ್ಕಿ ಹಾರ, ವಿಶೇಷ ವಿನ್ಯಾಸದ ಶಾಲುಗಳನ್ನೂ ಅಭಿಮಾನಿಗಳು ರಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್