ಟೀ ಮಾರುವವನ ಮಗಳೀಗ ಏರ್ ಫೋರ್ಸ್ ಅಧಿಕಾರಿ
Team Udayavani, Jun 24, 2020, 11:00 AM IST
ಮಧ್ಯ ಪ್ರದೇಶ: ಬಡತನ ಎಂಬುದು ವಿದ್ಯೆ ಮತ್ತು ಯಶಸ್ಸಿಗೆ ಬೇಲಿ ಹಾಕುವುದಿಲ್ಲ, ಸಾಧಿಸುವ ಛಲ ಇದ್ದರೆ ಎಂಥ ಸಮಸ್ಯೆಗಳನ್ನು ಬೇಕಾದರೂ ದಿಟ್ಟಿಸಿ ನಡೆಯಬಹುದು ಎಂಬುದನ್ನು ಯುವತಿಯೋರ್ವಳು ಸಾಭೀತು ಪಡಿಸಿದ್ದಾಳೆ.
ಬದುಕಿನ ಹಾದಿಯಲ್ಲಿ ಎದುರಾಗುವ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಬಡ ಕುಟುಂಬದ ಈ ಯುವತಿ ಏರ್ ಫೋರ್ಸ್ ಅಧಿಕಾರಿಯಾಗಿ ನೇಮಕಗೊಂಡಿದ್ದು, ತನ್ನ ಸಾಧನೆ ಮೂಲಕ ದೇಶದ ಮನೆ ಮಾತಾಗಿದ್ದಾಳೆ.
ಕಂಡ ಕನಸನ್ನು ಸಾಕಾರ ಮಾಡಿಕೊಂಡ ಯುವತಿ
ಮಧ್ಯ ಪ್ರದೇಶದ ನೀಮುಚ್ ಜಿಲ್ಲೆಯ ಯುವತಿ ಆಂಚಲ್ ಗಂಗ್ವಾಲ್ ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದು, ಟೀ ಮಾರುವವನ ಮಗಳಾಗಿ, ಬಡಕುಟುಂಬದ ಎಲ್ಲ ಅಡ್ಡಿ ಆತಂಕಗಳನ್ನು ದಿಟ್ಟಿಸಿ ನಿಂತು ಛಲ ಬಿಡದೇ ಗುರಿ ಸಾಧಿಸಿದ್ದಾಳೆ .
ರಾಷ್ಟ್ರಪತಿಗಳ ಕೈಯಿಂದ ಪ್ರಶಂಸಾ ಪತ್ರ
ಇನ್ನು ಭಾರತೀಯ ವಾಯುಪಡೆಗೆ ಮಧ್ಯ ಪ್ರದೇಶ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿಯಾದ ಈಕೆ ಏರ್ಫೋರ್ಸ್ ಫ್ಲೈಯಿಂಗ್ ಆಫೀಸರ್ ಆಗಿ ನೇಮಕವಾಗಿದ್ದು, ಹೈದರಾಬಾದ್ನ ದುಂಡಿಗಲ್ನ ಇಂಡಿಯನ್ ಏರ್ಪೋರ್ಸ್ ಅಕಾಡೆಮಿಯಲ್ಲಿ ನಡೆದ ಗ್ರಾಜುಯೇಶನ್ ಪರೇಡ್ ಸಮಾರಂಭದಲ್ಲಿ ಆಂಚಲ್ಗೆ ರಾಷ್ಟ್ರಪತಿಗಳು ಪ್ರಶಂಸಾ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಒಟ್ಟು 123 ಫ್ಲೈಟ್ ಕೆಡೆಟ್ಗಳನ್ನು ಈ ಸಮಾರಂಭದಲ್ಲಿ ಏರ್ಫೋರ್ಸ್ ಫ್ಲೈಯಿಂಗ್ ಅಧಿಕಾರಿಗಳಾಗಿ ಆಯ್ಕೆ ಮಾಡಿದ್ದು, ಆ 123 ಜನರ ಪೈಕಿ ಆಂಚಲ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.
ಟೀ ಅಂಗಡಿ ಮೂಲಕ ಜೀವನ ನಡೆಸುವ ತಂದೆ
ಆಂಚಲ್ ತಂದೆ ಸುರೇಶ ಗಂಗ್ವಾಲ್, ನೀಮುಚ್ ಜಿಲ್ಲೆಯಲ್ಲಿ ಚಿಕ್ಕ ಟೀ ಅಂಗಡಿಯೊಂದನ್ನು ನಡೆಸುತ್ತ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಮೂವರು ಮಕ್ಕಳಿಗೆ ಯಾವುದೇ ಕುಂದು ಕೊರತೆ ಬರದಂತೆ ನೋಡಿಕೊಳ್ಳುವುದರೊಂದಿಗೆ ಉತ್ತಮ ಶಿಕ್ಷಣವನ್ನು ನೀಡಿದ್ದಾರೆ.
ಪೊಲೀಸ್ ಇಲಾಕೆಯಲ್ಲಿ ಸೇವೆ
ಫ್ಲೈಯಿಂಗ್ ಆಫೀಸರ್ ಆಂಚಲ್ ನೀಮುಚ್ನ ಸೀತಾರಾಮ ಜಾಜು ಸರಕಾರಿ ಹೆಣ್ಣು ಮಕ್ಕಳ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದು, ಆಂಚಲ್ ಮಧ್ಯ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸಪೆಕ್ಟರ್ಹಾಗೂ ಕಾರ್ಮಿಕ ಇಲಾಖೆಯಲ್ಲಿ ಲೇಬರ್ ಇನ್ಸಪೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಪದವಿ ಶಿಕ್ಷಣ ಪೂರೈಸಿದ ಕೂಡಲೇ ಎಎಫ್ಸಿಎಟಿ ,ಎಸ್ಎಸ್ಬಿ ಸೇರಿದಂತೆ ವಿವಿಧ ಸ್ಪರ್ಧಾತ್ಮಾಕ ಪರೀಕ್ಷೆಗಳನ್ನು ಎದುರಿಸುತ್ತಿದ್ದ ಆಂಚಲ್ ಆರನೇ ಬಾರಿಯ ಪರೀಕ್ಷೆಯ ನಂತರ ಯಶಸ್ಸು ಪಡೆದುಕೊಂಡಿದ್ದು, ಈಕೆಯ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ