ಅಂತ್ಯಕ್ರಿಯೆ ನೆರವೇರಿಸಿದ ವಾರದ ಬಳಿಕ ಬದುಕಿ ಬಂದ ವ್ಯಕ್ತಿ
Team Udayavani, Dec 22, 2020, 1:16 PM IST
ಕಲಘಟಗಿ: ತಾಲೂಕಿನ ಗಂಭ್ಯಾಪೂರ ಗ್ರಾಮದಲ್ಲಿ 7 ದಿನಗಳ ಹಿಂದೆ ಅಪರಿಚಿತ ಶವ ತಮ್ಮ ಕುಟುಂಬ ಸದಸ್ಯ ಬಸಪ್ಪ ತಮ್ಮಣ್ಣ ಕಾಳಿ(69) ಅವನದ್ದೇ ಎಂದು ದಫನ್ ಮಾಡಿದ್ದು, ಕಳೆದ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಅದೇ ವ್ಯಕ್ತಿ ಸೋಮವಾರ ಪ್ರತ್ಯಕ್ಷನಾಗಿ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರನ್ನು ಆಶ್ಚರ್ಯ ಚಕಿತಗೊಳಿಸಿದ ಘಟನೆ ಜರುಗಿದೆ.
ಡಿ. 14ರಂದು ಹುಬ್ಬಳ್ಳಿ ತಾರಿಹಾಳ ರಸ್ತೆಯ ಪಕ್ಕದಲ್ಲಿ ಒಂದು ಅಪರಿಚಿತ ಶವ ಕಂಡು ಬಂದಿತ್ತು. ಗಂಭ್ಯಾಪೂರ ಗ್ರಾಮದ ಓರ್ವ ವ್ಯಕ್ತಿ ಕಾಲ್ನಡಿಗೆಯಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಆ ಶವ ಕಂಡು ತಮ್ಮ ಊರಿನ ಬಸಪ್ಪ ಕಾಳಿಯವರದ್ದೇ ಇರಬೇಕೆಂದು ಸಂಶಯಪಟ್ಟು ಊರಿಗೆ ಸುದ್ದಿ ತಲುಪಿಸಿದ್ದ. ಗ್ರಾಮಸ್ಥರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆಯೇ ಹುಬ್ಬಳ್ಳಿ
ಗ್ರಾಮೀಣ ಪೊಲೀಸರು ಮುಂದಿನ ಕ್ರಮ ಜರುಗಿಸಲು ಆ ಶವವನ್ನು ಅಲ್ಲಿಂದ ಸಾಗ ಹಾಕಿದ್ದರು.
ಇದನ್ನೂ ಓದಿ:ವಿಜಯಪುರದಲ್ಲಿ ಭೂಕಂಪದ ಅನುಭವ: ರಾತ್ರಿ ವೇಳೆ ಎರಡು ಬಾರಿ ಕಂಪಿಸಿದ ಭೂಮಿ
ಡಿ. 15ರಂದು ಗ್ರಾಮಸ್ಥರು ಕೆಲ ಚಹರೆ ಪಟ್ಟಿ ಗುರುತಿಸಿ ಆ ಅಪರಿಚಿತ ಶವ ಬಸಪ್ಪ ಕಾಳಿಯವರದ್ದೇ ಎಂದು ಸಂಶಯಗೊಂಡು ಪೊಲೀಸರಿಂದ ಆ ಶವ ಪಡೆದು ಗ್ರಾಮಕ್ಕೆ ತಂದು ಬಸಪ್ಪನ ಕುಟುಂಬದವರು ದಫನ್ ಕೂಡಾ ಮಾಡಿದ್ದರು. ಈಗ ಅದೇ ವ್ಯಕ್ತಿ ಕಣ್ಮುಂದೆ ಬಂದಿದ್ದು, ಕುಟುಂಬದವರಿಗೆ ಒಂದೆಡೆ ಸಂತೋಷ, ಇನ್ನೊಂದೆಡೆ ಪೊಲೀಸರಿಂದ ತಮಗೆ ತೊಂದರೆಯಾಗುವುದೇ ಎಂಬ ಚಿಂತೆಯೂ ಕಾಡುತ್ತಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ