ಬೆಂಗಳೂರು ಓಪನ್‌ ಟೆನಿಸ್‌: ಮೆಚ್ಚಿನ ಆಟಗಾರರಿಗೆ ಸೋಲಿನ ಆಘಾತ


Team Udayavani, Feb 9, 2022, 11:09 PM IST

ಬೆಂಗಳೂರು ಓಪನ್‌ ಟೆನಿಸ್‌: ಮೆಚ್ಚಿನ ಆಟಗಾರರಿಗೆ ಸೋಲಿನ ಆಘಾತ

ಬೆಂಗಳೂರು: ಬುಧವಾರ ಬೆಂಗಳೂರು ಓಪನ್‌ ಟೆನಿಸ್‌ನಲ್ಲಿ ದಾಖಲಾಗಿದ್ದು ಬಹುತೇಕ ಆಘಾತಕಾರಿ ಫ‌ಲಿತಾಂಶಗಳೇ!

ಮೆಚ್ಚಿನ ತಾರೆಯರೆಲ್ಲ ಸೋತು ಗಂಟುಮೂಟೆ ಕಟ್ಟಿದರು. ಮೊದಲು ತೈಪೆಯ ಯುವ ಆಟಗಾರ ಚುನ್‌ ಹ್ಸಿನ್‌ ಆಘಾತ ನೀಡಿದರು. ಅವರು ನಾಲ್ಕನೇ ಶ್ರೇಯಾಂಕಿತ, ಫ್ರಾನ್ಸ್‌ನ ಹ್ಯುಗೊ ಗ್ರೆನಿಯರ್‌ರನ್ನು 6-1, 6-4ರಿಂದ ಸೋಲಿಸಿದರು. ಈ ಪಂದ್ಯ ಕೇಂದ್ರ ಅಂಕಣದಲ್ಲಿ ನಡೆದಿತ್ತು. ಚುನ್‌ ಹ್ಸಿನ್‌ ಅವರು ಫ್ರೆಂಚ್‌ ಓಪನ್‌, ವಿಂಬಲ್ಡನ್‌ ಕಿರಿಯರ ಕಿರೀಟವನ್ನು 2018ರಲ್ಲಿ ಗೆದ್ದಿದ್ದರು!

ಇದಾದ ಕೆಲವೇ ನಿಮಿಷಗಳಲ್ಲಿ ಅರ್ಹತಾಸುತ್ತಿನ ಆಟಗಾರ, ಕ್ರೊವೇಷ್ಯಾದ ಬೊರ್ನಾ ಗೊಜೊ ಅವರು 7-5, 6-3ರಿಂದ ಆಸ್ಟ್ರೇಲಿಯದ 3ನೇ ಶ್ರೇಯಾಂಕಿತ ಅಲೆಕ್ಸಾಂಡರ್‌ ವುಕಿಕ್‌ರನ್ನು ಮಣಿಸಿದರು. ರೋಚಕತೆಯ ಮಟ್ಟಿಗೆ ಈ ಎಲ್ಲ ಪಂದ್ಯಗಳನ್ನು ಮೀರಿಸಿದ್ದು ಬೆಲ್ಜಿಯಂನ ಕಿಮ್ಮರ್‌ ಕೊಪ್ಪೆಜಾನ್ಸ್‌ ಮತ್ತು ಟರ್ಕಿಯ ಆಟ್ಲಗ್‌ ಸೆಲಿಕ್‌ಬಿಲೆಕ್‌ ನಡುವಿನ ಪಂದ್ಯ. ಇಬ್ಬರ ನಡುವಿನ ಹೋರಾಟ ದೀರ್ಘ‌ಕಾಲ ನಡೆಯಿತು.

ಇದನ್ನೂ ಓದಿ:ಪ್ರೊ ಕಬಡ್ಡಿ: ನಿಕಟ ಕಾದಾಟದಲ್ಲಿ ಗೆದ್ದ ಯುಪಿ ಯೋಧಾ

ಮೊದಲ ಸೆಟ್‌ನಲ್ಲಿ ಕಿಮ್ಮರ್‌ 7-6ರಿಂದ ಕೂಟದ ಐದನೇ ಶ್ರೇಯಾಂಕಿತ ಸೆಲಿಕ್‌ಬಿಲೆಕ್‌ರನ್ನು ಸೋಲಿಸಿದರು. ಇದು ಟೈಬ್ರೇಕರ್‌ಗೆ ಹೋಗಿ ಅಲ್ಲಿ 14-12ರಿಂದ ಕಿಮ್ಮರ್‌ ಗೆದ್ದರು. ಎರಡನೇ ಸೆಟ್‌ ನಲ್ಲಿ ಕಿಮ್ಮರ್‌ 6-3ರಿಂದ ಗೆದ್ದರು.

ಇನ್ನೊಂದು ಪಂದ್ಯದಲ್ಲಿ ಅರ್ಹತಾಸುತ್ತಿನಿಂದ ಬಂದಿದ್ದ ಬ್ರೆಝಿಲ್‌ನ ಗೇಬ್ರಿಯೆಲ್‌ ಡೀಕ್ಯಾಂಪ್ಸ್‌ 6-2, 5-7, 7-6ರಿಂದ ಇಟಲಿಯ ಗಿಯಾನಿ ಮೊರೊನಿಯನ್ನು ಮಣಿಸಿದರು. ಗುರುವಾರ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಅವರು ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಚೆಕ್‌ ಗಣರಾಜ್ಯದ ಜಿರಿ ವೆಸೆಲಿಯನ್ನು ಎದುರಿಸಲಿದ್ದಾರೆ.

ಟಾಪ್ ನ್ಯೂಸ್

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.