2022ರ ಆಸ್ಕರ್ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ
Team Udayavani, Oct 21, 2021, 11:00 PM IST
ಕೋಲ್ಕತಾ: ತಮಿಳು ಹಾಸ್ಯ ನಟ ಯೋಗಿ ಬಾಬು ಅಭಿನಯಿಸಿರುವ “ಮಂಡೇಲಾ’ ಹಾಗೂ ಮಲಯಾಳಂನ “ನಯತ್ತು’ ಚಿತ್ರಗಳು, 2022ರ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಸ್ಪರ್ಧಿಸಲಿರುವ ಚಿತ್ರಗಳ ಪಟ್ಟಿಯಲ್ಲಿ ಸ್ಥಾನಪಡೆದಿವೆ.
ಇದರೊಂದಿಗೆ, ಬಾಲಿವುಡ್ ನಟಿ ವಿದ್ಯಾಬಾಲನ್ ಅಭಿನಯದ “ಶೇರ್ನಿ’, ನಟ ವಿಕ್ಕಿ ಕೌಶಲ್ ಅಭಿನಯದ “ಸರ್ದಾರ್ ಉಧಮ್’ ಚಿತ್ರಗಳೂ ಇದೇ ಪಟ್ಟಿಯಲ್ಲಿ ಜಾಗ ಕಂಡುಕೊಂಡಿವೆ. ಇವುಗಳಲ್ಲಿ “ಸರ್ದಾರ್ ಉಧಮ್’ ಚಿತ್ರ ಇತ್ತೀಚೆಗಷ್ಟೇ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿದೆ.
ಸ್ಪರ್ಧಾಕಣದಲ್ಲಿ ಭಾರತದ ವಿವಿಧ ಭಾಷೆಗಳ ಒಟ್ಟು 14 ಚಿತ್ರಗಳಿದ್ದು ಮಲಯಾಳಂನ ಹಿರಿಯ ಚಿತ್ರ ನಿರ್ದೇಶಕ ಶಾಜಿ. ಎನ್. ಕರುಣ್ ನೇತೃತ್ವದ ಆಯ್ಕೆ ಸಮಿತಿ ಈ ಎಲ್ಲಾ ಚಿತ್ರಗಳನ್ನು ವೀಕ್ಷಿಸಿ, ಆಸ್ಕರ್ಗೆ ಅರ್ಹತೆಯುಳ್ಳ ಚಿತ್ರಗಳನ್ನು ಪ್ರತ್ಯೇಕಿಸುತ್ತಿದೆ. ಅವುಗಳಲ್ಲಿ ಈವರೆಗೆ ಮೇಲಿನ ನಾಲ್ಕು ಚಿತ್ರಗಳು ಆಯ್ಕೆಯಾಗಿವೆ.
ಇನ್ನೂ ಕೆಲವು ಚಿತ್ರಗಳು ಆಯ್ಕೆಯಾಗಬಹುದಾಗಿದ್ದು, ಕೊನೆಗೆ ಅವುಗಳಲ್ಲೊಂದು ಆಸ್ಕರ್ನ “ಶ್ರೇಷ್ಠ ವಿದೇಶಿ ಚಿತ್ರ’ ವಿಭಾಗಕ್ಕೆ ಭಾರತದಿಂದ ನಾಮನಿರ್ದೇಶನಗೊಳ್ಳಲಿದೆ.
ಇದನ್ನೂ ಓದಿ :ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ
Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್ʼ
“ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್ ಜೊತೆ ಬೇಬೋ ನಟಿಸೋದು ಪಕ್ಕಾ?
ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ
ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ