Bali; ಬಾಲಿಗೆ ಪ್ರವಾಸ ಹೋಗಬೇಕೆಂಬ ಇಚ್ಛೆ ಇದೆಯೇ? IRCTC ವಿಶೇಷ ಟೂರ್‌ ಪ್ಯಾಕೇಜ್‌ ಘೋಷಣೆ

ಆಗಸ್ಟ್‌ 8ರಂದು ಪ್ರವಾಸಿಗರು ಲಕ್ನೋ ವಿಮಾನ ನಿಲ್ದಾಣದಿಂದ ಬಾಲಿಗೆ ಹೊರಡುವುದು

Team Udayavani, Jul 6, 2023, 3:59 PM IST

Bali; ಬಾಲಿಗೆ ಪ್ರವಾಸ ಹೋಗಬೇಕೆಂಬ ಇಚ್ಛೆ ಇದೆಯೇ? IRCTC ವಿಶೇಷ ಟೂರ್‌ ಪ್ಯಾಕೇಜ್‌ ಘೋಷಣೆ

ನವದೆಹಲಿ: ನೀವೇನಾದರು ರಜೆಯಲ್ಲಿ ಇಂಡೋನೇಷ್ಯಾದ “ಬಾಲಿ”ಗೆ ಭೇಟಿ ನೀಡಬೇಕೆಂಬ ಯೋಚನೆಯಲ್ಲಿದ್ದೀರಾ? ಒಂದು ವೇಳೆ ಹೌದು ಎಂದಾದರೆ ಭಾರತೀಯ ರೈಲ್ವೆ ಕೆಟರಿಂಗ್‌ And ಟೂರಿಸಂ ಕಾರ್ಪೋರೇಶನ್‌ (IRCTC) ಯೋಜನೆ ಪ್ರವಾಸಿಗರಿಗೆ ಲಾಭ ತಂದುಕೊಡಲಿದೆ.

ಇದನ್ನೂ ಓದಿ:Australia ಭಗ್ನ ಪ್ರೇಮಿಯಿಂದ ಭಾರತದ ನರ್ಸಿಂಗ್ ವಿದ್ಯಾರ್ಥಿನಿಯ ಸಜೀವ ಸಮಾಧಿ

ಇಂಡೋನೇಷ್ಯಾದ ಬಾಲಿಯ 6ದಿನಗಳ ಪ್ರವಾಸಕ್ಕಾಗಿ ಆಸಕ್ತ ಪ್ರಯಾಣಿಕರು ಐಆರ್‌ ಸಿಟಿಸಿ ಅಧಿಕೃತ ವೆಬ್‌ ಸೈಟ್‌ ನಲ್ಲಿ ಸೀಟನ್ನು ಬುಕ್‌ ಮಾಡಬಹುದಾಗಿದ್ದು, ಈ ಪ್ರವಾಸ ಆಗಸ್ಟ್‌ 11ರಿಂದ ಪ್ರಾರಂಭಗೊಳ್ಳಲಿದೆ.

IRCTC ಬಾಲಿ ಹಾಲಿಡೇ ಪ್ಯಾಕೇಜ್‌ ನಲ್ಲೇನಿದೆ?

ಬಾಲಿಯ ಸುಂದರ ತಾಣಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಈ ಯೋಜನೆಯ ಆಫರ್ ನೀಡಲಾಗಿದೆ ಎಂದು ಐಆರ್‌ ಸಿಟಿಸಿ ಟ್ವೀಟ್‌ ಮಾಡಿದೆ. ರೈಲ್ವೆ ವೆಬ್‌ ಸೈಟ್‌ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಅಂತಾರಾಷ್ಟ್ರೀಯ ರಜೆಯ ಪ್ಯಾಕೇಜ್‌ ನಲ್ಲಿ ಪ್ರವಾಸಿಗರಿಗೆ ಬಾಲಿಯ ಉಬುದ್‌ ಗ್ರಾಮ, ಕಿಂತಾಮಣಿ ಟೂರ್‌, ಹಡಗು ಪ್ರಯಾಣ, ಟಾನಹ್‌ ಲೊಟ್‌ ಟೆಂಪಲ್‌ ಹಾಊ ಸಮೀಪದ ಬೀಚ್‌ ಗಳನ್ನು ಪರಿಚಯಿಸಲಾಗುವುದು ಎಂದು ತಿಳಿಸಿದೆ.

ಬಾಲಿ ಹಾಲಿಡೇ ಪ್ಯಾಕೇಜ್‌ ಮೊತ್ತ ಎಷ್ಟು?

ಆಸಕ್ತ ಪ್ರವಾಸಿಗರು ಬಾಲಿಯ 5 ರಾತ್ರಿ ಮತ್ತು 6 ದಿನಗಳ ಪ್ರವಾಸದ ಪ್ಯಾಕೇಜ್‌ ಮೊತ್ತ ಒಬ್ಬರಿಗೆ 1,05,900 ರೂಪಾಯಿ. ಐಆರ್‌ ಸಿಟಿಸಿ ಆಯ್ದ ಪ್ರಯಾಣಿಕರಿಗೆ ಕೆಲವು ಆಫರ್‌ ಗಳ ಕೊಡುಗೆಗಳನ್ನು ಸಹ ನೀಡಲಿದೆ ಎಂದು ತಿಳಿಸಿದೆ. ಈ ಪ್ಯಾಕೇಜ್‌ ನಲ್ಲಿ ಐಶಾರಾಮಿ ಕ್ಲಾಸ್‌ ವಿಮಾನ ಪ್ರಯಾಣದ ಟಿಕೆಟ್ಸ್‌ ಕೂಡಾ ಸೇರಿದೆ. ಏರ್‌ ಏಷಿಯಾ ವಿಮಾನ ಲಕ್ನೋದ ಚೌಧರಿ ಚರಣ್‌ ಸಿಂಗ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾಲಿಗೆ ತೆರಳಲಿದೆ.

ಮೊದಲ ದಿನ: ಆಗಸ್ಟ್‌ 8ರಂದು ಪ್ರವಾಸಿಗರು ಲಕ್ನೋ ವಿಮಾನ ನಿಲ್ದಾಣದಿಂದ ಬಾಲಿಗೆ ಹೊರಡುವುದು.

ಎರಡನೇ ದಿನ: ಇಂಡೋನೇಷ್ಯಾ ತಲುಪಿದ ನಂತರ ನಿಗದಿಪಡಿಸಿದ ಹೋಟೆಲ್‌ ಗಳಿಗೆ ತೆರಳುವುದು. ನಂತರ ಸಾಂಪ್ರದಾಯಿಕ ಕೆಕಾಕ್‌ ನೃತ್ಯ ಪ್ರದರ್ಶನ ವೀಕ್ಷಿಸುವುದು.

ಮೂರನೇ ದಿನ: ಪ್ರವಾಸಿ ಗೈಡ್‌ ಜೊತೆ ರಾಯಲ್‌ ಅರಮನೆ, ಕಿಂತಾಮಣಿ ಹಾಗೂ ಉಬುದ್‌ ಕಾಫಿ ತೋಟಕ್ಕೆ ಭೇಟಿ ನೀಡುವುದು.

ನಾಲ್ಕನೇ ದಿನ: ಬಾಲಿ ಸಫಾರಿಯೊಂದಿಗೆ ದಿನದ ಆರಂಭ. ಮರೈನ್‌ ಪಾರ್ಕ್‌ ಗೆ ಭೇಟಿ..ಸೂರ್ಯಾಸ್ತ ವೀಕ್ಷಣೆಯೊಂದಿಗೆ ಹಡಗಿನಲ್ಲಿ ರಾತ್ರಿ ಊಟೋಪಚಾರ.

ಐದನೇ ದಿನ: ಟರ್ಟಲ್‌ ಐಲ್ಯಾಂಡ್‌ ಗೆ ಪ್ರವಾಸಿಗರ ಭೇಟಿ, ಸಂಜೆ ಟನಾಹ್‌ ಲೊಟ್‌ ವೀಕ್ಷಣೆ.

ಆರನೇ ದಿನ: ಹೋಟೆಲ್‌ ಗಳಿಂದ ಚೆಕ್‌ ಔಟ್…ನಂತರ ಬಾಲಿಯಿಂದ ಲಕ್ನೋ ವಿಮಾನ ನಿಲ್ದಾಣಕ್ಕೆ ಪ್ರಯಾಣ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.