ಮಲ್ಯ ಹಸ್ತಾಂತರ ಪ್ರಕ್ರಿಯೆ ಶೀಘ್ರ
Team Udayavani, May 15, 2020, 6:00 AM IST
ಲಂಡನ್: ಮದ್ಯದ ದೊರೆ ವಿಜಯ ಮಲ್ಯನಿಗೆ ಮತ್ತೂಮ್ಮೆ ಹಿನ್ನಡೆಯಾಗಿದೆ. ಭಾರತಕ್ಕೆ ಹಸ್ತಾಂ ತರಿಸುವುದರ ವಿರುದ್ಧ ಬ್ರಿಟನ್ನ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅಲ್ಲಿನ ಹೈಕೋರ್ಟ್ ಆತನಿಗೆ ಅವಕಾಶ ನೀಡಿಲ್ಲ.
ಇದರಿಂದಾಗಿ ಭಾರತಕ್ಕೆ ಹಸ್ತಾಂ ತರಿಸುವುದರ ವಿರುದ್ಧ ಅವನಿಗಿದ್ದ ಎಲ್ಲ ಕಾನೂನು ಅವಕಾಶ ಮುಗಿ ದಂತಾಗಿವೆ. ಈಗ ಮರು ಪ್ರಮಾಣೀ ಕರಣಕ್ಕಾಗಿ ಈ ತೀರ್ಪನ್ನು ಹಿಂದಕ್ಕೆ ಕಳುಹಿಸಲಾಗುತ್ತಿದ್ದು, ಮುಂದಿನ 28 ದಿನಗಳಲ್ಲಿ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಪಾವತಿಸುವೆ, ಬಿಟ್ಟು ಬಿಡಿ
ಈ ನಡುವೆ “ಸಾಲದ ಬಾಕಿ ಹಣದ ಪೂರ್ಣ ಮೊತ್ತವನ್ನು ಷರತ್ತು ಬದ್ಧವಾಗಿ ಪಾವತಿಸಲು ಬದ್ಧನಾಗಿದ್ದು, ಈ ನನ್ನ ಮನವಿಯನ್ನು ದಯವಿಟ್ಟು ಒಪ್ಪಿಕೊಳ್ಳಿ. ನನ್ನ ವಿರುದ್ಧದ ಎಲ್ಲ ಪ್ರಕರಣಗಳನ್ನು ಮುಚ್ಚಿ’ ಎಂದು ವಿಜಯ ಮಲ್ಯ ಭಾರತ ಸರಕಾರಕ್ಕೆ ಮನವಿ ಮಾಡಿದ್ದಾನೆ.