ಉಚಿತ ಧಾನ್ಯ, ಇಪಿಎಫ್ ಪ್ರಸ್ತಾವನೆಗಳಿಗೆ ಒಪ್ಪಿಗೆ
ಪ್ರಧಾನಿ ನೇತೃತ್ವದ ಸಂಪುಟ ಸಭೆ ನಿರ್ಧಾರ
Team Udayavani, Jul 9, 2020, 6:10 AM IST
ಹೊಸದಿಲ್ಲಿ: ಬಡವರಿಗೆ ಉಚಿತ ಧಾನ್ಯ ವಿತರಣೆ, ಕಂಪೆನಿಗಳಿಗೆ ಹಾಗೂ ಉದ್ಯೋಗಿಗಳಿಗೆ ಆಗಸ್ಟ್ ವರೆಗೆ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ನೆರವಿನ ವಿಸ್ತರಣೆ ಸೇರಿದಂತೆ ಕೇಂದ್ರ ಸರಕಾರ ಇತ್ತೀಚೆಗೆ ಕೈಗೊಂಡಿದ್ದ ಮಹತ್ವದ ನಿರ್ಧಾರಗಳಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಅನಂತರ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್, ಆಗಸ್ಟ್ ವರೆಗೆ ಸರಕಾರ ನೀಡುವ ಇಪಿಎಫ್ ಸಹಾಯವು 3.67 ಲಕ್ಷ ಕಂಪೆನಿಗಳಿಗೆ ಹಾಗೂ 72.22 ಲಕ್ಷ ಉದ್ಯೋಗಿಗಳಿಗೆ ನೆರವಾಗಲಿದೆ. ಉದ್ಯೋಗಿಗಳ ಟೇಕ್-ಹೋಂ ವೇತನವೂ ಹೆಚ್ಚಾಗಲಿದೆ. ಕಂಪೆನಿಗಳಿಗೆ ಇಪಿಎಫ್ ಮೊತ್ತವನ್ನು ಕೈಯಿಂದ ಹಾಕುವ ಹೊರೆ ಇರುವುದಿಲ್ಲ ಎಂದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಆವಾಸ್ ಯೋಜನೆ(ಪಿಎಂ ಜಿಕೆಎವೈ)ಯಡಿ ದೇಶದ ಕಡು ಬಡವ ರಿಗೆ ಈಗ ನೀಡಲಾಗಿರುವ ಉಚಿತ ಧಾನ್ಯ ಸೌಲಭ್ಯ ವನ್ನು ನವೆಂಬರ್ ವರೆಗೆ ವಿಸ್ತರಿ ಸುವ ನಿರ್ಧಾರಕ್ಕೂ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ನಗರಗಳಲ್ಲಿ ಬಡವರಿಗೆ ವಾಸ್ತವ್ಯ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಆವಾಸ್ ಯೋಜನೆಯಡಿ, ನಗರ ಪ್ರದೇಶಗಳಲ್ಲಿನ ಬಡವರಿಗೆ ಅಫೋರ್ಡಬಲ್ ರೆಂಟಲ್ ಹೌಸಿಂಗ್ ಕಾಂಪ್ಲೆಕ್ಸಸ್ (ಎಎಚ್ಆರ್ಸಿ) ಸೌಲಭ್ಯ ದಡಿ ಮನೆಗಳನ್ನು ಕೆಲವು ತಿಂಗಳ ಮಟ್ಟಿಗೆ ವಾಸ್ತವ್ಯಕ್ಕಾಗಿ ನೀಡಲು ನಿರ್ಧರಿಸಲಾಗಿತ್ತು. ಆ ಪ್ರಸ್ತಾ ವನೆಗೂ ಬುಧವಾರದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಜಾಬ್ಡೇಕರ್ ತಿಳಿಸಿದರು.
ಈ ಸೌಲಭ್ಯವನ್ನು ಜಾರಿಗೆ ತರಲು ಸರಕಾರದ ವತಿಯಿಂದ ನಿರ್ಮಾಣವಾಗಿರುವ ಮನೆಗಳನ್ನು ಎಎಚ್ಆರ್ಸಿ ಯೋಜನೆಗೆ ತಕ್ಕಂತೆ ಬದಲಾಯಿಸಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಈ ಸೌಲಭ್ಯದ ಮೊದಲ ಹಂತದಲ್ಲಿ 3 ಲಕ್ಷ ಫಲಾನುಭವಿಗಳಿಗೆ ಮನೆ ಗಳು ಸಿಗಲಿವೆ ಎಂದು ಹೇಳಿದರು.
ಪ್ರಮುಖ ನಿರ್ಧಾರಗಳು
-ಸರಕಾರಿ ಸ್ವಾಮ್ಯದ ಸಂಸ್ಥೆಗಳಾದ ಓರಿಯಂಟಲ್ ಇನ್ಶೂರೆನ್ಸ್, ನ್ಯಾಶನಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಹಾಗೂ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಸಂಸ್ಥೆಗಳಿಗೆ 12,450 ಕೋಟಿ ರೂ. ಸಹಾಯ.
-ಉಜ್ವಲ ಯೋಜನೆಯಡಿ ಬಡ ಮಹಿಳೆಯ ರಿಗೆ ಸೆಪ್ಟಂಬರ್ ವರೆಗೆ ಮೂರು ಅಡುಗೆ ಅನಿಲ ಸಿಲಿಂಡರ್ ಗಳನ್ನು ಪಡೆಯುವ ಅವಕಾಶ. ಇದ ರಿಂದ 7.4 ಕೋಟಿ ಮಹಿಳೆಯರಿಗೆ ಅನು ಕೂಲ. ಈ ಮೊದಲು ಈ ಸೌಲಭ್ಯ ಎಪ್ರಿಲ್- ಜೂನ್ ವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ವಿಸ್ತರಣೆ ಯಾಗಿರುವುದರಿಂದ 13,500 ಕೋಟಿ ರೂ. ನಿಗದಿ.
-ಕೃಷಿ ಕ್ಷೇತ್ರದ ಮೂಲಸೌಕರ್ಯಾಭಿವೃದ್ಧಿ ಹಾಗೂ ಸರಕು ಸಾಗಣೆ ನಿರ್ವಹಣೆ ಉತ್ತಮಗೊಳಿಸಲು 1 ಲಕ್ಷ ಕೋಟಿ
ರೂ. ಮೀಸಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು