ನಿಮ್ಮ ಪಾನ್ – ಆಧಾರ್ ಲಿಂಕ್ ಮಾಡಲು ಡಿ. 31 ಕೊನೆ ದಿನ
ಹೇಗೆ ಮಾಡುವುದು ಇಲ್ಲಿದೆ ವಿವರ
Team Udayavani, Sep 28, 2019, 4:29 PM IST
ಬೆಂಗಳೂರು: ನಿಮ್ಮ ಆಧಾರ್ ಕಾರ್ಡ್ನೊಂದಿಗೆ ಪಾನ್ ಲಿಂಕ್ ಮಾಡಲು ಡಿಸೆಂಬರ್ 31 ಕಡೆಯ ದಿನವಾಗಿದೆ. ಡಿ.31ರ ಒಳಗೆ ಕಡೆಯ ದಿನ ನೀವು ಆಧಾರ್ಲಿಂಕ್ ಮಾಡಿಸದೇ ಇದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರೀಯಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಾನ್ ನಿಷ್ಕ್ರೀಯಗೊಂಡರೆ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗಬಹುದಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾದರೆ ಆಧಾರ್ ಸಂಖ್ಯೆ ಅನಿವಾರ್ಯವಾಗಿತ್ತು. ಈ ವೇಳೆ ನಿಮ್ಮಲ್ಲಿ ಆಧಾರ್ ಕಾರ್ಡ್ ಇಲ್ಲದೇ ಇದ್ದರೆ ಅಥವ ನಿಮ್ಮ ಆಧಾರ್ ಪಾನ್ ಕಾರ್ಡ್ಗೆ ಲಿಂಕ್ ಆಗದೇ ಇದ್ದರೆ ನೀವು ತೆರಿಗೆ ಲಿಟರ್ನ್ಸ್ ಸಲ್ಲಿಸಲು ಬರುವುದಿಲ್ಲ.
ಲಿಂಕ್ ಮಾಡುವ ಬಗೆಯನ್ನು ಈ ಕೆಳಗೆ ಹಂತ ಹಂತವಾಗಿ ನೀಡಲಾಗಿದೆ.
ಹಂತ 1: https://www.incometaxindiaefiling.gov.in/home
ಹಂತ 2: ವೆಬ್ಸೈಟ್ನ ನಿಮ್ಮ ಎಡಬದಿಯ ಮೆಲೆ ಕಾಣಿಸಿಕೊಳ್ಳುವ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಅಲ್ಲಿ ಸೂಚಿಸಿದಂತೆ ನಿಮ್ಮ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
ಹಂತ 4: ನಿಮ್ಮ ಆಧಾರ್ ಕಾರ್ಡ್ನಲ್ಲಿ ಮುದ್ರಣವಾಗಿರುವ ಹೆಸರನ್ನು ಅಲ್ಲಿ ನಮೂದಿಸಬೇಕು
ಹಂತ 5: ಕೆಲವು ಆಧಾರ್ ಕಾರ್ಡ್ಗಳಲ್ಲಿ ಹುಟ್ಟಿದ ವರ್ಷ ಮಾತ್ರ ದಾಖಲಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಅಲ್ಲಿ ನೀಡಲಾಗಿರುವ ‘I have the only year of birth in Aadhar card ಬಾಕ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 6: ನೀವು ಮೇಲೆ ನೀಡಲಾದ ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ಮತ್ತೊಮ್ಮೆ ಪರೀಕ್ಷಿಸಿ, ಎಲ್ಲವೂ ಸರಿಯಾಗಿದ್ದರೆ “I agree to validate my Aadhar details with UIDAI’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 7: ಬಳಿಕ ಕೆಳಗೆ ಬಾಕ್ಸ್ನಲ್ಲಿ ಕಾಣಿಸಿಕೊಳ್ಳುವ ಕೋಡ್ (ಸರಿಯಾಗಿ ಗಮನಿಸಿ ಇದು ಹಲವು ಕ್ಯಾಪ್ಸ್ ಮತ್ತು ಸ್ಮಾಲ್ ಲೆಟರ್ಗಳನ್ನು ಅಂಕಿಯೊಂದಿಗೆ ಒಳಗೊಂಡಿರುತ್ತದೆ) ಅನ್ನು ನಮೂದು ಮಾಡಿ.
ಹಂತ 8: ಬಳಿಕ ಕೆಳಗೆ ಕಾಣಿಸಿಕೊಳ್ಳುವ ಲಿಂಕ್ ಆಧಾರ್ ಮತ್ತು ಕ್ಯಾನ್ಸಲ್ ಎಂಬ ಬಟನ್ಗಳನ್ನು ಗಮನಿಸಿಸಿ, ಅಲ್ಲಿ ನೀವು ಲಿಂಕ್ ಆಧಾರ್ ಬಟನ್ ಮೆಲೆ ಕ್ಲಿಕ್ ಮಾಡಬೇಕು.
ಹಂತ: 9 ಕಡೆಯದಾಗಿ ನಿಮ್ಮಿಂದ ಮಾಹಿತಿಯನ್ನು ಪಡೆದುಕೊಂಡ ವೆಬ್ಸೈಟ್ ಎಲ್ಲವೂ ಸರಿಯಾಗಿದೆ ಎಂದಾದ ಬಳಿಕ ‘Your Pan is already linked ಎಂಬ ಸಂದೇಶವನ್ನು ತೋರಿಸುತ್ತದೆ.
ಮೊಬೈಲ್ನಲ್ಲೇ ಲಿಂಕ್ ಮಾಡುವುದು ಹೇಗೆ?
ನಿಮ್ಮ ಮೊಬೈಲ್ನಿಂದ ಎಸ್ಎಂಎಸ್ ಮೂಲಕ ಪಾನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ.
ಉದಾ: ನಿಮ್ಮ ಆಧಾರ್ ಸಂಖ್ಯೆ 111122224444 ಎಂದೂ, ಪಾನ್ ಕಾರ್ಡ್ ನಂಬರ್ AAAPA9999Q ಎಂದು ಇದೆ ಎಂದುಕೊಳ್ಳೋಣ. ನಿಮ್ಮ ಪೋನ್ನಿಂದ UIDPAN 111122224444 AAAPA9999Q ಎಂದು 567678 ಅಥವಾ 56161 ಸಂಖ್ಯೆಗೆ ಮೆಸೇಜ್ ಮಾಡಬಹುದಾಗಿದೆ. ಇದಕ್ಕೆ ನಿಮ್ಮ ನೆಟ್ವರ್ಕ್ ಪೂರೈಕೆದಾರರ ಮೆಸೇಜ್ ದರ ಅನ್ವಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ