ಕೊಲ್ಲೂರು ದೇಗುಲಕ್ಕೆ ಗೋವಾ ರಾಜ್ಯಪಾಲ ಭೇಟಿ
Team Udayavani, Apr 17, 2023, 7:30 AM IST
ಕೊಲ್ಲೂರು: ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೆ ಸಕುಟುಂಬಿಕರಾಗಿ ಎ. 16ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ, ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದೇಗುಲದ ಕಾರ್ಯನಿರ್ವಹಣಾಧಿ ಕಾರಿ ರವಿ ಕೊಟಾರಗಸ್ತಿ, ಉಪಕಾರ್ಯನಿರ್ವಹಣಾ ಧಿಕಾರಿ ಗೋವಿಂದ ನಾಯ್ಕ, ಬೈಂದೂರು ತಹಶೀಲ್ದಾರ ಶ್ರೀಕಾಂತ್ ಹೆಗ್ಡೆ, ಸಮಿತಿ ಸದಸ್ಯರಾದ ಸಂಧ್ಯಾ ರಮೇಶ, ರತ್ನಾ ಆರ್. ಕುಂದರ್, ಅರ್ಚಕರಾದ ಡಾ| ಕೆ.ಎನ್. ನರಸಿಂಹ ಅಡಿಗ, ಡಾ| ರಾಮಚಂದ್ರ ಅಡಿಗ, ಸಿಬಂದಿಗಳಾದ ಸಂತೋಷ ಕೊಠಾರಿ, ಗಣೇಶ ಉಡುಪ, ಸಂತೋಷ ಕುಮಾರ್ ಶೆಟ್ಟಿ ರಾಜ್ಯಪಾಲರನ್ನು ಗೌರವಿಸಿದರು.
ಮೊಮ್ಮಗಳಿಗೆ ಅಕ್ಷರಾಭ್ಯಾಸ
ಸರಸ್ವತಿ ಮಂಟಪದಲ್ಲಿ ಮೊಮ್ಮಗಳ ಅಕ್ಷರಾಭ್ಯಾಸದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಪಾಲರು, ತಮ್ಮ ಇಡೀ ಕುಟುಂಬ ಮೂಕಾಂಬಿಕೆಯ ಭಕ್ತರಾಗಿದ್ದು, ವರುಷಕ್ಕೊಮ್ಮೆ ಕ್ಷೇತ್ರ ಸಂದರ್ಶನದ ಪರಿಪಾಠ ಹೊಂದಿದ್ದೇವೆ. ಶಂಕರಾಚಾರ್ಯರ ತಪೋಭೂಮಿಯಾಗಿರುವ ಕೊಲ್ಲೂರು ಸಿದ್ಧಿ ಕ್ಷೇತ್ರವಾಗಿದೆ. ಭಕ್ತರ ಸಕಲ ಸಂಕಷ್ಟಗಳಿಗೆ ಶ್ರೀ ದೇವಿ ಶೀಘ್ರ ಪರಿಹಾರ ಒದಗಿಸುವಳು ಎಂದರು.