Mukesh Ambani ನಿವಾಸದಲ್ಲಿ ಗಣೇಶೋತ್ಸವ ಸಂಭ್ರಮ; ತಾರೆಯರ ದಂಡು ಭಾಗಿ: ಫೋಟೊ ವೈರಲ್
Team Udayavani, Sep 20, 2023, 3:59 PM IST
ಮುಂಬೈ: ಪ್ರತಿವರ್ಷದಂತೆ ಈ ವರ್ಷವೂ ಉದ್ಯಮಿ ಮುಕೇಶ್ ಅಂಬಾನಿಯ ಮುಂಬೈನ ಆಂಟಿಲಿಯಾ ನಿವಾಸದಲ್ಲಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದು, ನೀತಾ ಅಂಬಾನಿ ಕುಟುಂಬದ ಸದಸ್ಯರು ಸೇರಿದಂತೆ ಬಾಲಿವುಡ್ ನ ಐಶ್ವರ್ಯಾ ರೈ ಬಚ್ಚನ್, ಕರಣ್ ಜೋಹರ್, ಒಳಗೊಂಡಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಇದನ್ನೂ ಓದಿ:POCSO; ಮಲಮಗಳ ಕುರಿತು ಅಶ್ಲೀಲ ಪೋಸ್ಟ್: ಮಹಿಳೆ ವಿರುದ್ಧ ಪ್ರಕರಣ ದಾಖಲು
ಬುಧವಾರ (ಸೆಪ್ಟೆಂಬರ್ 20) ಬಾಲಿವುಡ್ ನ ಜೂಹಿ ಚಾವ್ಲಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದ್ದು, ಅದರಲ್ಲಿಐಶ್ವರ್ಯಾ ರೈ, ಆರಾಧ್ಯಾ, ಕರಣ್ ಜೋಹರ್, ಅಮೀರ್ ಖಾನ್ ಮಕ್ಕಳಾದ ಜುನೈದ್, ಐರಾ, ಅರ್ಜುನ್ ಕಪೂರ್, ಸುನೀಲ್ ಶೆಟ್ಟಿ, ನೀತಾ ಅಂಬಾನಿ, ಜಾಕಿ ಶ್ರಾಫ್, ಪ್ರಸೂನ್ ಜೋಶಿ, ವಿಧು ವಿನೋದ್ ಚೋಪ್ರಾ ಮತ್ತು ಮನೀಶ್ ಮಲ್ಹೋತ್ರಾ ಅಂಬಾನಿ ನಿವಾಸದ ಗಣೇಶೋತ್ಸವದಲ್ಲಿ ಭಾಗಿಯಾಗಿದ್ದರು.
ಜೂಹಿ ಚಾವ್ಲಾ ಶೇರ್ ಮಾಡಿರುವ ಮತ್ತೊಂದು ಪೋಸ್ಟ್ ನಲ್ಲಿ, ಕಿಯಾರಾ ಅಡ್ವಾಣಿ, ಸಿದ್ಧಾರ್ಥ ಮಲ್ಹೋತ್ರಾ, ರಾಧಿಕಾ ಮರ್ಚೆಂಟ್, ಅನಿಲ್ ಕಪೂರ್, ರವೀನಾ ಟಂಡನ್, ಮಾಧುರಿ ದೀಕ್ಷಿತ್, ಭಾಗ್ಯಶ್ರೀ, ಫರಾ ಖಾನ್ , ಶಾರುಖ್ ಖಾನ್, ಗೌರಿ, ಸುಹಾನಾ, ಅಬ್ ರಾಮ್, ಸಲ್ಮಾನ್ ಖಾನ್, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಅಲಿಯಾ ಭಟ್, ಅಯಾನ್ ಮುಖರ್ಜಿ, ನಯನತಾರಾ, ವಿಘ್ನೇಶ್ ಶಿವನ್, ನವ್ಯಾ ನವೇಲಿ ನಂದಾ ಸೇರಿದಂತೆ ಗಣ್ಯಾತೀಗಣ್ಯರು ಅಂಬಾನಿ ನಿವಾಸದ ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದರು.
ಗಣೇಶೋತ್ಸವದಲ್ಲಿ ಸೆಲೆಬ್ರಿಟಿಗಳು ಸಾಂಪ್ರದಾಯಿಕ ಬಟ್ಟೆ ಧರಿಸಿದ್ದು, ಅಂಬಾನಿ ನಿವಾಸದಲ್ಲಿ ನಡೆದ ಗಣೇಶೋತ್ಸವ ಭಾವೈಕ್ಯತೆಗೆ ಸಾಕ್ಷಿಯಾಗಿತ್ತು. ವಿಶೇಷ ಪೂಜೆಯ ನಂತರ ಔತಣಕೂಟ ಏರ್ಪಡಿಸಲಾಗಿತ್ತು. ಇದೀಗ ಅಂಬಾನಿ ನಿವಾಸದಲ್ಲಿನ ಗಣೇಶೋತ್ಸವದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ