ಮೂರು ದಿವಸ ಆತ್ರಿ ಮಗ ಊಟ ಮಾಡಿಲ್ಲ : ಉಕ್ರೇನ್ ನಲ್ಲಿ ಸಿಲುಕಿದ ವಿದ್ಯಾರ್ಥಿಯ ತಾಯಿಯ ಅಳಲು
Team Udayavani, Mar 4, 2022, 6:55 PM IST
ರಬಕವಿ-ಬನಹಟ್ಟಿ: ಮಗನಿಗೆ ಮೂರು ದಿವಸ ಆತ್ರಿ ಊಟ ಮಾಡಿಲ್ಲ. ಇಟ್ಟುಕೊಂಡಿದ್ದ ಬಿಸ್ಕಿಟ್ ಮತ್ತು ಚಾಕಲೇಟ್ ಕೂಡಾ ಮುಗದಾವ್ರಿ. ಗುರುವಾರ ಸಂಜೆ ಯಾವುದೊ ಒಂದು ತರಕಾರಿ ಸೂಪ್ ಕೊಟ್ಟಾರಿ. ಅಷ್ಟರ ಮ್ಯಾಲ ನಮ್ಮ ಮಗಾ ಅದಾನ್ರಿ ಎಂದು ಉಕ್ರೇನ್ ನಲ್ಲಿರುವ ನಾವಲಗಿಯ ಕಿರಣ ಸವದಿಯವರ ತಾಯಿ ಮಹಾದೇವಿ ಸವದಿ ಪತ್ರಿಕೆಯ ಜೊತೆಗೆ ತಮ್ಮ ಅಳಲನ್ನು ಹಂಚಿಕೊಂಡರು.
ಶುಕ್ರವಾರ ನಾವಲಗಿ ಗ್ರಾಮದ ಕಿರಣ ಸವದಿಯವರ ಮನೆಗೆ ಪತ್ರಕರ್ತರು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪತ್ರಕರ್ತರ ಜೊತೆಗೆ ಮಾತನಾಡಿದರು.
ಯುದ್ಧ ಪ್ರಾರಂಭವಾದಾಗಿನಿಂದ ಮಗನದೆ ಚಿಂತೆಯಾಗಿದೆ. ಪ್ರತಿ ಗಂಟೆಗೆ ಒಂದು ಸಲಾ ಫೋನ್ ಮಾಡಿ ಮಾತನಾಡುತ್ತಾನೆ. ಫೋನ್ನಲ್ಲಿ ಅವನ ಮುಖಾ ನೋಡಿದ ಕೂಡಲೇ ತಾಯಿ ಕಣ್ಣಲ್ಲಿ ನೀರು ತುಂಬುತ್ತದೆ.
ಇದೇ ಸಂದರ್ಭದಲ್ಲಿ ತಂದೆ ಲಕ್ಷ್ಮಣ ಮಗನ ಜೊತೆ ಮಾತನಾಡುತ್ತ, ತಮ್ಮ ದೇವರ ಧ್ಯಾನ ಮಾಡು, ಅವನ ಮೇಲೆ ಭಾರ ಹಾಕು. ಅವನೆ ಕಾಪಾಡಾತ್ತಾನೆ ಧೈರ್ಯದಿಂದ ಇರು ಎಂದು ಮಗನಿಗೆ ತಿಳಿಸಿದರು.
ಮಧ್ಯರಾತ್ರಿಯವರೆಗೂ ಟಿ.ವಿ. ಮೂಲಕ ಯುದ್ಧದ ಪರಿಸ್ಥಿತಿಯನ್ನು ಮನೆಯವರು ಕುಳಿತುಕೊಂಡು ನೋಡುತ್ತಾರೆ. ದಿನನಿತ್ಯ ಮನೆಗೆ ಭೇಟಿಯಾಗಲು ಬರುವ ಹತ್ತಾರು ಜನರಿಗೆ ಮಗನ ಬಗ್ಗೆ ಹೇಳುತ್ತಾರೆ. ಮನೆಯ ಜನರಿಗೆ ಊಟ ರುಚಿ ಹತ್ತುತ್ತಿಲ್ಲ. ಎಲ್ಲ ಮಕ್ಕಳು ಸುರಕ್ಷೀತವಾಗಿ ಬರಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ತಂದೆ ಲಕ್ಷ್ಮಣ ತಿಳಿಸಿದರು.
ಇದನ್ನೂ ಓದಿ : ಪಾವಗಡ : ಪ್ರೋತ್ಸಾಹಧನ ನೀಡಲು ಹಣಕ್ಕೆ ಬೇಡಿಕೆ ಇಟ್ಟ ವ್ಯಕ್ತಿ ಎಸಿಬಿ ಬಲೆಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
MUST WATCH
ಹೊಸ ಸೇರ್ಪಡೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ