Desi Swara: ಭಾರತದ ಖರ್ಜೂರ “ಹುಣಸೆಹಣ್ಣು”

ಚರಕಸಂಹಿತೆಯಲ್ಲಿ ಹುಣಸೆಯ ಔಷಧೀಯ ಗುಣಗಳ ಪ್ರಸ್ತಾವ

Team Udayavani, Feb 17, 2024, 12:20 PM IST

Desi Swara: ಭಾರತದ ಖರ್ಜೂರ “ಹುಣಸೆಹಣ್ಣು”

ಭಾರತದ ಖರ್ಜೂರ ಯಾವುದು ?- ಹುಣಸೆ ಹಣ್ಣು . ಹೌದು ಇದು ವಿಚಿತ್ರವಾದರೂ ನಿಜ. ನಾವು ಮಾತ್ರವಲ್ಲದೆ ಬಹುತೇಕ ಎಲ್ಲ ದೇಶಗಳಲ್ಲೂ Tamarind ಅಂತ ಕರೆಯುದಿಲ್ಲವೇ ? ಇದರ ಮೂಲ ಅರೇಬಿಕ್‌. ಅರಬ್ಬರು ಹುಣಸೆ ಹಣ್ಣನ್ನು ತರ್ಮಾ ಹಿಂದ್‌ ಎಂದು ಕರೆಯುತ್ತಾರೆ. ತರ್ಮ ಅಂದರೆ ಖರ್ಜೂರವೆಂದು ಅರ್ಥ.

ಅರಬ್‌ ವ್ಯಾಪಾರಿಗಳು ಭಾರತಕ್ಕೆ ಬಂದಾಗ ಬಹಳಷ್ಟು ಭಾಗಗಳಲ್ಲಿ ಕಂಡ ಈ ಹುಣಸೆ ಮರವನ್ನು “ತರ್ಮ-ಎ-ಹಿಂದ್‌” ಎಂದು ಕರೆದರು. ತರ್ಮ ಎಂದರೆ ಖರ್ಜೂರ. “ತರ್ಮ-ಎ-ಹಿಂದ್‌’ ಎಂದರೆ ಭಾರತದ ಖರ್ಜೂರ ಎಂದು. ಇದರ ಉಪಯೋಗವನ್ನು ಅರಿತ ಅರಬರು ಇತರ ಉತ್ಪನ್ನಗಳೊಂದಿಗೆ ಹುಣಸೆ ವಹಿವಾಟನ್ನೂ ಭಾರತದೊಂದಿಗೆ ಪ್ರಾರಂಭಿಸಿದರು. ಇಂದಿಗೂ ನಮ್ಮ ಭಾರತ ಹುಣಸೆ ರಫ್ತು ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದೆ.

ಪ್ರಾಚೀನ ಕಾಲದಿಂದಲೂ ನಮ್ಮ ದೇಶ ಬಹಳಷ್ಟು ವಿದೇಶಿಯರಿಗೆ ವ್ಯಾಪಾರದ ಕೇಂದ್ರಬಿಂದುವಾಗಿದೆ. ಸಾವಿರಾರು ವರ್ಷಗಳ ಹಿಂದಿನಿಂದಲೂ ಭಾರತದಲ್ಲಿ ಬೆಳೆಯುವ ಉತ್ಪನ್ನಗಳು ವಿದೇಶೀಯರಿಗೆ ಅತ್ಯಮೂಲ್ಯವೆನಿಸಿದೆ. ಅಂತಹ ಉತ್ಪನ್ನಗಳಲ್ಲಿ ಹುಣಸೆ ಹಣ್ಣೂ ಒಂದು.

ಕೆಲವರ ಪ್ರಕಾರ ಹುಣಸೆ ಇಥಿಯೋಪಿಯಾದಿಂದ ಕ್ರಿ.ಶ 100 – 600ರ ಸುಮಾರಿನಲ್ಲಿ ಭಾರತ ಸೇರಿದೆ. ಸಮುದ್ರ ಮಾರ್ಗವಾಗಿ ಭಾರತಕ್ಕೆ ಬರುತ್ತಿದ್ದ ಇಥಿಯೋಪಿಯನ್ನರು ಬಹಳಷ್ಟು ದಿನ ಹಾಳಾಗದೆ, ಬಾಯಾರಿಕೆ ನೀಗಿಸುವ ಹುಣಸೆಯನ್ನು ತಮ್ಮ ಜತೆ ತಂದಿರಬೇಕು. ಹೀಗೆ ಬಂದ ಹುಣಸೆ ಭಾರತದಲ್ಲಿ ಬೇರೂರಿರಬೇಕು ಎಂದು ಹೇಳುವುದುಂಟು.

ಆದರೆ ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಒಂದಾದಂತಹ ಬ್ರಹ್ಮ ಸಂಹಿತ ಹಾಗೂ ವಿಷ್ಣು ಧರ್ಮ ಸೂತ್ರಗಳಲ್ಲಿ ಹೇಳುವಂತೆ ಕ್ರಿ.ಪೂ. 1200 -200 ಸುಮಾರಿನಲ್ಲಿ ಭಾರತದೆಲ್ಲೆಡೆ ಹುಣಸೆ ಮರವನ್ನು ವ್ಯಾಪಕವಾಗಿ ಬೆಳೆಯುತ್ತಿದ್ದರು. ಅಷ್ಟೇ ಅಲ್ಲದೆ ಆಯುರ್ವೇದದ ಚರಕ ಸಂಹಿತದಲ್ಲೂ ಹುಣಸೆಯ ಔಷಧೀಯ ಗುಣಗಳ ಪ್ರಸ್ತಾವವಿದೆ. ಹಾಗಾಗಿ ಬಹುಗುಣಗಳನ್ನು ಹೊಂದಿರುವ ಹುಣಸೆ ಭಾರತ ಮೂಲವನ್ನೇ ಹೊಂದಿರಬೇಕು ಎಂದು ಅನಿಸುತ್ತದೆ. ವೈಜ್ಞಾನಿಕವಾಗಿ ಹುಣಸೆ ಮರವನ್ನು “ಟಮರಿಂಡಸ್‌ ಇಂಡಿಕಾ’ ಎಂದು ಕರೆಯಲಾಗುತ್ತದೆ.

ಪ್ರಕೃತಿಯನ್ನು ಸಂಪೂರ್ಣವಾಗಿ ತನ್ನ ಉಪಯೋಗಕ್ಕೆ ಬಳಸಿಕೊಳ್ಳುವ ಜಾಣ್ಮೆ, ಸ್ವಾರ್ಥವಿರುವ ಮನುಷ್ಯನ ಕೈಗೆ ಸಿಕ್ಕ ಹುಣಸೆ ಮರ ಹೊರತೇನಲ್ಲ. ಹುಣಸೆ ಮರದ ಪ್ರತಿಯೊಂದು ಭಾಗದಿಂದಲೂ ಮನುಷ್ಯನಿಗೆ ಬಹಳಷ್ಟು ಉಪಯೋಗವಿದೆ. ದಕ್ಷಿಣ ಭಾರತದ ಪ್ರತೀ ಅಡುಗೆಯಲ್ಲಿಯೂ ಹುಣಸೆಯ ಪಾತ್ರ ಬಲು ದೊಡ್ಡದು. ಮೀನು ಮಾಂಸವನ್ನು ಮೃದುವಾಗಿಸಲೂ ಹುಣಸೆ ರಸವನ್ನು ಹಚ್ಚಲಾಗುತ್ತದೆ. ಹುಣಸೆ ರಸದ ಪೇಯ ಭಾರತದಲ್ಲಿ ಅಷ್ಟೇ ಅಲ್ಲದೆ ಚೀನ, ಥೈಲ್ಯಾಂಡ್‌ಗಳಲ್ಲೂ ಪ್ರಸಿದ್ಧ. ಹುಣಸೆಯ ಹೂವಿನ ಮಕರಂದದಿಂದ ಆದಂತಹ ಜೇನು ಬಹಳ ರುಚಿ ಅಲ್ಲದೆ ಬಹಳ ದುಬಾರಿ.

ಹುಣಸೆಗೆ ಹುಳಿಯನ್ನು ಕೊಡುವ ಟಾರ್ಟಾರಿಕ್‌ ಆಸಿಡ್‌ ಹಾಗೂ ವಿಟಮಿನ್‌-ಸಿ ಚರ್ಮದ ಕಾಂತಿಯನ್ನು ಹೆಚ್ಚಿಸಿದರೆ ಉಪ್ಪಿನಲ್ಲಿ ನೆನೆಸಿದ ಸುಟ್ಟ ಹುಣಸೆ ಬೀಜ ಗಂಟು ನೋವಿಗೆ ರಾಮಬಾಣ. ಹುಣಸೆ ಬೀಜದ ಎಣ್ಣೆ ಹಲ್ಲಿನ ಆರೋಗ್ಯವನ್ನು ಕಾಪಾಡುವುದರ ಜತೆಗೆ ಜೀರ್ಣಕ್ರಿಯೆಗೂ ಸಹಕಾರಿ. ಇದರ ತೊಗಟೆ ಗಾಯಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುತ್ತದೆ. ಅಲ್ಲದೆ ಭಾರತದ ಸೆಣಬು ಹಾಗೂ ಜವಳಿ ಉದ್ಯಮಗಳಲ್ಲೂ ಹುಣಸೆ ಬೀಜದ ಪಿಷ್ಟವನ್ನು ಉಪಯೋಗಿಸಲಾಗುತ್ತದೆ. ಹಿತ್ತಾಳೆ ಪಾತ್ರೆಗಳನ್ನು ಉಪಯೋಗಿಸುತ್ತಿದ್ದ ಕಾಲದಲ್ಲಿ ಪಾತ್ರೆಯನ್ನು ತೊಳೆಯಲು ಹುಣಸೆಯನ್ನೇ ಉಪಯೋಗಿಸುತ್ತಿದ್ದರು.

ಗಟ್ಟಿಮುಟ್ಟಾದ ಈ ಮರವನ್ನು ವಿವಿಧ ಉಪಕರಣಗಳ ತಯಾರಿಯಲ್ಲಿ ಹಾಗೂ ಒನಕೆ, ಚರಕಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಉಷ್ಣಜನಕ ಸಾಮರ್ಥ್ಯವಿರುವುದರಿಂದ ಉರುವಲಾಗಿಯೂ ಉಪಯೋಗ.

ಅಷ್ಟೇ ಅಲ್ಲದೆ ಹುಣಸೆಯ ಮಹತ್ವವನ್ನು ಅರಿತಿದ್ದ ಶೇರ್‌ ಶಾಹ್‌ ಸೂರಿ ಕ್ರಿ.ಶ 1540 -1545ರ ಸುಮಾರಿನಲ್ಲಿ ನಿರ್ಮಾಣಗೊಂಡ ಗ್ರಾಂಡ್‌ ಟ್ರಂಕ್‌ ರೋಡ್‌ನ‌ ಇಕ್ಕೆಲಗಳಲ್ಲಿ ಹುಣಸೆ ಹಾಗೂ ಮಾವಿನಮರಗಳನ್ನು ನೆಟ್ಟಿದ್ದ ಎಂಬ ದಾಖಲೆಗಳಿವೆ. ಪೇಷಾವರದಿಂದ ಕಲ್ಕತ್ತದವರೆಗೆ ನಡೆದು ಹೋಗುತ್ತಿದ್ದ ವ್ಯಾಪಾರಸ್ಥರ ಬಾಯಾರಿಕೆ ನೀಗಿಸಲು ಈ ಮರಗಳನ್ನು ನೆಡಲಾಗಿತ್ತು ಎಂಬ ಮಾತಿದೆ. ಭಾರತ ಮೂಲದ ಭಾರತದ ಖರ್ಜೂರದ ಉಪಯೋಗ ತಿಳಿದ ಮೇಲಾದರೂ ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ.

*ನಾನಕ್‌ ಶೆಟ್ಟಿ ಕಿನ್ನಿಗೋಳಿ ಮಸ್ಕತ್‌

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.